Friday, January 19, 2018

ಬೆಳಗು - ಬೆರಗು

2014 ರ ಏಪ್ರಿಲ್ ತಿಂಗಳ ನಂತರ ಇಲ್ಲಿನ ನನ್ನ ಬರವಣಿಗೆಗೆ ಅಲ್ಪ(?) ವಿರಾಮ ದೊರೆತಿರುವುದರ ಅರಿವಿದ್ದರೂ ಸಹ ಅದು ನಾಲ್ಕು ವರ್ಷಗಳಷ್ಟು ಸುದೀರ್ಘವಾಗಿದೆ ಎಂಬುದರ ಪರಿವೆಯೇ ಇರಲಿಲ್ಲ! ದಿನಗಳು ತ್ವರಿತವಾಗಿ ಕಳೆದುಹೋಗುತ್ತಿವೆಯೋ, ಅಥವಾ ಜೀವನವೆಂಬ ಕತ್ತಲೆ-ಬೆಳಕಿನ ಆಟದ ಕೈಗೊಂಬೆಯಾಗಿ ನಾನೇ ಕಳೆದುಹೋಗುತ್ತಿದ್ದೇನೋ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಬಹುದಿನಗಳ ನಂತರ ಇಂದು ನನ್ನನ್ನು ಭೇಟಿಮಾಡಿದ ಹಿರಿಯರೊಬ್ಬರ "ಏನು, ಕೂದ್ಲಿಗೆ ಡೈ ಹಾಕಿದ್ದೀರಾ?" ಪ್ರಶ್ನೆಗೆ ನಗುವೇ ಉತ್ತರವಾದಾಗ "ಏಜ್ ಫ್ಯಾಕ್ಟರ್.." ಎನ್ನುತ್ತಾ ಮುಗುಳ್ನಕ್ಕರು. ಆ ಮುಗುಳ್ನಗೆಯಲ್ಲಿ ವಿಶಾಲವಾದ ಜೀವನಾನುಭವದ ದಿವ್ಯದರ್ಶನವಾಯಿತು; ನಾನೂ ಮುಗುಳ್ನಕ್ಕೆ..

ಕಳೆದೆರಡು ದಿನಗಳ ಹಿಂದೆ, ....... (ಅವರನ್ನು ಏನೆಂದು ಗುರುತಿಸುವುದು? ಹೆಸರು ಹೇಳಲು ವಯಸ್ಸಿನಲ್ಲಿ ನಾನು ಹಿರಿಯನಲ್ಲ; ಸ್ನೇಹಿತರೆನ್ನಲು ಸಮವಯಸ್ಕನಲ್ಲ; ಸಹೋದ್ಯೋಗಿ ಎನ್ನಲು ಮನಸ್ಸು ಒಪ್ಪುತ್ತಿಲ್ಲ; ಸರಿ, ಹಿಗೆನ್ನೋಣ.....) ಕಳೆದೆರಡು ದಿನಗಳ ಹಿಂದೆ, ನನ್ನ ಮಾರ್ಗದರ್ಶಕರೊಬ್ಬರು 'ಬೆಳಗು' ಎಂಬ ಪದದ ಅರ್ಥವನ್ನು ಅರಸುತ್ತಾ ನನಗೆ ಕಿರುಸಂದೇಶ ಕಳುಹಿಸಿದ್ದರು. ತತ್ಕ್ಷಣಕ್ಕೆ ಏನೂ ಹೊಳೆಯದಿದ್ದಾಗ, "ಯಾವುದೇ ಪದದ ಅರ್ಥವು ಗ್ರಹಿಸುವವರನ್ನವಲಂಬಿಸಿ ವಿಸ್ತಾರವಾಗಿ ರೂಪುಗೊಳ್ಳುತ್ತದೆ. ಶಬ್ಧಕೋಶದಲ್ಲಿರುವ ಅರ್ಥವನ್ನು ನಂತರ ತಿಳಿಸುತ್ತೇನೆ" ಎಂದಷ್ಟೇ ಉತ್ತರಿಸಿದೆ. 'ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು' ಅಲ್ಲವೇ?

ನನಗೆ ಕಳುಹಿಸಲಾಗಿದ್ದ ಕಿರುಸಂದೇಶದಲ್ಲಿ 'ಬೆಳಗು' ಪದದ ಕೆಲವೊಂದು ಅರ್ಥವನ್ನು ಹೀಗೆ ವ್ಯಾಖ್ಯಾನಿಸಲಾಗಿತ್ತು: Benevolent; Efforts to contribute to; Life; Around us with; Greater; Understanding. ಮೇಲಿನ ವ್ಯಾಖ್ಯಾನಗಳನ್ನು ಪದೇ ಪದೇ ಓದಿಕೊಂಡೆ; ನನ್ನ ಊಹೆಯು ಸುಳ್ಳಾಗುತ್ತಲೇ ಹೋಯಿತು. ಪ್ರತೀ ಬಾರಿ ಓದಿಕೊಂಡಾಗಲೂ ಸಹ ಪ್ರತಿಯೊಂದು ವ್ಯಾಖ್ಯಾನವೂ ಮೂಲ ಪದದಿಂದ ಹೆಚ್ಚು ಹೆಚ್ಚು ವಿಭಿನ್ನವಾಗಿ ಗೋಚರಿಸತೊಡಗಿತು. ಎರಡು ದಿನ ಕಳೆದಿದೆ; ಇಂದಿಗೂ ಸಹ 'ಬೆಳಗು' ಪದಕ್ಕೂ, Benevolent; Efforts to contribute to; Life; Around us with; Greater; Understanding ಪದಗಳಿಗೂ ಕಿಂಚಿತ್ತೂ ಜೋಡಣೆ ನನ್ನಿಂದ ಸಾಧ್ಯವಾಗಿಲ್ಲ! ನನ್ನ ಸೀಮಿತ ಅರ್ಥಗ್ರಹಣೆಗೆ ಹೊಣೆ ಯಾರು?

ಕೊನೆಗೆ, ಶಬ್ಧಕೋಶದ ಮೊರೆಹೋದ ನನಗೆ ಸ್ವಲ್ಪ ಸಮಾಧಾನ ದೊರೆಯದೇ ಇರಲಿಲ್ಲ.

ಬೆಳಗು 
ನಾಮಪದ: ಕಾಂತಿ; ಪ್ರಾತಃಕಾಲ; ಹಗಲು; ಅರಿವು; ಜ್ಞಾನ
ಕ್ರಿಯಾಪದ: ಹೊಳೆ; ಪ್ರಕಾಶಿಸುವಂತೆ ಮಾಡು; ದೀಪವನ್ನು ಹಚ್ಚು; ಸ್ವಚ್ಛಮಾಡು

ಆದರೂ, ಅಂತರಾಳದಲ್ಲಿರುವ ಅಲ್ಪಜ್ಞಾನಿಗೆ 'ಬೆಳಗು' ಪದಕ್ಕೂ, Benevolent; Efforts to contribute to; Life; Around us with; Greater; Understanding ವ್ಯಾಖ್ಯಾನಗಳಿಗೂ ಸಂಬಂಧ ಬೆಸೆಯುವ ತವಕ. ಆಪತ್ಬಾಂಧವ Google ನ ಮೊರೆ ಹೋದೆ. ಮೊದಲಿಗೆ, 'ಬೆಳಗು' ಪದದ ವ್ಯಾಖ್ಯಾನವನ್ನು ಹುಡುಕಲು, Google ಕೊಟ್ಟ ಉತ್ತರಗಳು:

outshine: ಪ್ರಕಾಶಿಸು, ಮೀರಿಸಿ-ಹೊಳೆ
illuminate: ಬೆಳಗಿಸು, ಬೆಳಕು ಮಾಡು, ಪ್ರಕಾಶಗೊಳಿಸು, ಬೆಳಕು ಕೊಡು 
burnish: ಒಪ್ಪಹಾಕು, ಮೆರುಗು ಕೊಡು
elucidate: ಸ್ಪಷ್ಟಪಡಿಸು, ಪ್ರಕಾಶಬೀರು
irradiate: ಹೊಳೆ

ಎಂದಿನಂತೆ  Google ತಕ್ಕಮಟ್ಟಿಗೆ ಕನ್ನಡ ಪದದ ವಿಸ್ತಾರವಾದ ಭಾವಾರ್ಥವನ್ನು ಹಿಡಿದುಕೊಡುವಲ್ಲಿ ಯಶಸ್ಸು ಗಳಿಸಿತ್ತು. ಇದರೊಂದಿಗೆ 'ಬೆಳಗು' ಪದದ ಅರ್ಥವೂ ಸಹ ನನ್ನ ಅರಿವಿನಲ್ಲಿ ವಿಸ್ತಾರವಾಗುತ್ತಾ ಸಾಗಿತ್ತು.

ಇಷ್ಟಕ್ಕೇ ಅದೇಕೋ ಸಮಾಧಾನವಿರಲಿಲ್ಲ.. ಇನ್ನೇನೋ ತಿಳಿಯುವ ತವಕ. Google ಸದಾ ಸಿದ್ಧ! Benevolent ಪದದ ಮೂಲ Google ನಲ್ಲಿ ಹೀಗಿದ್ದಿತು:

 
ಅರ್ಥ:
1. adjective: well meaning and kindly.
2. (of an organization) serving a charitable rather than a profit-making purpose.
(synonyms:charitable, non-profit-making, non-profit, not-for-profit)

Benevolent ಪದಕ್ಕೆ Google ಕೊಟ್ಟ ಎರಡನೇ ವ್ಯಾಖ್ಯಾನ ನನ್ನನ್ನು 'ಬೆರಗು'ಗೊಳಿಸಿತ್ತು! 'ಬೆಳಗು', 'Benevolent', 'Well wishing', 'Kind', 'Charity' - ಅದೆಂಥಾ ಅರ್ಥೈಕೆ..

'ಬೆಳಗು' - ಇದು ನಮ್ಮ ಮಾರ್ಗದರ್ಶಿಗಳಾದ ಮತ್ತೊಬ್ಬ ಹಿರಿಯರು ಸ್ಥಾಪಿಸಲು ಹೊರಟಿರುವ ಸಮಾಜಸೇವಾ ಸಂಸ್ಥೆಯ ಹೆಸರು. ಈ ಪದಕ್ಕೆ, ಸಂಸ್ಥೆಯ ಉದ್ದೇಶದ ಹಿನ್ನೆಲೆಯಲ್ಲಿ, ಆಳವಾದ ಮತ್ತು ವಿಸ್ತಾರವಾದ ಅರಿವಿನಿಂದ Benevolent ಎಂದು ವ್ಯಾಖ್ಯಾನಿಸಿರುವುದು ನನ್ನಂತಹವನಿಗೆ ಕಬ್ಬಿಣದ ಕಡಲೆಯೇ ಸರಿ; ಈ ರೀತಿಯ ಆಳವಾದ ಚಿಂತನೆಯಿಂದ ಅರ್ಥ-ಮಹತ್ವ ಕಲ್ಪಿಸುವುದು ಸಾಮಾನ್ಯ ಸಾಧ್ಯವಲ್ಲ. Benevolent ಎಂಬ ಒಂದೇ ಒಂದು ವ್ಯಾಖ್ಯಾನದ ಹಿಂದಿರುವ ವಿಶಾಲ ಅರ್ಥೈಕೆಯನ್ನು ಸಂಪೂರ್ಣವಾಗಿ ಅರಗಿಸಿಕೊಳ್ಳಲು ನನಗಿನ್ನೂ ಸಾಧಯವಾಗಿಲ್ಲ. ಹೀಗಿರುವಾಗ, ಉಳಿದ ವ್ಯಾಖ್ಯಾನಗಳ ಗೋಜಿಗೆ ಹೋದೇನೆ? ಸಧ್ಯಕ್ಕಂತೂ ಒಲ್ಲೆ.

Wednesday, April 30, 2014

The tough WOMB

A very usual day in one of the villages of Srinivasapura taluk in Kolar district; 'she' was happily moving along the walk-path of her village's highway, which connected itself to the district headquarters further ahead. It has been her daily chore to set out for a casual walk once in the morning and again in the evening, since she was declared pregnant. At least one family member would accompany her every single time she set herself out since then. They were all excited for the fact that she was carrying her first ever child in her 'womb', so she was.

It was a well-off family, the head of which was an ex Zilla Panchayat President. She had no real pressure on herself in any aspect, unlike many others of her kind in the village. The only challenge for her was to safeguard her young little one who was gradually growing within her, to birth. They never seemed to have bothered whether it would be a 'boy' or a 'girl'; all they honestly wanted was to see her family tree grow, 'lucky, I am..' she thought. She was right!

'She looks near to term..?' asked a passing by villager. 'Yes, she is.. expected anytime in a week or so..' said her family member. Her pulse gained pace, without her knowledge. She was excited, knowing that 'the day' which would make a huge difference in her life was not too far. The little one kicked from inside in response to her excitement, they both already had the 'chemistry' set in. While subconsciously she moved a little away making way for the moving tractor, something banged her belly really hard.. before one could realize what was happening around, she was found deep in the nearby dug trench being unable to make a move. It took a while for her family member to recover from the incidental shock, who at once took her out with the help of others around. 'Are you fine??.. Nothing happened to you right??.. Does it pain.. ' - she could hardly respond to those questions shot at once.. pain from within the womb was unbearable until she lost conscious.

While I washed my hands coming out of the small animal OT following a surgery, my eyes naturally stared at the wall clock. It easily stuck the half past twelve mark; making me recall what my wife had packed for lunch today.. with love, obviously. A pregnant sheep walking with lot of pain into the OPD ward interrupted my preparedness for lunch. I walked closer..

"What is the problem?" asked our Professor.
"She is pregnant, almost term. Met with an accident.. a tractor banged her and she is in immense pain since then" replied the accompanying owner.
"When did this happen?"
"Yesterday morning.."
"Oh! What made you take so long in seeking medical care?"
"We are coming from a far off place, near Srinivasapura.."

The severity of the accident was too much, the abdominal muscles seemed to have given away and some parts of the foetus were pressing out on the skin at belly. The animal experienced severe pain on palpation. No parts of the lamb were felt in the birth canal, which ruled out the possibilities of going in for an assisted delivery. An ultrasound scan couldn't really help us to know whether the lamb was still alive inside; we knew that it would get too late if going for a detailed investigation. A word was soon given to get the OT prepared for surgery.

"Are you sure she is almost term?" I asked.
"Yes, she is.." owner replied.
It was my responsibility to make it clear to the owner that 'all is not well'. I continued.
"We are not sure if the lamb is alive inside. But still, we have no other way than going in for an elective c-section"
"No problem.. she is one among our family members. She has been so good to gain all our love and affection. No matter the lamb is alive or not, we want to get her well soon.."
"Seeing her condition, it is doubtful that she will eventually recover after surgery. The condition is really worse.." - I was in a hurry to convey the message, since it was all set for surgery in OT.
"Please try your possible best sir.. rest is left to the almighty.." owner's words were really touching.
"Sure, we will.."

While wearing the gloves, I looked in to her eyes. She found it hard even to blink her eyelids, could feel the pinch of immense pain she was undergoing for so long a time. Whether it really was or it did seemed so to me - her eyes were full with tears of pain. She closed her eyes more than she kept it open."Ready.." - signal from anesthetist brought me back to the real world. It took very less time to incise the skin; muscle layers had all given away as expected. Contusions made the bulk of intact muscle layers, they were literally crushed in to pieces. Later, it would definitely pose a real challenge to get them opposed and close. To our surprise, the uterus had no injury whatsoever! Not a small tear or scratch! It was strong enough bearing all the physical damage to save the life within!! I incised the uterus and took out the lamb. It was alive!! We couldn't believe this.. thanks to 'Nature' for making such a safe and tough womb!! Rest was all more tougher.. it was practically impossible to end the reconstructive surgery in a positive note. While I came out of the OT, the healthy active lamb brought a smile on my worried face..
out of the tough womb..
Handing over the discharge summary to the owner, he was informed that the chances of sheep recovering from surgery was highly questionable. With a small hope of good, the owner shifted the sheep to the boot space of his vehicle.

The wall clock ran a few minutes past three.. it was only then I remembered my forgotten lunch. "It's well past lunch time.." my wife seemed yelling at me. "Oh!!..", suddenly it stuck my mind that none of us had even bothered to show the lamb to his mother.. how could we be so mean?! By the time I rushed to the front desk, their vehicle was passing out of the hospital gate..

For whom the poor mother had to suffer so long and saved by sacrificing her own life, I strongly doubt if she could even get a chance to have him looked at; won't the brave mom curse us for this?? Sigh..

Monday, October 21, 2013

ರಾಗಿ ಬ್ರಹ್ಮರ ಕುರಿತ ಚಾರಿತ್ರಿಕ ಕೃತಿ

ಮಡದಿ ಹಾಗೂ ಮಗಳನ್ನು ಭೇಟಿ ಮಾಡಲು ದೆಹಲಿಗೆ ತೆರೆಳಿದ್ದೆನು; ಅಲ್ಲಿ ಕಳೆದ ಏಳು ದಿನಗಳು ಕೇವಲ ಏಳು ಘಂಟೆಗಳಂತೆ ಉರುಳಿಹೋಗಲಾಗಿ, ಹಿಂತಿರುಗಿ ಬೆಂಗಳೂರಿಗೆ ಪಯಣಿಸಲು ಅಣಿಯಾಗುತ್ತಿರುವಾಗ ನನ್ನ ಬಗಲಚೀಲವನ್ನು ಹಿಡಿದು ನನ್ನಾಕೆ "ಏಕಿಷ್ಟು ಭಾರ?" ಎಂದು ಪ್ರಶ್ನಿಸುತ್ತಿರುವಾಗಲೇ ಆಕೆಗೆ ಅದರ ಕಾರಣದ ಅರಿವಾಗಿದ್ದಿರಬೇಕು. "ಓದಲು ಕೆಲವು ಪುಸ್ತಕಗಳನ್ನು ತಂದಿದ್ದೆ.." ನನ್ನ ಮಾತುಗಳನ್ನು ಮುಗಿಸುವ ಮುನ್ನವೇ ಕಂಡ ಆಕೆಯ ಮುಗುಳ್ನಗು 'ನೀವು ಎಂದಿಗೂ ಬದಲಾಗಲಾರಿರಿ..' ಎಂದಂತೆ ಭಾಸವಾಯಿತು. ಅಲ್ಲಿದ್ದ ಐದು ಪುಸ್ತಕಗಳಲ್ಲಿ ನಾನು ಬಹುದಿನಗಳಿಂದ ಒಂದೇ ಹಿಡಿತದಲ್ಲಿ ಓದಿ ಮುಗಿಸಲು ಉದ್ದೇಶಿಸಿದ್ದ 'ರಾಗಿ ಲಕ್ಷ್ಮಣಯ್ಯ'ನವರ ಕುರಿತಾದ ಕೃತಿಯೂ ಒಂದು.

ಸಾಮಾನ್ಯವಾಗಿ ನಾನು ಪುಸ್ತಕಗಳನ್ನು ಸಂಗ್ರಹಿಸುವಾಗ ಅದರಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಲೇಖಕರ ಹಸ್ತಾಕ್ಷರವನ್ನು ಪಡೆದುಕೊಳ್ಳುವುದು ರೋಢಿ; ಈ ಪುಸ್ತಕವೂ ಇದಕ್ಕೆ ಹೊರತಾಗಿರಲಿಲ್ಲ. "ಪ್ರೀತಿಯಿಂದ ಡಾ. ಪ್ರಶಾಂತ್ ರವರಿಗೆ – ಡಾ. ಎಂ. ನಾರಾಯಣಸ್ವಾಮಿ" ಎಂಬ ಹಸ್ತಾಕ್ಷರದ ಹಿಂದಿದ್ದ ಆತ್ಮೀಯತೆಯು ಕೃತಿಯ ಮೇಲಿನ ನನ್ನ ಪ್ರೀತಿಯನ್ನು ಇಮ್ಮಡಿಗೊಳಿಸಿತ್ತು. ದೆಹಲಿಗೆ ಹೊರಟು ಹಿಂತಿರುಗಿ ಬೆಂಗಳೂರಿಗೆ ಮರಳುವುದರೊಳಗೆ ಈ ಪುಸ್ತಕವನ್ನು ಶ್ರದ್ಧೆಯಿಂದ ಓದಿ, ಅದರ ಬಗೆಗಿನ ನನ್ನ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳುವಂತಾದದ್ದು ಹರ್ಷದ ಸಂಗತಿ.

ಈ ಹೊತ್ತಿಗೆ ನಿಮ್ಮ ಅರಿವನ್ನು "ರಾಗಿ ಲಕ್ಷ್ಮಣಯ್ಯ ಎಂದರೆ ಯಾರು..?" ಎಂಬ ಪ್ರಶ್ನೆಯು ಆವರಿಸಿದ್ದಿರಬಹುದು! ಬಹುಶಃ ಪ್ರೊ. ಎಂ. ನಾರಾಯಣಸ್ವಾಮಿ ಹಾಗೂ ರಮೇಶ್ ಸಂಕ್ರಾಂತಿ ಇವರುಗಳು ಸಂಪಾದಿಸಿರುವ 'ತೆನೆ ಮರೆಯ ಕ್ರಾಂತಿ ರಾಗಿ ಲಕ್ಷ್ಮಣಯ್ಯ – ಇಂಡಾಫ್ ರಾಗಿ ತಳಿಗಳ ಕಂಡುಹಿಡಿದ ವಿಜ್ಞಾನಿ' ಎಂಬ ಕೃತಿಯು ಕಳೆದ ಡಿಸೆಂಬರ್ ಅಂತ್ಯದಲ್ಲಿ ಲೋಕಾರ್ಪಣೆಗೊಳ್ಳದೇ ಹೋಗಿದ್ದರೆ, ಅವಿರತವಾಗಿ ರಾಗಿ ತಳಿ ಅಭಿವೃದ್ಧಿಯಲ್ಲಿ ಮೌನ ಕ್ರಾಂತಿ ನಡೆಸಿದ ಸಂತ ವಿಜ್ಞಾನಿ ಡಾ. ಸಿ. ಹೆಚ್. ಲಕ್ಷ್ಮಣಯ್ಯನವರ ಬಗ್ಗೆ ತಿಳಿದುಕೊಳ್ಳುವ ಸೌಭಾಗ್ಯ ನನ್ನಂತೆ ಇನ್ನೂ ಅನೇಕ ಕನ್ನಡಿಗರಿಗೆ ಖಂಡಿತವಾಗಿಯೂ ಒದಗಿ ಬರುತ್ತಿರಲಿಲ್ಲವೇನೋ.. ಈ ನಿಟ್ಟಿನಲ್ಲಿ ಲೇಖಕರುಗಳದ್ದು ಅದ್ವಿತೀಯ ಸಾಧನೆಯೆಂದೇ ಹೇಳಬೇಕು.

ಪರಕೀಯ ಪರಾಗಸ್ಪರ್ಶಕ್ಕೆ ತೆರೆದುಕೊಳ್ಳದ ರಾಗಿ ಬೆಳೆಯ ತಳಿ ಅಭಿವೃದ್ಧಿಯು ಅಸಾಧ್ಯವೆಂದು ಇಡೀ ಪ್ರಪಂಚವೇ ಕೈಚೆಲ್ಲಿ ಕೂತರೂ, ಡಾ. ಲಕ್ಷ್ಮಣಯ್ಯನವರು ತಮ್ಮ ಛಲಬಿಡದ ನಿರಂತರ ಸಂಶೋಧನೆಯಿಂದಾಗಿ 'ವಿಶೇಷ ಸಂಪರ್ಕ ವಿಧಾನ'ವನ್ನು ಆವಿಷ್ಕರಿಸಿ, ರಾಗಿ ಬೆಳೆಯ ತಳಿ ಅಭಿವೃದ್ಧಿಯಲ್ಲಿ ಯಶಸ್ಸು ಗಳಿಸಿದರು. ಇವರು ಅಭಿವೃದ್ಧಿಪಡಿಸಿದ ಅರುಣ, ಅನ್ನಪೂರ್ಣ, ಉದಯ, ಕಾವೇರಿ ರಾಗಿ ತಳಿಗಳು ಸಾಂಪ್ರದಾಯಿಕ ರಾಗಿ ತಳಿಗಳಿಗಿಂತ ಉತ್ಕೃಷ್ಟವಾಗಿವೆ. ಅಲ್ಲದೇ, ಸ್ಥಳೀಯ ರಾಗಿ ಬೆಳೆ ಹಾಗೂ ಆಫ್ರಿಕ ಮೂಲದ ರಾಗಿ ಬೆಳೆಗಳ ಸಂಕರಣದಿಂದ ಇವರು ಅಭಿವೃದ್ಧಿಪಡಿಸಿದ 'ಇಂಡಾಫ್' - 1 ರಿಂದ 15 ತಳಿಗಳು ರಾಗಿ ಬೇಸಾಯದಲ್ಲಿ ಕ್ರಾಂತಿಯನ್ನೇ ಉಂಟುಮಾಡಿವೆ. ಇದರಿಂದಾಗಿ ರಾಗಿ ಬೆಳೆಯುವ ರೈತರ ಹಸಿವೆ ಮಾತ್ರವಲ್ಲ, ಇಂಡಾಫ್ ಬೆಳೆಗಳಿಂದ ದೊರೆತ ಅಗಾಧ ಹುಲ್ಲಿನಿಂದ ಜಾನುವಾರುಗಳ ಹಸಿವೆಯೂ ಸಹ ನೀಗಿದೆ. ತಮ್ಮ ಫಲಾಪೇಕ್ಷೆ ಇಲ್ಲದ ಸತತ ಪರಿಶ್ರಮದಿಂದ ರೈತರ ಪಾಲಿನ ದೇವತೆಯಾದ ಲಕ್ಷ್ಮಣಯ್ಯನವರು ಕೃಷಿ ವಿಶ್ವವಿದ್ಯಾಲಯ ಹಾಗೂ ಸರ್ಕಾರಗಳ ಪಾಲಿಗೆ ಅಸ್ಪೃಶ್ಯರಾಗಿಯೇ ಉಳಿದುಹೋದದ್ದು ದುರಂತ.

ರಾಗಿ ಲಕ್ಷ್ಮಣಯ್ಯನವರ ಆತ್ಮೀಯರು, ಅವರ ಸಮಕಾಲೀನರಾದವರಿಂದ ಸುಮಾರು 24 ಲೇಖನ ಹಾಗೂ ನಿರೋಪಣಾ ಲೇಖನಗಳನ್ನು ಹೊಂದಿರುವ ಈ ಕೃತಿಯು, ತನ್ನ ಪ್ರತಿಯೊಂದು ಲೇಖನದಲ್ಲೂ ರಾಗಿ ಲಕ್ಷ್ಮಣಯ್ಯನವರ ಶ್ರೀಮಂತ, ವಿಶಿಷ್ಟ, ವಿಶೇಷ, ಸರಳ ವ್ಯಕ್ತಿತವನ್ನು ಹಲವಾರು ದೃಷ್ಟಿಕೋನದಿಂದ ಓದುಗರಿಗೆ ಪರಿಚಯಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಇಂದಿಗೆ ಸರಿಯಾಗಿ ಎರಡು ದಶಕಗಳ ಹಿಂದೆ ಕಾಲವಾದ, ಜೀವಿತದಲ್ಲೂ ನೇಪಥ್ಯ ಸೇರಿದಂತೆ ಬದುಕಿದ್ದ ವಿಶಾಲ ವ್ಯಕ್ತಿತ್ವದ ಮೌನ ಸಾಧಕರನ್ನು ಈ ಚಾರಿತ್ರಿಕ ಕೃತಿಯ ಮೂಲಕ ಯುವಪೀಳಿಗೆಗೆ ಸಾಹಿತ್ಯಿಕ ರೂಪದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಪುನರ್ ಸೃಷ್ಟಿಸಿರುವ ಸಂಪಾದಕರುಗಳಿಗೆ ಅನಂತ ನಮನಗಳು ಸಲ್ಲಲೇಬೇಕು. ಅಲ್ಲದೇ, ಈ ಕೃತಿಯನ್ನು ಒಟ್ಟಾರೆ ಸೂಕ್ಷ್ಮವಾಗಿ ಗಮನಿಸಿದಲ್ಲಿ ಅದರ ಹಿಂದಿರಬಹುದಾದ ಸಂಪಾದಕರ ಶ್ರದ್ಧೆ-ಪರಿಶ್ರಮಗಳು ನಮ್ಮ ಅರಿವಿಗೆ ಬರುತ್ತವೆ. ಡಾ. ಜೆ. ಬಾಲಕೃಷ್ಣರ ಮುಖಪುಟ ವಿನ್ಯಾಸ ಪುಸ್ತಕಕ್ಕೆ ಮೆರುಗು ನೀಡಿದೆ. ಇಂತಹ ವಿರಳವೆನ್ನಬಹುದಾದ ಸಾಧನೆಗೆ ಪ್ರೋತ್ಸಾಹಿಸುವ ಮೂಲಕ 'ಅಸೀಮ ಅಕ್ಷರ' ಪ್ರಕಾಶನವು ಸಾರ್ಥಕ್ಯ ಪಡೆದುಕೊಂಡಿದೆ.

ಒಂದು ಕಾಲಘಟ್ಟದಲ್ಲಿ ಕೇವಲ ಬಡವರ-ದಲಿತರ 'ಅನ್ನ'ವಾಗಿದ್ದ 'ಕರಿರಾಗಿ'ಯು ಇಂದಿನ ಹದಗೆಟ್ಟ ಆಹಾರ-ಜೀವನ ಶೈಲಿಯಿಂದಾಗಿ ನಿಧಾನವಾಗಿ ಅದಕ್ಕಂಟಿಕೊಂಡಿದ್ದ ಸಾಮಾಜಿಕ ಅಂತಸ್ತುಗಳ ಸಂಕೋಲೆಗಳ ಕಪಿಮುಷ್ಟಿಯಿಂದ ಮುಕ್ತವಾಗಿ ಪ್ರತಿಯೊಬ್ಬರ ದಿನನಿತ್ಯದ ಆಹಾರವಾಗುತ್ತಿದೆ. ಇಂತಹ ಮಹತ್ವದ ಸಂಕ್ರಮಣ ಕಾಲದಲ್ಲಿ, ರಾಗಿ ಬೆಳೆಯ ಅಭಿವೃದ್ಧಿಗಾಗಿ ತಮ್ಮ ಜೀವಿತಾವಧಿಯನ್ನೇ ಮುಡಿಪಾಗಿಟ್ಟ 'ರಾಗಿ ಲಕ್ಷ್ಮಣಯ್ಯ'ನವರ ಕುರಿತ ಈ ಚಾರಿತ್ರಿಕ ಕೃತಿಯು ಮೂಡಿಬಂದಿರುವುದು ಅತ್ಯಂತ ಸಮಂಜಸವೆನಿಸುತ್ತದೆ. ರಾಗಿಯನ್ನು ಯಾವುದೇ ರೂಪದಲ್ಲಾದರೂ ಆಹಾರವಾಗಿ ಸೇವಿಸುತ್ತಿರುವ ಪ್ರತಿಯೊಬ್ಬರೂ ಈ ಕೃತಿಯನ್ನು ಓದಲೇಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಪುಸ್ತಕ ಪರಿಚಯ

ಶೀರ್ಷಿಕೆ: ತೆನೆ ಮರೆಯ ಕ್ರಾಂತಿ ರಾಗಿ ಲಕ್ಷ್ಮಣಯ್ಯ – ಇಂಡಾಫ್ ರಾಗಿ ತಳಿಗಳ ಕಂಡುಹಿಡಿದ ವಿಜ್ಞಾನಿ

ಸಂಪಾದಕರು: ಪ್ರೊ. ಎಂ. ನಾರಾಯಣಸ್ವಾಮಿ ಹಾಗೂ ರಮೇಶ್ ಸಂಕ್ರಾಂತಿ

ಪ್ರಕಾಶಕರು: ಅಸೀಮ ಅಕ್ಷರ, ಅಮೃತನಗರ, ಬೆಂಗಳೂರು

ಪ್ರಥಮ ಮುದ್ರಣ: 2012

ಬೆಲೆ: ರೂ. 100/-
ಪ್ರತಿಯೊಬ್ಬ ಮನುಷ್ಯನೂ ಆಂತರಿಕವಾಗಿ ಸತ್ಯಶೋಧಕನೇ. ಆದರೆ, ಸತ್ಯಶೋಧನೆಗೆ ಏಕಾಗ್ರತೆ, ಸಹನೆ, ಆಳವಾದ ಜ್ಞಾನ, ಫಲಾಪೇಕ್ಷೆ ಇಲ್ಲದ ಸತತ ಸಾಧನೆ ಮುಖ್ಯ.
- ಡಾ. ಸಿ. ಹೆಚ್. ಲಕ್ಷ್ಮಣಯ್ಯ

Friday, July 19, 2013

Beginning of my Fatherhood..

"When are we planning for a baby?"
"Should we?.. so early??"
Guess, my (bad?) habit of answering a question with another question is probably what my wife hates most. She continued..
"Enough, can't take it anymore.. better you face everyone yourself" - she looked annoyed.
"Let them ask me, I will answer myself.." - somehow, I wasn't dare enough to frame yet another question.
"It's been year-and-a-half we are married, are we growing younger anyways?.."
"uummmm.. no.., but.. we still have enough time.., isn't it?"

In the history of over 11 years of our relationship, this was the only thing about which me and my wife strongly disagreed upon - "having a baby". As it would have happened with any other married couple, we both soon had to face the undue pressure of being "parents". Though she looked a lot eager to be a "mom", I was too lazy and lethargic as usual.

"When are you both going to give us some good news?" - it was such an embarrassment when I was asked this by my wife's aunt in one of the family gathering.. didn't know what to answer! My wife seemed to be the most happiest person on earth that very moment, she was laughing mouthful. Realizing the fact what my brave wife was going through all past days, I quickly decided what to do next. Following a couple of fertile days I had marked for us, she only managed to have a period and missed the rest. When the hCG test done at home ran positive, we finally had a hint of the "good news"!!. I could no more be the same old "lazy boy".. our Gynecologist had confirmed the "good news" and certified it with a big list of precautions to my wife and responsibilities for myself.

"What are you going to present me for our second wedding anniversary?" asked my wife.
"Do we really need anything more?.." I said with a smile.
This time, my question as an answer to her question had little adverse effects; she very well understood what was intended. Following months of pregnancy were the most memorable days of life with lots of happenings around - scheduling appointments with the Gynecologist, waiting long hours for consultation, the curiosity of looking at our child through ultrasound while it slowly crept along it's crucial weeks of prenatal life, the joy of looking into the normal-read medical reports, the responsibility of being a sensible hubby, sharing few of her routine household chores, a little counseling done often to ease worries off and make her strong.. everything seemed like a fairy tale of a sweet dream!

It was on 29th June, the doctor advised to get my wife admitted for further medical care following frequent pain and discharge. Continuous fetal Non-Stress Test (NST) monitoring was normal throughout 30th June while she was in the labor ward. With no progressive signs of delivery, doctor recommended to wait until the next day for normal delivery to happen. It was at around half past 12 noon on 01st July, NST started recording an alarming drop in the fetal heart rate. Looking at the term scan report, doctor said "There might probably be something obstructing head to descend down and the baby seems to be in stress. It is better I take her in..". The sentence of term scan report "cord around the neck observed at the time of scanning" which I had purposefully ignored when my wife asked about it looking at the report a month ago was proved detrimental.

"Should I be operated now?"
"hmmmm.. baby seems to be stressed out. NST has now come down to 125, what was in the range of 145 earlier. Don't worry, C-section would be less painful compared to the normal labor pain. You will be put under anesthesia and by the time you open eyes, baby will be beside you" - even though I wasn't completely right, only intention was to ease my wife through her C-section. Hearing to those words and having known the stressed condition of the baby within, (looking as brave as ever) she too agreed.

"If you don't faint, please come to OT" said the doctor looking at me, this was what my wife also probably wanted. No matter I have been used to sight blood and also been regularly performing C-sections in animals myself, it shall never be easy to see the raw flesh and fresh blood of my loved one. Without much delay, I pulled on the pink gown and stepped in to OT. The anesthesiologist had done his job by then, but it was only the regional anesthesia - my wife was very well aware of the happenings around. Thanks to the head cap and face mask, which came to my rescue to avoid emotions on my face being directly seen by my wife. As the surgeon pierced through the different layers from skin into the abdominal cavity, I struggled to hold my nerves tight. While the suction pump cleared all the oozing out blood from the surgical site, baby was taken out with the umbilical cord around its neck. A few seconds later, the first cry of our baby brought a smile on my wife's face and a much awaited relief in me.

"Note the time of birth.." said the anesthesiologist to me. All my belongings were dropped outside the OT and the wall clock struck 2pm. I stood looking at the clock. "See whether you got a baby boy or girl.." - said the nurse. All I wanted was healthy mother and a healthy baby, no matter boy or a girl; reluctantly moved a bit towards the pediatrician who was passing the nasal tube to evacuate the mucus from the baby, I could see our tiny "daughter" crying aloud. "Don't you congratulate your wife?" asked the surgeon. Oh! yes.. had totally forgot to wish her.. I held her hand and gently pressed saying "daughter.." - am sure she did pick the pleasure within me as she was very well aware that I always preferred a daughter over son.

our daughter, on day two
Mom, daughter & dad are all fine now. Somewhere in May 2012, while I wrote a post "mom n me.." on this Blog (please read it again, it might just take a few minutes), it was mere fiction; and never was aware that almost the same thing would happen in my life a year later. Having such a lovely beginning to my fatherhood, we parents now have to shoulder the huge responsibility of making life of our daughter more prettier and most importantly, the responsibility of making her a beautiful human being.

Friday, July 12, 2013

ಅಂಧೆಯ ಬದುಕಿಗೆ ಬೆಳಕಾದೀತೆ ನ್ಯಾಯಾಂಗ?

ಚಿಕ್ಕಬಳ್ಳಾಪುರ ಜಿಲ್ಲೆಯ ಬಗೇಪಲ್ಲಿ ಎಂಬ ಪುಟ್ಟ ಹಳ್ಳಿ; ತಮ್ಮ ದಿನನಿತ್ಯದ ಕಾಯಕಕ್ಕೆ ಹೊರಟಿದ್ದ ಕುರಿ ಕಾಯುವ ಹುಡುಗರಿಗೆ ಕ್ಷೀಣ ಧ್ವನಿಯ ಹೆಣ್ಣಿನ ರೋದನೆ ಕೇಳಿಸುತ್ತದೆ. ಅತ್ತಿತ್ತ ಹುಡುಕಾಡಿದ ಕುರಿಯವರಿಗೆ, ಸಮೀಪದ ಹೊಲದಲ್ಲಿದ್ದ ಪಾಳುಬಾವಿಯೂಂದರೊಳಗೆ ಬಿದ್ದು ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದ ಒಬ್ಬ ಹೆಂಗಸು ಕಾಣಿಸುತ್ತಾಳೆ. ಕೊಳವೆಬಾವಿಗಳ ಹಾವಳಿಯಿಂದ ಮರುಗಿಹೋಗಿದ್ದ ಪುರಾತನ ಪಳೆಯುಳಿಕೆಯೊಳಗಿಂದ ಹೆಣ್ಣುಮಗಳನ್ನು ಹೊರತರಲು ಹರಸಾಹಸ ಮಾಡಿದವರಿಗೆ ಅಚ್ಚರಿ-ಕುತೂಹಲ ಕಾದಿತ್ತು; ಆಕೆ ಗರ್ಭಿಣಿಯಷ್ಟೇ ಅಲ್ಲ, ಅಂಧೆಯೂ ಕೂಡ.

ಜುಲೈ ಆರರ ಶನಿವಾರ, ತಡರಾತ್ರಿಯಲ್ಲಿ "ಆದಪ್ಪ" ಅಂಧೆಯಾದ "ಗೌರಿ"ಯನ್ನು (ಹೆಸರು ಬದಲಿಸಲಾಗಿದೆ) ಮದುವೆಯಾಗುವುದಾಗಿ ನಂಬಿಸಿ ತನ್ನೊಡನೆ ಕರೆದೊಯ್ಯುತ್ತಾನೆ. ಅಂಗವಿಲಕೆಯಾದ ಹೆಣ್ಣು ತನ್ನೊಡಲಿನಲ್ಲಿ ಬೆಳೆಯುತ್ತಿದ್ದ ಕೂಸಿಗೆ ತಂದೆಯಾದ ಆದಪ್ಪನನ್ನಲ್ಲದೆ ಮತ್ತಿನ್ಯಾರನ್ನು ನಂಬಿಯಾಳು? ಗಾಡಾಂಧಕಾರದ ತನ್ನ ಪ್ರಪಂಚದಾಚೆಗೆಲ್ಲೋ ಇರಬಹುದಾದ ನವಜೀವನದ ಸುಂದರ ಕನಸನ್ನು ಕಾಣುತ್ತಾ ಹೊರಟಿದ್ದ ಗೌರಿಗೆ ಆಘಾತ ಕಾದಿತ್ತು.. ಮದುವೆಯಾಗಿ ಬಾಳಿನ ಬೆಳಕು ಹೊತ್ತಿಸುವುದಾಗಿ ವಚನ ನೀಡಿ, ಎಲ್ಲವನ್ನೂ ಪಡೆದುಕೊಂಡಿದ್ದಾತ ನಡುರಾತ್ರಿಯಲ್ಲಿ ಆಕೆಯನ್ನು ಕರೆತಂದು ಹತ್ತಿರದ ಹಾಳುಬಾವಿಯೊಂದಕ್ಕೆ ತಳ್ಳಿಬಿಟ್ಟಿದ್ದ. ತೆವಲು ತೀರಿಸಿಕೊಂಡಾತನಿಗೆ ಕಣ್ಣು ಕಾಣದ ಕುರುಡಿಯಾಗಲೀ, ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ತನ್ನ ಪಿಂಡವಾಗಲಿ ಬೇಕಾಗಿರಲಿಲ್ಲ.

ಚಿತ್ರ ಕೃಪೆ: ದಿ ಹಿಂದು, ಗೂಗಲ್. ಪರಿಕಲ್ಪನೆ: ಪ್ರಶಾಂತ್

ಇಷ್ಟಕ್ಕೂ, ಆದಪ್ಪ ಏನೂ ತಿಳಿಯದ ಹದಿಹರೆಯದ ಹುಡುಗನೇನಲ್ಲ; 47ರ "ಪ್ರಾಯದ ಸಭ್ಯ ಗೃಹಸ್ಥ"?! ಸಬಲೆ ಹೆಣ್ಣಿಗೆ ದೇವರದ್ದೇ ಬಲ - ಸತತ ಹದಿನೈದು ಘಂಟೆಗಳ ದೀರ್ಘಾವಧಿ ನರಳಿಕೆಯ ನಂತರ ಅದೃಷ್ಟವಶಾತ್ ಗೌರಿ ಪ್ರಾಣಾಪಾಯದಿಂದ ಪಾರಾಗಿದ್ದಾಳಾದರೂ, ಆದಪ್ಪನ ಕುಟುಂಬದ ಸದಸ್ಯರ ಕಪಟಕ್ಕೆ ಗುರಿಯಾಗಬೇಕಾಯಿತು. ಮೂರೂ ಬಿಟ್ಟವರು ಮಾತ್ರ ಮಾನಕ್ಕೆ ಬೆಲೆ ಕಟ್ಟಲು ಸಾಧ್ಯ - ಗೌರಿಯ ತಂದೆಯನ್ನು ಭೇಟಿಮಾಡಿದ ಆದಪ್ಪನ ಮನೆಯವರು, ಪ್ರಕರಣವನ್ನು ಅಲ್ಲಿಗೇ ಮುಚ್ಚಿಹಾಕಲು ಒಪ್ಪಂದದ ಹೊಂದಾಣಿಕೆಗೆ ಮುಂದಾಗಿದ್ದರು. ಕ್ರೌರ್ಯದ ಆಟಕ್ಕೆ ಕುತಂತ್ರದ ಆಸರೆ - ಇದು ಇಂದಿನ ನಮ್ಮ "ಪ್ರಬುದ್ಧ ಸಮಾಜ"ದ ವಾಸ್ತವ ಸ್ಥಿತಿ. ನತದೃಷ್ಟೆ ಗೌರಿಯ ತಂದೆಯವರ ಕಠಿಣ ಧೋರಣೆಯಿಂದ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣ ಸಂಸ್ಥೆಯ ಬೆಂಬಲದಿಂದ ಎರಡು ದಿನ ತಡವಾಗಿಯಾದರೂ ಬಗೇಪಲ್ಲಿ ಪೋಲೀಸ್ ಠಾಣೆಯಲ್ಲಿ ಆದಪ್ಪನ ವಿರುದ್ಧ ದೂರು ದಾಖಲಾಗಿರುವುದಷ್ಟೇ ಸಮಾಧಾನಕರ ಸಂಗತಿ.

ತಲೆಮರೆಸಿಕೊಂಡಿರುವ ಆರೋಪಿ "ಆದಪ್ಪ"ನಿಗಾಗಿ ಪೋಲೀಸರು ಹುಡುಕಾಡುತ್ತಿದ್ದರೆ, ಮಾನಸಿಕ ಹಾಗೂ ದೈಹಿಕ ಆಘಾತಕ್ಕೊಳಗಾಗಿರುವ ಗೌರಿ, ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಸಂಖ್ಯಾತ ಹೆಣ್ಣು ದೇವತೆಗಳಿಗೆ ನಿತ್ಯಪೂಜೆ ಸಾಂಗವಾಗಿ ನಡೆಯುತ್ತಿರುವ ನಮ್ಮ ಸಮಾಜದಲ್ಲಿ ಹೆಣ್ಣನ್ನು ಈ ರೀತಿ ಹೀನಾಯವಾಗಿ ನಡೆಸಿಕೊಳ್ಳುತ್ತಿರುವುದು ಧಾರ್ಮಿಕ ಆಚರಣೆಗಳನ್ನು ಅರ್ಥಹೀನವಾಗಿಸಿ, ಹಿಂದೂ ಸಂಸ್ಕೃತಿಯ ಪಾವಿತ್ರ್ಯತೆಗೆ ಕಳಂಕವನ್ನುಂಟುಮಾಡಿದೆ. ಹೊಟ್ಟೆ ನೋವಿನ ಹೊರತಾಗಿ ಗೌರಿಯ ಆರೋಗ್ಯ ಸುಧಾರಿಸುತ್ತಿರುವುದಾಗಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದರೂ, ಆರೋಪಿ ಆದಪ್ಪನನ್ನು ನ್ಯಾಯಾಂಗದ ಚೌಕಟ್ಟಿನಲ್ಲಿ ತಪ್ಪಿತಸ್ಥನೆಂದು ಸಾಬೀತು ಮಾಡಿ ಶಿಕ್ಷೆಗೆ ಗುರಿಪಡಿಸಲು ಗೌರಿಯ ಮಡಿಲು ಬರಿದಾಗದಿರುವುದು ಕ್ಷೇಮ. ವಿವಾಹಪೂರ್ವ ಲೈಂಗಿಕ ಸಂಬಂಧವು ದಾಖಲೆಗಳಿಂದ ಸಾಬೀತಾದಲ್ಲಿ, ಅಂತಹವರನ್ನು ಅಧಿಕೃತವಾಗಿ ಪತಿ-ಪತ್ನಿ ಎಂದು ಪರಿಗಣಿಸಬೇಕೆಂಬ ಮಹತ್ವದ ತೀರ್ಪನ್ನು ಇತ್ತೀಚೆಗಷ್ಟೇ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ನೀಡಲಾಗಿದೆ. ಈ ತೀರ್ಪು ಗೌರಿಯಂತಹ ಇನ್ನೂ ಅನೇಕ ಮುಗ್ಧ, ಅಸಹಾಯಕ ಹಾಗೂ ಶೋಷಿತ ಹೆಣ್ಣುಮಕ್ಕಳ ಬದುಕಿಗೆ ಬೆಳಕಾಗಿ, ಆದಪ್ಪನಂತಹ ಕ್ರೂರಿಗಳ ಕ್ರೌರ್ಯವನ್ನು ಮಟ್ಟಹಾಕುವಲ್ಲಿ ಸಹಾಯಕವಾಗುತ್ತದೆಯೇ? ಕಾದು ನೋಡಬೇಕು.

Tuesday, June 18, 2013

Premarital Sex - new form of Legal Marriage

A couple of days ago, hon'ble Chief Minister of Karnataka Sri. Siddaramaiah had expressed inclination towards cutting down marriage expenses; and a day later, the Madras High Court finds an appropriate solution for this - 'Premarital Sex'. Can it get any simpler, I strongly doubt.
If any unmarried couple of the right legal age 'indulge in sexual gratification', this will be considered a valid marriage and they could be termed 'husband and wife'.
- Madras High Court
Image Courtesy: Ronke Alao; Concept: Prashanth

It's important to mark the Day 17th June 2013, when Justice C. S. Karnan passed an order to modify the judgement given by the Coimbatore family court in maintenance case of a couple and said if a boy is 21 and girl 18, they shall acquire the 'freedom of choice' guaranteed by the Constitution of India. Does the so-called 'freedom of choice' meant 'premarital sex'? definitely not, am sure.

Were you wondering how to honor premarital sex a legal marital status? - 'Either party to a relationship could approach the Family Court for a declaration of marital status by supplying documentary proof for a sexual relationship' the Court opined. That's fine, but, what would possibly make a 'documentary proof' for 'sexual relationship'? If at all this was slightly elaborated upon, it would have been much more easier to 'make marriages happen' in the near future.

'On declaration of marital status for a sexual relationship, a woman could establish herself as the man's wife in Government Records and all Legal rights applicable to normal wedded couples will also be applicable' the Court added. When lawyers are smart enough to utilize the smallest loopholes in the Law and uphold injustice, Justice C. S. Karnan with this judgement has kept a trench dug wide open; it shall not be of any difficulty to seek (in)justice based on this 'controversial judgement'.

The Hindu, India Times, CNN-IBN India, DNA, Sify and others reported this 'historical' judgement online and succeeded in pushing up their page rankings to the top on Google for a transitory period of time to the key word 'premarital sex'. 'If after having sexual relationship the couple decided to separate, the husband could not marry without getting a divorce from the wife' - this judgement, however, has given a new twist to the concept of 'premarital sex', which will soon make the 'curse' a 'boon'.

The Court also said 'Marriage formalities as per various religious customs such as tying of mangalasutra, exchange of garlands, exchange of rings or registering of a marriage were only to comply with religious customs for the satisfaction of society'. This, simply makes the existing deep-rooted solid foundation of Hinduism/Christianism to give way and completely collapse it's strongly built social architecture in India. If slogans of boycott are heard against this, surprise not!

In the past, marriages were said to be made in heaven; but in future, marriages shall be made on beds too..

Wednesday, June 12, 2013

ಅಗಲಿದ ಗುರುವಿಗೆ ನುಡಿನಮನ - ಡಾ. ಕೆ. ಜಯಕುಮಾರ್

19ನೇ ಏಪ್ರಿಲ್ 2013ರ ಸಂಜೆ; ಕಾಲೇಜಿನಿಂದ ಮನೆಗೆ ಹಿಂತಿರುಗಿದವನೇ laptop ಮುಂದೆ ಕುಳಿತು, ಕರ್ನಾಟಕ ಪಶುವೈದ್ಯಕೀಯ ಸಂಘದ ಬಳಕೆಗಾಗಿ Online Web Application ಅಭಿವೃದ್ಧಿಪಡಿಸುವುದರಲ್ಲಿ ಗಾಢವಾಗಿ ತಲ್ಲೀನನಾಗಿದ್ದೆ. ಹಾಸಿಗೆಯ ಮೇಲಿದ್ದ ನನ್ನ mobile ಕೀರಲು ಧ್ವನಿಯಲ್ಲಿ ಸದ್ದುಮಾಡತೊಡಗಿತು - ಅದು ಗುರುಗಳಾದ ಡಾ. ಎಂ. ನಾರಾಯಣಸ್ವಾಮಿಯವರಿಂದ ಬರುತ್ತಿದ್ದ ಕರೆ, ತಕ್ಷಣ ಉತ್ತರಿಸಿದೆ:
"ನಮಸ್ತೆ, ಸರ್.."
"ಪ್ರಶಾಂತ್, college magazine ಗೆ ಏನಾದ್ರೂ ಬರೀತಿದ್ದೀಯ?"
ಸ್ವಲ್ಪ ಹಿಂಜರಿಕೆಯಿಂದಲೇ "ಬರೆಯೋ idea ಏನೂ ಇಲ್ಲ ಸರ್.." ಎಂದಿದ್ದೆ.
"ಒಂದು ಅರ್ಧ ಪುಟದಷ್ಟು ಏನಾದ್ರೂ ಬರೀಬಹುದಲ್ವಾ?"
ತಲೆಯ ತುಂಬೆಲ್ಲಾ ಪ್ರೊಗ್ರಾಮಿಂಗ್ ಕೋಡ್-ಗಳೇ ತುಂಬಿಕೊಂಡಿದ್ದ ನನಗೆ ಆ ಹೊತ್ತಿಗೆ ಲೇಖನ ಬರೆಯುವ ಸಂಯಮ ಇರಲಿಲ್ಲ; ಏನು ಉತ್ತರಿಸಬೇಕೋ ನನಗೆ ತಿಳಿಯದೇ ಹೋಯಿತು.

ಅಂದಿಗೆ ಎರಡು ದಿನಗಳ ಹಿಂದೆಯಷ್ಟೇ ನಮ್ಮನ್ನಗಲಿದ್ದ ಗುರುಗಳಾದ ಡಾ. ಕೆ. ಜಯಕುಮಾರ್ ಅವರಿಗೆ ಗೌರವ ಸಲ್ಲಿಸುವ ಲೇಖನ ಬರೆಯುವ ಸಲುವಾಗಿ ಮನಸ್ಸಿಗೆ ನಾಟಿದ ಕೆಲವು ವಿಷಯಗಳನ್ನು ಮರೆಯಬಾರದೆಂಬ ಕಾರಣಕ್ಕಾಗಿ ಇದೇ ಬ್ಲಾಗ್ ನಲ್ಲಿ ಬೆರಳಚ್ಚಿಸಿ ಕರಡಿಗೆ ಸೇರಿಸಿದ್ದೆ. ಹೆಚ್ಚು ಆಲೋಚಿಸದೇ, ಕರಡನ್ನು ತಿದ್ದಿ, ಪುಟ್ಟ ಲೇಖನವೊಂದನ್ನು ಮರುದಿನ ಕಾಲೇಜಿನ ಸಂಪಾದಕೀಯ ತಂಡಕ್ಕೆ ಸಲ್ಲಿಸಿದೆ. "ಪತ್ರಿಕೆ-ಪ್ರಕಟಣೆ" ಎಂದಾಕ್ಷಣ ಅದೇಕೋ ಒಂದು ಸಣ್ಣ ಅಳುಕು ನನ್ನೊಳಗೆ ಮೂಡುತ್ತದೆ; ಇಲ್ಲಿಯೂ ಹಾಗೆಯೇ - "ನನ್ನ ಲೇಖನವು ಪ್ರಕಟಣೆಗೆ ಯೋಗ್ಯವೇ?" ಎಂಬ ಪ್ರಶ್ನೆ ಕಾಡತೊಡಗಿತು.


2013ರ ಬೆಂಗಳೂರು ಪಶುವೈದ್ಯಕೀಯ ಮಹಾವಿದ್ಯಾಲಯದ ವಾರ್ಷಿಕ ಸಂಚಿಕೆ "ಬಿಂಬ" ಇಂದು ಹಲವರ ಕೈಸೇರಿದೆ; ಅದರಲ್ಲಿ ಪ್ರಕಟವಾಗಿರುವ ನನ್ನ ಲೇಖನವು ಇಲ್ಲಿದೆ. ಇದಕ್ಕೆ ಮೂಲಭೂತವಾಗಿ ಕಾರಣಕರ್ತರಾದ ಗುರುಗಳು, ಡಾ. ಎಂ. ನಾರಾಯಣಸ್ವಾಮಿಯವರಿಗೆ ತುಂಬುಹೃದಯದ ಕೃತಜ್ಞತೆ ಸಲ್ಲಿಸುತ್ತೇನೆ.
17-04-2013

ಎಂದಿನಂತೆ ಅಂದೂ ಸಹ ಕಾಲೇಜಿಗೆ ತಡವಾಗಿಯೇ ತಲುಪಿ, ವಾಹನ ನಿಲುಗಡೆ ಸ್ಥಳದಿಂದ ಗಡಿಬಿಡಿಯಲ್ಲಿ ಬೋಧನಾ ಕೊಠಡಿ ಸಂಖ್ಯೆ – 2 ರ ಕಡೆಗೆ ಹೆಜ್ಜೆ ಹಾಕುತ್ತಿದ್ದೆ. ಆ ಹೊತ್ತಿಗಾಗಲೇ 5 ನಿಮಿಷ ತಡವಾಗಿದ್ದುದರಿಂದ ಸಮಯಕ್ಕೆ ಮುಂಚಿತವಾಗಿ ಅಥವಾ ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಬೇಕೆಂಬ ನನ್ನ ಬಹುದಿನಗಳ ಆಕಾಂಕ್ಷೆಗೆ ಎಳ್ಳು-ನೀರು ಬಿಟ್ಟಂತಾಗಿತ್ತು. ಗುರುಗಳಾದ ಡಾ. ಜಯಕುಮಾರ್ ಅವರು ಬೋಧನಾ ವಿಷಯವಾಗಿ ಅಂದು ನಮ್ಮೊಡನೆ ಚರ್ಚಿಸಬಹುದಾದ ಪ್ರಚಲಿತ ವಿದ್ಯಮಾನಗಳನ್ನು ಅಂದಾಜಿಸಿಕೊಳ್ಳುವ ನನ್ನ ಪ್ರಯತ್ನವು ಫಲಕಾರಿಯಾಗಲಿಲ್ಲ. ನನ್ನ ಸಂಕುಚಿತ ಚಿಂತನೆಗೆ ಅವರ ವಿಶಾಲ ವ್ಯಕ್ತಿತ್ವ-ವಿಚಾರಗಳನ್ನು ಇಡಿಯಾಗಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ಇರಲಿಲ್ಲ.

ದಾರಿಯಲ್ಲಿ ಭೇಟಿಯಾದ ದೈಹಿಕ ಶಿಕ್ಷಣ ಶಿಕ್ಷಕರ ಮುಖದಲ್ಲಿ ಎಂದಿನ ನಗು ಕಾಣದಿದ್ದರಿಂದ ನಾನು –
"ನಮಸ್ತೆ ಮೇಡಂ; ಏನು.. ತುಂಬಾ ಸೀರಿಯಸ್ಸಾಗಿ ಕಾಣ್ತಿದ್ದೀರ?" ಎನ್ನುತ್ತಾ ಮಾತಿಗೆಳೆದೆ.
"ನಿಮ್ಗೆ ಗೊತ್ತಿಲ್ವಾ? ಅವ್ರು, ಪ್ರೊಫೆಸರ್ ತೀರ್ಕೊಂಡ್ರಂತೆ.." ಎಂದು ಅವರು ಉತ್ತರಿಸಿದಾಗ ಅವರ ಮುಖದಲ್ಲಿದ್ದ ಗಂಭೀರತೆಯ ಕಾರಣದ ಅರಿವಾಗತೊಡಗಿತು.
"ಯಾವ್ ಪ್ರೊಫೆಸರ್?" ಮರುಪ್ರಶ್ನಿಸಿದೆ.
"ಅವ್ರೇ.. ಡಾ. ಜಯ......" ಹೆಸರನ್ನು ಮರೆತಂತೆ ಕಂಡ ಅವರ ಮಾತನ್ನು ತಡೆದು ನಾನು "ಯಾವ್ ಡಿಪಾರ್ಟಮೆಂಟ್ ಹೇಳಿ.." ಎಂದು ಕೇಳಿದೆ.
"ಇದು.. ಫಾರ್ಮಕಾಲಜಿ.."
"ಹೆಚ್. ಒ. ಡಿ. ಅವ್ರ??"
"ಹ್ಹೂ.... ಅವ್ರೆ.."
"ಡಾ. ಜಯಕುಮಾರ್..??"
"ಹಾ.. ಡಾ. ಜಯಕುಮಾರ್.. ಅವ್ರೇ.. ಹಾರ್ಟ್ ಅಟ್ಯಾಕ್ ಆಯ್ತಂತೆ.."
"ನಮ್ಗೆ ಅವ್ರ ಕ್ಲಾಸಿತ್ತಲ್ಲ ಒಂಬತ್ತು ವರೆಗೆ.." – ಈ ಮಾತುಗಳನ್ನು ನನಗರಿವಿಲ್ಲದಂತೆಯೇ ಆಡಿದ್ದೆ; ಅದಕ್ಕವರು ಪ್ರತಿಕ್ರಿಯಿಸಲೂ ಇಲ್ಲ. ಬಂದೆರಗಿದ ಆಘಾತಕರ ಸುದ್ದಿಯಿಂದ 'ವಿಧಿಯ ಕರೆಗೆ ಕಾಲೇಜಿನ ತರಗತಿಗಳು ತಡೆಯೊಡ್ಡಲಾರವು' ಎಂಬ ವಾಸ್ತವವನ್ನು ನಾನು ಮರೆತಿದ್ದೆ.

ಡಾ. ಕೆ. ಜಯಕುಮಾರ್
ಹಾಗೆಯೇ ನಡೆದು, ನಾವು ಕಾಲೇಜಿನ ಮುಖ್ಯಪ್ರಾಂಗಣವನ್ನು ಸಮೀಪಿಸುತ್ತಿದ್ದಂತೆಯೇ ಅಲ್ಲಿ ಆಗಲೇ ನಮ್ಮನ್ನಗಲಿದ ಡಾ. ಜಯಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಪ್ರಾಂಶುಪಾಲರಾದಿಯಾಗಿ ಬಹುತೇಕ ಎಲ್ಲ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳು, ಸಿಬ್ಬಂದಿ ಮುಂತಾದವರು ನೆರೆದಿದ್ದರು; ನಿಧಾನವಾಗಿ ಹೆಜ್ಜೆ ಹಾಕುತ್ತಾ ಗುಂಪಿನಲ್ಲಿ ಒಂದಾದೆ. ಪ್ರಾಂಶುಪಾಲರ ಮಾತುಗಳು ನಾನು ನಿಂತಿದ್ದ ಅಂತರಕ್ಕೆ ತಲುಪುವುದು ಕಷ್ಟಸಾಧ್ಯವಾಗಿದ್ದರಿಂದ, ಅಸ್ಪಷ್ಟವಾಗಿ ಕೇಳಿಸುತ್ತಿದ್ದ ಕೆಲವೊಂದು ಪದಗಳನ್ನು ಆಲಿಸುತ್ತಾ ತಲೆತಗ್ಗಿಸಿ ನಿಂತೆ. ತರಗತಿಯಲ್ಲಿ ಕುಳಿತು ಡಾ. ಜಯಕುಮಾರ್ ಮಾಸ್ತರ ಉಪನ್ಯಾಸ ಕೇಳುವ ಬದಲಾಗಿ ಕಾಲೇಜಿನ ಪ್ರಾಂಗಣದಲ್ಲಿ, ಉರಿಬಿಸಿಲಿನ ಸೂರಿನಡಿ ನಿಂತು ಅದೇ ಮಾಸ್ತರ ಅಗಲಿದ ಆತ್ಮಕ್ಕೆ ಶಾಂತಿ ಕೋರುತ್ತಾ ಮೌನಾಚರಣೆ ಮಾಡುವ ದೌರ್ಭಾಗ್ಯ ತಂದೊದಗಿಸಿದ ವಿಧಿಯನ್ನು ಮೌನವಾಗಿ ಶಪಿಸಿಕೊಳ್ಳುತ್ತಿದ್ದೆ.

ಎರಡು ನಿಮಿಷ ಮೌನಾಚರಣೆಯ ನಂತರ ಎಲ್ಲರೂ ಚದುರಿದರು; ಅಂದು ಯಾವುದೇ ತರಗತಿಗಳು ನಡೆದಂತೆ ಕಾಣಲಿಲ್ಲ. ನಾನು ಅಲ್ಲಿಂದ ನೇರವಾಗಿ ಬಳ್ಳಾರಿ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಯು. ಎ. ಎಸ್. ವಸತಿಗೃಹಗಳ ಆವರಣದತ್ತ ತೆರಳಿದೆ. ಮುಖ್ಯದ್ವಾರ ಪ್ರವೇಶಿಸಿದ ನಂತರ, ಅಲ್ಲಿ ನೆರೆದಿದ್ದ ವಾಹನ-ಜನರ ಜಾಡನ್ನನುಸರಿಸಿಕೊಂಡು ಹೋದ ನಾನು ಕೆಲವೇ ನಿಮಿಷಗಳಲ್ಲಿ ಡಾ. ಜಯಕುಮಾರ್ ಮಾಸ್ತರ ನಿವಾಸ ತಲುಪಿದ್ದೆ. ಆ ಹೊತ್ತಿಗಾಗಲೇ ಅಗಲಿದ ಗುರುಗಳ ಅಂತಿಮ ದರ್ಶನ ಪಡೆಯಲು ಅನೇಕ ವಿದ್ಯಾರ್ಥಿಗಳು ಆಗಮಿಸಿದ್ದರು; ನೂರಾರು ಮಂದಿ ಒಂದೇ ಸ್ಥಳದಲ್ಲಿದ್ದರೂ ಸಹ 'ಸ್ಮಶಾನ ಮೌನ' ನೆಲೆಸಿತ್ತು.

ಮನೆಯಂಗಳದಲ್ಲಿದ್ದ ಚೆಂದದ ಕೈದೋಟದ ಬದಿಯಲ್ಲಿ ಪಾದರಕ್ಷೆಗಳನ್ನು ಬಿಟ್ಟು, ನಿಧಾನವಾಗಿ ಸಾಗುತಲಿದ್ದ ಸಾಲಿನಲ್ಲಿ ಸೇರಿಕೊಂಡೆ. ಮನೆಯೊಳಗೆ ಜನಸಂದಣಿ ದಟ್ಟವಾಗಿದ್ದು, ಸಾಲಿನಲ್ಲಿ ಒಬ್ಬರಂತೆ ನಡೆದುಹೋಗಬಹುದಾದಷ್ಟು ಮಾತ್ರವೇ ಸ್ಥಳಾವಕಾಶವಿತ್ತು. ಎದೆಯನ್ನು ಭಾರವಾಗಿಸಿದ್ದ ನೋವಿನ ಕಳೆ ಅಲ್ಲಿದ್ದವರ ಮುಖದಲ್ಲಿಯೂ ಗೋಚರಿಸುತ್ತಿತ್ತು; ದುಃಖವು ಜಿಹ್ವೆಯನ್ನು ಮಡುಗಟ್ಟಿಸಿ ಮಾತುಗಳನ್ನು ಮರೆಸಿಬಿಟ್ಟಿತ್ತು. ಒಂದು ಕ್ಷಣ ಆ ನೀರವತೆ ಹಿತವೆನಿಸಿದರೂ, ಅದರ ಕಾರಣವು ಮಾತ್ರ ಅತ್ಯಂತ ಕರಾಳವಾಗಿದ್ದಿತು. ಸಮಯ ಸುಮಾರು ಹತ್ತು ಘಂಟೆ; ಕಾಲೇಜಿನ ಕೊಠಡಿಯ ತರಗತಿಯಲ್ಲಿರಬೇಕಿದ್ದ ಗುರುಗಳು ಶೀತಲ ಪೆಟ್ಟಿಗೆಯೊಳಗೆ ಚಿರನಿದ್ರೆಗೆ ಜಾರಿದ್ದರು, ಅವರ ನಿದ್ರೆಗೆ ಭಂಗ ಬಾರದಂತೆ ಸುತ್ತಲೂ ನಿಶ್ಶಬ್ಧತೆ ನೆಲೆಸಿತ್ತು. ಸರತಿಯ ಸಾಲಿನಲ್ಲಿ ಸುತ್ತು ಬಂದು ಗುರುಗಳ ದಿವ್ಯಚರಣಗಳಿಗೆ ಮನದಲ್ಲೇ ಸಾಷ್ಟಾಂಗ ನಮಿಸುವ ಹೊತ್ತಿಗೆ ಕಣ್ಣಂಚು ತೇವಗೊಂಡಿತ್ತು.

ಒಂದು ತಾಸಿನ ನಂತರ ಕಾಲೇಜಿನ ಮುಖ್ಯದ್ವಾರದ ಬಳಿ ಡಾ. ಜಯಕುಮಾರ್ ಮಾಸ್ತರ ಪಾರ್ಥಿವ ಶರೀರ ಆಗಮಿಸಿದಾಗ ಅನೇಕರು ಅವರ ಅಂತಿಮ ದರ್ಶನ ಪಡೆದರು. ಅಲ್ಲೇ ತುಸು ಅಂತರದಲ್ಲಿ ನಿಂತಿದ್ದ ನನ್ನ ಕರಣಗಳಲ್ಲಿ 'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ..' ಎಂಬ ಪುರಂದರದಾಸರ ಸಾಲುಗಳು ಎಲ್ಲಿಂದಲೋ ತೇಲಿಬರುತ್ತಿದ್ದಂತೆ ಭಾಸವಾಗುತ್ತಿತ್ತು. "ಹೆಚ್. ಒ. ಡಿ. ಆದ್ಮೇಲೆ ಕಾಲೇಜ್ಗೆ ಬಾ.. ಬಾ..  ಅಂತ ತುಂಬಾ ಕರೀತಿದ್ರು; ಇವತ್ತು ಬಂದು ಡಿಪಾರ್ಟ್‍ಮೆಂಟ್ ನೋಡ್ದೆ. ಎಲ್ಲಾ ಚೆನ್ನಾಗಿದೆ.. ಆದ್ರೆ ನಮ್ಮಣ್ಣನೇ ನಮ್ಜೊತೆ ಇಲ್ಲ.." - ಡಾ. ಜಯಕುಮಾರ್ ಮಾಸ್ತರ ಸಹೋದರಿ ಪರಿಚಯಸ್ಥರೊಡನೆ ಹೇಳಿಕೊಳ್ಳುತ್ತಿದ್ದ ಈ ಮಾತುಗಳು ಮನಸ್ಸನ್ನು ನಾಟಿದವು.

"ಸರಿಸುಮಾರು ಆರೇಳು ವರ್ಷಗಳ ನನ್ನ ಪಶುವೈದ್ಯಕೀಯ ಕಾಲೇಜಿನ ಜೀವನದಲ್ಲಿ ಅನೇಕ ರೀತಿಯ ಸಿಹಿ-ಕಹಿ ಅನುಭವಗಳನ್ನುಂಡಿದ್ದೇನೆ; ಆದರೆ, ತರಗತಿಗೆಂದು ಬಂದು ಗುರುಗಳ ಸಾವಿನ ಸುದ್ದಿಯನ್ನು ಕೇಳುವ ದುರಂತವನ್ನೆಂದೂ ಕಂಡಿರಲಿಲ್ಲವಲ್ಲ! ವಿದ್ಯೆ ಕಲಿಸಿದ ಗುರುಗಳನ್ನು ದೈವಸಮಾನರೆಂದು ಪರಿಗಣಿಸಿ, ಅವರಲ್ಲಿರಬಹುದಾದ ವಿಶೇಷ ಗುಣಗಳನ್ನೇ ಜೀವನದ ಮೌಲ್ಯ-ಆದರ್ಶವಾಗಿಸಿಕೊಂಡ ಅನೇಕ ವಿದ್ಯಾರ್ಥಿಗಳಿಗೆ ಇಂತಹ ಘಟನೆಗಳು ಭಾವನಾತ್ಮಕವಾಗಿ ಘಾಸಿಗೊಳಿಸದೇ ಇರಲಾರವು. ಸುರಕ್ಷತೆಗೆ ಹೆಸರಾಗಿದ್ದ ನನ್ನೂರು ಉದ್ಯಾನನಗರಿಯ ಹೃದಯಭಾಗ ಮಲ್ಲೇಶ್ವರಂನಲ್ಲಿ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿದ ಉಗ್ರರು ಶಕ್ತಿಶಾಲಿ ಬಾಂಬ್ ಸ್ಫೋಟಿಸುವಲ್ಲಿ ಯಶಸ್ಚಿಯಾದರಲ್ಲ.. ಇದು ಈ ದಿನದ ಮತ್ತೊಂದು ದುರಂತವೇ ಸರಿ.." - ಹೀಗೆ ನಿರಂಕುಶವಾಗಿ ಹರಿದಾಡುತ್ತಿದ್ದ ನನ್ನ ವಿಚಾರಲಹರಿಗಳಿಗೆ ಹಾಗೂ ಅಲ್ಲಿನ ಮೌನದ ಅಟ್ಟಹಾಸಕ್ಕೆ ಕಡಿವಾಣ ಹಾಕಿದ ಕುಮಾರ್ ಆಂಬ್ಯುಲೆನ್ಸ್ ಕೆಎ-ಇಪ್ಪತ್ತೈದು, ಅರವತ್ತಾರು ಸೊನ್ನೆ ಸೊನ್ನೆ ಸಂಖ್ಯೆಯ ವಾಹನದಲ್ಲಿ ಡಾ. ಜಯಕುಮಾರ್ ಮಾಸ್ತರ ವೈಕುಂಠ ಯಾತ್ರೆ ನಮ್ಮ ಶೈಕ್ಷಣಿಕ-ಸಾಮಾಜಿಕ ಬದುಕಿನಲ್ಲಿ ಶೂನ್ಯವನ್ನು ಸೃಷ್ಟಿಸಿ, ನಿಧಾನವಾಗಿ ದೂರ ಸಾಗಿತ್ತು...

- ಪ್ರಶಾಂತ್ ಸಿ.

(ಈ ಲೇಖನವನ್ನು ನುಡಿ ತಂತ್ರಾಂಶದ ASCII ಸ್ವರೂಪದಿಂದ UNICODE ಗೆ ಪರಿವರ್ತಿಸಲು ಹಳ್ಳಿಮನೆ ಅರವಿಂದ ಅವರ ASCII2UNICODE ತಂತ್ರಾಂಶ ಬಳಸಲಾಗಿದೆ)

Tuesday, June 4, 2013

Whr ru, Mr. Politician and Party??

If you are a regular driver in Bangalore, am sure by now you are made 'Christopher Columbus' - for exploring all possible shortcuts to commute across; being born & brought up here in Bangalore, am no different. To save a few minutes while driving every morning to College, I take this street connecting Srinigar to Gavipuram (area where the well-known Sri Gavi Gangadhareshwara Temple is located). Gavipuram is also called as Kempegowda Nagar and the street am talking about ends in front of the Kempegowda Swimming Pool entrance.

On 31st May 2013, Friday morning, it was yet another drive-away for me in this congested-yet-convenient street on my way to College. Usually no thing off-the-road succeeds to drag my attention while driving; it was an unusual thing that caught my sight instantly at the end of the street - a blocked manhole, which had no other go than overflowing its content along the street walk path. I slowed down a bit to see where it ended up flowing - after a course of about 20-25 meters, the gushing filth found its way into a nearby road-side channel - thanks to Newton & Gravity!

(click image to enlarge)

The scene got no better the next day - 01st Jun; a day after - 02nd Jun; later on 03rd Jun. Today being day five since this was happening, I stopped by. As there was a huge building coming up adjacent and a pretty high compound wall of a well-built apartment on the other side, none other than few pedestrians were found around to talk to. Just because of the fact that the residents are a few handsome yards away, it was totally unfair to leave this blocked manhole unattended even after five days. It would be a shock if the residents haven't reported this to BWSSB yet and wouldn't be a surprise if the driver of BWSSB Kambi Truck (which cleans the clogged manhole) retired from his service on 31st May 2013.

Just a month ago almost all political leaders contesting for the then Karnataka Assembly Elections, 2013 & party were busy moving along this very street, literally 'begging' for votes from the residents of Ward No. 155, Hanumanthanagar. Many a times, election canvass was a major threat to the regular commuters on-road. Every contestant promised of making our 'dwelling' a 'fancy heaven on earth', which practically could be a day-dream for many years to come by. Youth, getting involved in active politics was the highlight of this assembly elections in the Constituency. THE ANSWER TO BAD POLITICS IS GOOD POLITICS, NOT NO POLITICS - agreed; agreed. But, good politics should definitely not end with elections, right? When leaders can successfully mobilize their volunteers for canvassing during elections, why not actively mobilize them to periodically patrol around the constituency to address the grievances of general public even after elections??

Dengue, this season, has slowly been able to penalize many of their invaluable lives; Hon'ble Chief Minister is in serious search of ways to supply cheap liquor to the poor; the elected MLAs are too busy demolishing some interior walls of Vidhanasoudha to make their stay a comfortable & memorable one and officials have a lot of other social services to 'deal' with (like the recent KPSC recruitment racket). In midst of all these - pity the public, please..

Monday, May 27, 2013

ಪಶುವೈದ್ಯರಿಗೆ ಪಶುವೈದ್ಯರೇ ಶತ್ರುಗಳು..

ವೃತ್ತಿಯಲ್ಲಿ ಪಶುವೈದ್ಯನಾಗಿ, ಇಂತಹ ಶೀರ್ಷಿಕೆಯಡಿ ವೃತ್ತಿಪರ ವಿಚಾರವಾಗಿ ಚಿಂತಿಸಿ ಬರೆಯುವ ಅನಿವಾರ್ಯತೆ ಬಂದೊದಗಿರುವುದು ಬಹುಶಃ ದೌರ್ಭಾಗ್ಯವೇ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. "ಹೆಣ್ಣಿಗೆ ಹೆಣ್ಣೇ ಶತ್ರು" ಎನ್ನುವ ನಾಣ್ನುಡಿಯು ಕರ್ನಾಟಕ ರಾಜ್ಯದಲ್ಲಿನ "ಯುವ" ಪಶುವೈದ್ಯರಿಗೆ ಅಕ್ಷರಶಃ ಅನ್ವಯಿಸುವಂತಹ "ಸನ್ನಿವೇಶವು ಇಂದು ಸೃಷ್ಟಿಯಾಗಿದೆ" ಎನ್ನುವುದಕ್ಕಿಂತ "ಸನ್ನಿವೇಶವನ್ನು ಸೃಷ್ಟಿ ಮಾಡಲಾಗಿದೆ" ಎಂದೆನ್ನಬಹುದೇನೋ?? ತಿಳಿಯದು.

ಕಳೆದ ಗುರುವಾರ, ಪೊಲೀಸ್ ಪೇದೆಯೊಬ್ಬರು ನನ್ನ ದ್ವಿಚಕ್ರವಾಹನವನ್ನು ತಡೆದು ನಿಲ್ಲಿಸಿ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದರು. ಎಲ್ಲ ದಾಖಲೆಗಳನ್ನೂ ಅವಸರದಲ್ಲೇ ನೀಡುತ್ತಿದ್ದ ನನ್ನನ್ನುದ್ದೇಶಿಸಿ ಅವರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿ ಕಾಲೇಜು ತಲುಪುವ ಹೊತ್ತಿಗೆ ತಡವಾಗಿ, ತರಗತಿಗೆ ಗೈರುಹಾಜರಾದರೂ ಸಹ ನಮ್ಮ ನಡುವೆ ನಡೆದ ಅಲ್ಪಾವಧಿ ಸಂಭಾಷಣೆಯ ಕೊನೆಗೆ "ಪಶುವೈದ್ಯ ವೃತ್ತಿ, ವಿಶ್ವವಿದ್ಯಾಲಯ, ಸರ್ಕಾರೀ ಇಲಾಖೆ ಹಾಗೂ ಪಶುವೈದ್ಯರ" ಬಗೆಗೆ ಅವರಿಗಿದ್ದಂತೆ ಭಾಸವಾದ ಉನ್ನತಾಭಿಪ್ರಾಯವನ್ನು ಇಮ್ಮಡಿಗೊಳಿಸಿದ ಸಂತಸ-ಸಮಾಧಾನವಿತ್ತು; ಆದರೆ ಇಂದು, ಅದೇ ವಿಷಯವಾಗಿ ತೀವ್ರ ನೋವು-ಅಸಮಾಧಾನ ನನ್ನನ್ನಾವರಿಸಿದೆ.

ಕರ್ನಾಟಕ ಸರ್ಕಾರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ ಪಶುವೈದ್ಯಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಈ ಹಿಂದೆ ಅರ್ಜಿ ಅಹ್ವಾನಿಸಲಾಗಿತ್ತು. ಭರ್ತಿ ಮಾಡಲು ಉದ್ದೇಶಿಸಿದ್ದ ಹುದ್ದೆಗಳಿಗಿಂತ ಅಭ್ಯರ್ಥಿಗಳು ಕಡಿಮೆ ಸಂಖ್ಯೆಯಲ್ಲಿದ್ದ ಕಾರಣ, ಸರ್ಕಾರೀ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಸದವಕಾಶ ಸಿಗುವುದಾಗಿ ಎಲ್ಲ ಯುವ ಪಶುವೈದ್ಯರೂ ಹರ್ಷಗೊಂಡಿದ್ದರು; ಆದರೆ, ಅದು ಬಹುಕಾಲ ಉಳಿಯದಿದ್ದುದೇ ವಾಸ್ತವದಲ್ಲಿನ ದುರಂತದ ಸಂಗತಿ.

ಸರಿಸುಮಾರು ಐದು ದಶಕಗಳ ಕಾಲ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿದ್ದ ಬೆಂಗಳೂರು ಹಾಗೂ ಬೀದರ ಪಶುವೈದ್ಯಕೀಯ ಮಹವಿದ್ಯಾಲಯಗಳನ್ನು ಬೇರ್ಪಡಿಸಿ, 2004ರಲ್ಲಿ "ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ"ವನ್ನು ಸ್ಥಾಪಿಸಲಾಯಿತು (www.kvafsu.kar.nic.in). ಅಲ್ಲದೇ, ಇದೇ ವಿಶ್ವವಿದ್ಯಾಲಯದ ಸ್ವಾಮ್ಯಕ್ಕೆ ಹೊಸದಾಗಿ ಎರಡು ಪಶುವೈದ್ಯಕೀಯ ಮಹಾವಿದ್ಯಾಲಯಗಳನ್ನು ಕ್ರಮವಾಗಿ ಹಾಸನ ಮತ್ತು ಶಿವಮೊಗ್ಗದಲ್ಲಿ ನಮ್ಮ ಘನ ಸರ್ಕಾರವು ಪ್ರಾರಂಭಿಸಿದ ನಂತರ ನಡೆದುದೆಲ್ಲವೂ ಅನಾಹುತಗಳೇ ಸರಿ!

"ಪಶುವೈದ್ಯರುಗಳು ಉತ್ತಮ ಆಡಳಿತಗಾರರಲ್ಲ" ಎಂಬ ಕಾರಣಕ್ಕೋ ಏನೋ, ಸರ್ಕಾರದ ಪಶುವೈದ್ಯಕೀಯ ಸೇವಾ ಇಲಾಖೆಗೆ ಪಶುವೈದ್ಯರೇತರರನ್ನು ಆಯುಕ್ತರನ್ನಾಗಿ (ಆಡಳಿತ ಮುಖ್ಯಸ್ಥರು) ಸರ್ಕಾರ ನೇಮಕ ಮಾಡಿದೆ. ಇದಕ್ಕೆ ಪುಷ್ಟಿ ನೀಡುವಂತೆಯೇ, ನೂತನ ಪಶುವೈದ್ಯಕೀಯ ವಿಶ್ವವಿದ್ಯಾಲಯದಡಿಯಲ್ಲಿರುವ ಬೀದರ ಮಹಾವಿದ್ಯಾಲಯವು "ಮಾನ್ಯತೆ" ಕಳೆದುಕೊಂಡು ಅವಸಾನದ ಭಿತಿಯಲ್ಲಿದ್ದರೆ, ಹಾಸನ ಹಾಗೂ ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯಗಳು ಇಂದಿಗೂ ಪಶುವೈದ್ಯಕೀಯ ಪರಿಷತ್ತಿನಿಂದ ಮಾನ್ಯತೆ ಪಡೆಯದೇ, ತನ್ನ ಎಲ್ಲಾ 72 ಪದವೀಧರರ ಭವಿಷ್ಯವನ್ನು ಅತಂತ್ರವಾಗಿಸಿವೆ. ಮಾನ್ಯತೆ ಇರದ ಮಹಾವಿದ್ಯಾಲಯದ ಪದವೀಧರರೆಲ್ಲರೂ ಸರ್ಕಾರೀ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗೆ ಮಾತ್ರವಲ್ಲ, ಪಶುವೈದ್ಯ ವೃತ್ತಿಯಲ್ಲಿ ಮುಂದುವರೆಯಲೂ ಸಹ ಅರ್ಹರಾಗದಿರುವುದರಿಂದ ದಾರಿಕಾಣದೆ ಕಂಗಾಲಾಗಿದ್ದಾರೆ.

ದಿನಾಂಕ 27-05-2013 ರಿಂದ ಚಾಲನೆ ಪಡೆದುಕೊಂಡಿರುವ ಪಶುವೈದ್ಯಾಧಿಕಾರಿ ಹುದ್ದೆಯ ನೇಮಕಾತಿ ಪ್ರಕ್ರಿಯೆಯು ತಾರತಮ್ಯದ ತಾಣವಾಗಿ ಪರಿವರ್ತನೆಗೊಂಡಿದೆ. ಅರ್ಹ ಪಶುವೈದ್ಯ ಪದವೀಧರರು ದಾಖಲಾತಿ ಪರಿಶೀಲನೆಗೆ ಒಲವು ತೋರುತ್ತಿದ್ದರೆ, ಅರ್ಹರಲ್ಲವೆಂದು ತಿಳಿಸಲಾಗಿರುವ ಪದವೀಧರರು ಪರಿಶೀಲನಾ ಪ್ರಕ್ರಿಯೆಗೆ ತಮ್ಮನ್ನು ಪರಿಗಣಿಸದ ಕಾರಣ ಕೆರಳಿದ್ದಾರೆ. ವಿಶ್ವವಿದ್ಯಾಲಯ ಕುಲಪತಿಗಳು, ಇಲಾಖಾ ಪ್ರಧಾನ ಕಾರ್ಯದರ್ಶಿಗಳು, ಮಾನ್ಯ ಪಶುಸಂಗೋಪನಾ ಸಚಿವರು ಮತ್ತು ಮಾನ್ಯ ಮುಖ್ಯಮಂತ್ರಿಯವರನ್ನು ಅನೇಕ ಬಾರಿ ಭೇಟಿಮಾಡಿ ತಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿಕೊಡಲು ಕೋರಲಾಗ್ಯೂ ಇದುವರೆವಿಗೂ ಯಾವುದೇ ಧನಾತ್ಮಕ ಕ್ರಮ ಕೈಗೊಳ್ಳದ ಕಾರಣ ಕಂಗೆಟ್ಟಿದ್ದಾರೆ. ಆದರೆ ತಾರ್ಕಿಕವಾಗಿ, ದಾಖಲಾತಿ ಪರಿಶೀಲನೆಗೂ ಮುನ್ನವೇ ಕೆಲವು ಅಭ್ಯರ್ಥಿಗಳನ್ನು ಅರ್ಹರ ಪಟ್ಟಿಯಿಂದ ಪ್ರತ್ಯೇಕಿಸಿರುವ ಸರ್ಕಾರೀ ಇಲಾಖೆಯ ನಿರ್ಣಯ ಪ್ರಶ್ನಾರ್ಥಕವೆನಿಸಿಕೊಳ್ಳುತ್ತದೆ.

ವಿಶ್ವವಿದ್ಯಾಲಯ, ಆಡಳಿತ, ಮಹಾವಿದ್ಯಾಲಯ, ಮಾನ್ಯತೆ, ಇಲಾಖೆ, ನೇಮಕಾತಿ, ಅರ್ಹತೆ - ಇವೆಲ್ಲವುಗಳ ಸಂಕೋಲೆಯಿಂದ ದೂರ ಸರಿದು ಆಲೋಚಿಸಿದೆವಾದರೆ, ವೃತ್ತಿಪರ ಹಿರಿಯರಾದ ನಾವು, ಯುವ ಪಶುವೈದ್ಯರುಗಳಿಗೆ ವೃತ್ತಿಪರತೆಯಲ್ಲಿ ಅವರುಗಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡು ಯಶಸ್ಸು ಗಳಿಸಲು ಅನುವಾಗುವಂತಹ ಸಂಭಾವಿತ ವೃತ್ತಿಪರ ಸಮಾಜವನ್ನು ಒದಗಿಸಿಕೊಡುವ ಬದ್ಧತೆಯ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

Monday, April 1, 2013

Today's Technology - Google Nose & Gmail Blue!

Google, today has announced two of it's latest technologies/services - for the 'DAY'.


Google NOSE
Web: www.google.com/nose
Smelling is Believing.. even on Google!
YouTube video regarding Google Nose is interesting:



Gmail BLUE
Web: www.gmail.com/blue

YouTube video about Gmail Blue:



If we would want to try Google Nose - it might smell a little fishy; and Gmail Blue - might bring on blues.

The real fact is that - Gmail was launched on April 1, 2004. Happy Birthday Gmail!!

Wednesday, December 5, 2012

ಮುಂಜಾನೆಯ ಕನಸು

ಜೀವನವೇ ಹೀಗೇನೋ.. ಕೆಲವೊಮ್ಮೆ ಸಂಬಂಧವಿರದ ವ್ಯಕ್ತಿಗಳನ್ನು ಸನ್ನಿವೇಶದ ನೆಪದಲ್ಲಿ ಪರಿಚಯಿಸಿ, ಭಾವನಾತ್ಮಕ ಸಂಕೋಲೆಗಳನ್ನು ಬೆಸೆದು, ಅರಿವಿಗೆ ಬಾರದ ಅಗೋಚರ ಆತ್ಮೀಯತೆಯನ್ನು ಸೃಷ್ಟಿಸಿ, ಬದುಕಿನ ಬಗೆಗೆ ಹೊಸದೊಂದು ಭರವಸೆಯನ್ನು ಮೂಡಿಸಿ, ಆ ಮೂಲಕ ಅಂತರಾಳದ ಮೂಲೆಯಲ್ಲೆಲ್ಲೋ ಗುಪ್ತವಾಗಿ ಅಡಗಿ ಕುಳಿತಿದ್ದ ಕೊರಗುಗಳಿಗೆ ತಾತ್ಕಾಲಿಕವಾದರೂ ಶಾಶ್ವತವೆಂಬಂತೆ ಭಾಸವಾಗುವ ಪರಿಹಾರದ ರೆಕ್ಕೆ-ಪುಕ್ಕಗಳನ್ನು ಹೊಂದಿಸಿ, ಹಗುರಾದ ಮನಸ್ಸನ್ನು ಆಕಾಶದೆತ್ತರಕ್ಕೆ ಹಾರಿಬಿಡುತ್ತದೆ..

ಮೇರಿ ಮೇಡಂ (ಹೆಸರು ಬದಲಿಸಲಾಗಿದೆ), ಕಛೇರಿಯಲ್ಲಿ ನಮ್ಮೊಡನೆ ಸಹೋದ್ಯೋಗಿ; ಸರಿಸುಮಾರು ನನ್ನ ತಾಯಿಯ ಆಸುಪಾಸಿನ ವಯಸ್ಕರು. ಇತ್ತೀಚೆಗೆ ತಮ್ಮ ಸುದೀರ್ಘ 36 ವರ್ಷಗಳ ಪ್ರಾಮಾಣಿಕ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದರು. ವಯಸ್ಸಿನಲ್ಲಿ, ವೃತ್ತಿಯಲ್ಲಿ ಮತ್ತು ಅನುಭವದಲ್ಲಿ ಕಿರಿಯನಾದ ನಾನು ಕಳೆದ 5 ವರ್ಷಗಳಲ್ಲಿ ಅವರಿಂದ ಕಲಿತ ಪಾಠ ಅನೇಕ. ಸರ್ಕಾರಿ ವಸತಿಗೃಹದಲ್ಲಿ ವಾಸವಿದ್ದ ಅವರ ವೈಯಕ್ತಿಕ ಬದುಕೇ ವಿಚಿತ್ರ; ಗೃಹಿಣಿಯಾದರೂ ಒಂಟಿತನವೇ ಅವರ ಒಡನಾಡಿ. ವಾಡಿಕೆಯಂತೆ ಅವರ ಸೇವಾವಧಿಯ ಕೊನೆಯ ದಿನದಂದು ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಅವರ ಬಗೆಗೆ ನಾಲ್ಕು ಮಾತುಗಳನ್ನಾಡುವ ಸರದಿ ನನ್ನದಾದಾಗ, ಕೆಲವೇ ವಾಕ್ಯಗಳ ನಂತರ "ಅವರು ಈವರೆಗೂ ನನಗೆ ತೋರಿರುವ ತಾಯಿಯ ಪ್ರೀತಿಗೆ ನಾನು ಆಭಾರಿ.." ಎಂದಷ್ಟೇ ಹೇಳಿ ಕುಳಿತಿದ್ದೆ.

ಸಮಾರಂಭದ ನಂತರ ನೇರವಾಗಿ ನನ್ನೆಡೆಗೆ ಬಂದ ಮೇರಿ ಮೇಡಂ, "ಇದು ನಿಮಗೆ ಸರ್, ಆಮೇಲೆ ಓದಿ.." ಎನ್ನುತ್ತಾ ಆ ಮೊದಲೇ ಸಿದ್ಧಪಡಿಸಿದ್ದ ಒಂದು ಬಿಳಿಯ ಲಕೋಟೆಯನ್ನು ನನ್ನ ಕೈಗಿತ್ತರು. ಅದರಲ್ಲೇನಿರಬಹುದೆಂದು ಅಂದಾಜಿಸದೇ "ಥ್ಯಾಂಕ್ಯೂ ಮೇಡಂ.." ಎನ್ನುತ್ತ ಅದನ್ನು ಕಿಸೆಯಲ್ಲಿಸಿಕೊಂಡೆ. ಆ ದಿನ ಹಿಂತಿರುಗಿ ಮನೆಗೆ ಬರುವಾಗ, ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ನನಗೆ ಲಕೋಟೆಯ ನೆನಪಾಗಿ, ಅದನ್ನು ಕಿಸೆಯಿಂದ ಹೊರತೆಗೆದು ಬಿಡಿಸಿ ಮೇರಿ ಮೇಡಂ ಅವರ ಕೈಬರಹದಲ್ಲಿದ್ದ ಲೇಖನವನ್ನು ಓದಲಾರಂಭಿಸಿದೆ.

ಮುಂಜಾನೆಯ ಕನಸು

ಮುಂಜಾನೆಯ ಮಂಪರಿನಲ್ಲಿ ಒಂದು ಸುಂದರ ಕನಸು. ಕರಗಳನ್ನು ಜೋಡಿಸಿ ಕಣ್ಮುಚ್ಚಿ ಪ್ರಾರ್ಥಿಸುತ್ತಿದ್ದೆ ಸೃಷ್ಟಿಕರ್ತರನ್ನು. ಕರ್ಣಗಳಿಗೆ ಮೃದುವಾದ ಮನೋಹರವಾಗಿ ಕೋಳಿಸುತ್ತಿತ್ತು ಒಂದು ಅಶರೀರವಾಣಿ.

"ನೀಡಿರುವೆನು ನಿನಗೆ ಅಷ್ಟ ಐಶ್ವರ್ಯಗಳನ್ನು, ನನ್ನಿಂದ ಯಾವ ವರವನ್ನು ಪಡೆಯಲು ಮತ್ತೆ ಈ ಪ್ರಾರ್ಥನೆ?"

ಪ್ರಭುವೇ, ನನಗೆ ನೀನು ನೀಡಿರುವುದು ಸಪ್ತ ಐಶ್ವರ್ಯಗಳನ್ನು ಮಾತ್ರ. ಒಂದು ಕೊರತೆಯನ್ನು ಇಟ್ಟಿರುವೆಯಲ್ಲಾ; ಅದನ್ನು ಪೂರೈಸು ಪ್ರಭುವೆ

"ಅದೇನೆಂದು ತಿಳಿಸಿದರೆ ಪೂರೈಸುವೆ ಆ ನಿನ್ನ ಕೋರಿಕೆಯನ್ನು"

ಅಷ್ಟರಲ್ಲಿ ಊರಿಗಿದ್ದ ಒಂದೇ ಒಂದು ಬಸ್ಸು ದೂರದಲ್ಲಿ ಆಗಮಿಸುತ್ತಿತ್ತು. ಮೇರಿ ಮೇಡಂ ಮೂಲತಃ ಕ್ರೈಸ್ಥರಾದರೂ, ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿದ್ದ ಅವರ ಹಿಡಿತವನ್ನು ಕಂಡು ಬೆರಗುಗೊಂಡಿದ್ದೆ. ಲಕೋಟೆಯನ್ನು ಕೈಚೀಲದೊಳಗೆ ಜೋಪಾನವಾಗಿ ಇರಿಸಿ, ಬಸ್ಸಿಗೇರಿ ಕುಳಿತೆ. ಪ್ರಯಾಣದುದ್ದಕ್ಕೂ ಮನಸ್ಸು ಚಿಟ್ಟೆಯಂತೆ ಅನೇಕ-ಅನಾವಶ್ಯಕ ವಿಚಾರಗಳೆಡೆಗೆ ನಿರಂಕುಶವಾಗಿ ಹಾರಾಡುತ್ತಿತ್ತು; ಬೆಂಗಳೂರಿನ ವಾಹನ ಹಾಗೂ ಜನದಟ್ಟಣೆ ಬೇಸರ ತರಿಸಿತ್ತು, ಆಗೊಮ್ಮೆ ಈಗೊಮ್ಮೆ ಜೋಂಪು ಹತ್ತಿ ಕೊನೆಗೊಮ್ಮೆ ಮನೆ ತಲುಪಿದ್ದೆ.

ಇದಾಗಿ ಹಲವಾರು ದಿನಗಳೇ ಕಳೆದುಹೋದವು; ಮೇರಿ ಮೇಡಂ ಕಛೇರಿಯ ತಮ್ಮ ವಸತಿಗೃಹವನ್ನು ತೆರವುಗೊಳಿಸಿ, ನಗರದಲ್ಲೆಲ್ಲೋ ಒಂದು ಬಾಡಿಗೆ ಮನೆಗೆ ತೆರಳಿದ್ದರಿಂದ ಅವರನ್ನು ಭೇಟಿ ಮಾಡುವ ಅವಕಾಶಗಳೇ ಇರಲಿಲ್ಲ. ಯಾವುದೋ ವಿಷಯವಾಗಿ ಒಮ್ಮೆ ಮನಸ್ಸಿಗೆ ತೋಚಿದ್ದನ್ನು ಗೀಚಿಟ್ಟಿದ್ದ ಹಾಳೆಯ ತುಣುಕೊಂದನ್ನು ಕೈಚೀಲದಲ್ಲಿ ಹುಡುಕುವಾಗ, ಅಲ್ಲಿಯವರೆಗೂ ನಾನು ಮರೆತೇ ಹೋಗಿದ್ದ ಮೇರಿ ಮೇಡಂ ಅವರ ಲಕೋಟೆ ಕಾಣಿಸಿತು. ದಿನೇ ದಿನೇ ಬೆಂಗಳೂರಿನ ವಾಹನದಟ್ಟಣೆಯಂತೆ ಉಲ್ಬಣಿಸುತ್ತಿರುವ ನನ್ನ ಮರೆಗುಳಿತನಕ್ಕೆ ಶಪಿಸಿ, ಲಕೋಟೆಯ ಓದನ್ನು ಮುಂದುವರೆಸಿದೆ:

ಬರಿದಾದ ನನ್ನ ಮಡಿಲು, ಸರ್ವ ಸದ್ಗುಣ ಸಂಪನ್ನನಾದ ಒಂದು ಪುತ್ರ ರತ್ನವನ್ನು ದಯಪಾಲಿಸು ನನಗೆ

"ಈ ಕಲಿಯುಗದಲ್ಲಿ ಸರ್ವ ಸದ್ಗುಣ ಸಂಪನ್ನನಾದವನನ್ನು ಹುಡುಕುವುದು ಸಾಗರದೊಳಗೆ ಸಾಸಿವೆ ಕಾಳನ್ನು ಹುಡುಕಿದಂತೆ ಅಲ್ಲವೆ?"

ಆ ಸಾಗರದೊಳಗಿಂದ ಒಂದು ಅಮೂಲ್ಯ ರತ್ನವನ್ನು ಹುಡುಕಿ ತೆಗೆದಿರುವೆನು ಪ್ರಭುವೆ 

"ಬೇಡಿಕೋ ಹಾಗಾದರೆ ಏನು ನಿನ್ನ ಕೋರಿಕೆ?"

ಪುನರ್ಜನ್ಮವಿರುವುದು ನಿಜವಾದರೆ, ಮರುಜನ್ಮದಲ್ಲಿ ಮತ್ತೆ ನಾನು ಹೆಣ್ಣಾಗಿ ಜನ್ಮತಾಳಿದರೆ, ಬರಿದಾಗಿರುವ ನನ್ನ ಮಡಿಲನ್ನು ತುಂಬಲು ಪ್ರಶಾಂತ ಎನ್ನುವ ಅಮೂಲ್ಯ ರತ್ನವನ್ನು ಕಂದನಾಗಿ ಕರುಣಿಸು

"ಮರುಜನ್ಮದಲ್ಲಿ ಅಲ್ಲವೇ? ಹಾಗಿದ್ದರೆ ತಥಾಸ್ತು.."

ಮರೆಯಾಗಿತ್ತು ವರವನ್ನು ನೀಡಿದ ದೈವಸ್ವರೂಪ. ಎಚ್ಚೆತ್ತು ಕಣ್ಣುತೆರೆದಾಗ ಕಂಡಿತ್ತು ಪ್ರಕೃತಿಯ ವಾಸ್ತವರೂಪ..

- ಮೇರಿ.

Monday, October 29, 2012

Bird Flu hits Bangalore

Still hung with the 'so good' taste of hot & crispy boneless bucketful you ate at the nearest KFC restaurant yesterday? Well then, don't fear on seeing this post; "People need not panic as the influenza has not spread as of now" says Mr. Revu Naik Belamagi, the Minister for Animal Husbandry and Veterinary Services, Govt. of Karnataka.
Image Courtesy: The Telegraph
High Security Animal Disease Laboratory at Bhopal confirmed that the blood samples of Turkeys drawn from Central Poultry Development Organization & Training Institute, Hesaraghatta, Bangalore were tested positive for Avian Influenza (H5N1) virus, following death of many turkey birds since early this October. Immediate to the report from Bhopal, all turkey birds were culled & safely disposed; a 10Km radius area around Hesaraghatta was declared 'Alert Zone'; sale of poultry meat & eggs was prohibited and movement of all poultry & its products from and into the alert zone was also banned.
A short personal interruption; I had earlier drafted a detailed writeup to publish, for this being my 100th Blog post, which was then edited to fit well within a paragraph in view of Social Awareness gaining importance. Even now, am finding it hard to accept the fact that I somehow managed to creep across the milestone, which should sincerely be attributed to all my readers for their constant support and encouragement. In our recent conversation, Dr. T. S. Ramananda who is a well-known writer and one of my role models suggested me that I try to publish a Book since this Blog is reaching a limited audience. Following his thought & this 100th post, am seriously thinking to bring out a compilation of some selected posts from this Blog of mine in the form of a Book. Hoping for the possible best, I shall soon consult my personal sponsor regarding this - my Wife :o)
Rapid Response Teams consisting of Veterinarians, Para-vets & supporting staff have been already formed to tackle the present Avian Influenza (commonly called as Bird Flu) chaos and also to take up further investigations, followed by appropriate measures to cull infected birds and dispose them off safely; thus checking further infections. As in this case, professional hazards have always been a challenge to Veterinarians and Para-vets, who deserve all the credit for keeping the situation under control. Appropriate services are also being extended by officials and staff from the Department of Health, Police & BBMP in this regard.

Since its first occurrence in humans in 1997, AI (H5N1) virus has been of utmost importance worldwide for it being the most pathogenic strain of its group and its ability of undergoing mutation to infect humans as well. Typical bird flu symptoms in humans include cough, diarrhea, difficulty breathing, fever, headache, runny nose, sore throat & muscle aches. Hundreds of humans, mostly farmers, farm women and those working with poultry have fallen sick of Avian Influenza and statistics reveal that up to 60% of those who became ill have died. 'The Telegraph' reported that Indonesia has been the nation hardest-hit by bird flu, with 150 deaths reported between 2003 and 2011. However, solace is the fact that there are no deaths reported due to bird flu since beginning of this year in the Country.

Basically, Indian food habits are said to destroy most of the food-borne infections; following the thorough cooking at constantly higher temperatures. Said this, can we still continue eating poultry meat & eggs? Is it 'unsafe' to consume chicken & eggs from the commercial eateries? - Finding an answer to these questions for now is not all that easy. 'Once Saved Always Saved' concept might tend to keep us away; but the yummy McEgg Burger is definitely too much a temptation!!

Hesaraghatta in Bangalore has been known for its richest biodiversity across the Country; for it being the site of many significant and advanced animal husbandry activities from ages. It was a nice place of weekend hangouts with kids for Bangaloreans, where they could enjoy the beauty of nature to its fullest. But not for now; it would be better to keep away from places in and around Hesaraghatta - One, not to get ourselves infected and Two, not to facilitate the spread of infection beyond the nucleus of alert zone.

Wednesday, October 3, 2012

Web Browser : ಜಾಣ್ಮೆಯ ಆಯ್ಕೆ

ಕರ್ನಾಟಕ ಪಶುವೈದ್ಯ ಸಂಘ, ಬೆಂಗಳೂರು ಇವರು ಹೊರತರುತ್ತಿರುವ 'ಪಶುವೈದ್ಯ ಧ್ವನಿ' ಎಂಬ ಚಾತುರ್ಮಾಸಿಕ ವೃತ್ತಿಪರ ಸುದ್ದಿ ಪತ್ರಿಕೆಯಲ್ಲಿ 'ಗಣಕ ಮತ್ತು ಅಂತರ್ಜಾಲ' ವಿಷಯವಾಗಿ ಮೂಲಭೂತ ಅಂಶಗಳನ್ನು ಚರ್ಚಿಸುವ ಉದ್ದೇಶದೊಂದಿಗೆ 'ಜಾಲ ಲೀಲ' ಎಂಬ ಅಂಕಣವನ್ನು ನಿಯತವಾಗಿ ಬರೆಯುವ ಅವಕಾಶ ನನಗೆ ದೊರೆತ ವಿಚಾರವನ್ನು ನಿಮ್ಮೊಡನೆ ಈ ಹಿಂದೆ ಹೇಳಿಕೊಂಡಿದ್ದು ಬಹುಶಃ ನಿಮಗೆ ನೆನಪಿರಬಹುದು.

ಮೇ-ಆಗಸ್ಟ್ 2012 ರ ಸಂಚಿಕೆಯು ಹೊರಬಂದು ಈಗಾಗಲೇ ಬಹಳ ದಿನಗಳೇ ಕಳೆದಿದ್ದು, ಪ್ರಸ್ತುತ ಸಂಚಿಕೆಯಲ್ಲಿ ಪ್ರಕಟವಾದ 'ಜಾಲ ಲೀಲ' ಸರಣಿಯ ನನ್ನ ಬರೆಹವನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ; ತಡವಾದುದ್ದಕ್ಕೆ ಕ್ಷಮೆ ಇರಲಿ. ನಿಮ್ಮ ಅನಿಸಿಕೆ-ಅಭಿಪ್ರಾಯ-ವಿಮರ್ಶೆ-ಟೀಕೆಗಳಿಗೆ ಎಂದಿನಂತೆ ತುಂಬುಹೃದಯದ ಮುಕ್ತ ಸ್ವಾಗತ.

ಈ ಸರಣಿಯ ಹಿಂದಿನ ಲೇಖನವು ಇಲ್ಲಿದೆ: Web Browser : ಅಪಾಯದ ಹೊಸ್ತಿಲು?

ಲೇಖನ - 2

ಹಿಂದಿನ ಸಂಚಿಕೆಯಲ್ಲಿ ನಾವು web browser ಗಳ ಬಳಕೆಯ ಹಿನ್ನೆಲೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದ ನಮಗಿರಬೇಕಾದ ಮೂಲಭೂತ ಮಾಹಿತಿ ಹಾಗೂ ಅರಿವಿನ ಬಗೆಗೆಗಿನ ವಿಚಾರ ವಿನಿಮಯ ಮಾಡಿಕೊಂಡಿದ್ದೆವು. ಈ ಲೇಖನದಲ್ಲಿ, ನಮ್ಮಗಳ ವೈಯಕ್ತಿಕ ಅಗತ್ಯ-ಅನುಕೂಲಕ್ಕೆ ಸರಿಹೊಂದಿಕೊಂಡು, ಮಾಹಿತಿಯ ಸುರಕ್ಷತೆಗೆ ಧಕ್ಕೆ ಬಾರದಂತೆ ಅಂತರ್ಜಾಲದ ಮಹಾಸಾಗರದಲ್ಲಿ ನಮ್ಮೊಡನೆ ಸದಾ ವಿಶ್ವಾಸಾರ್ಹ ಸಂಗಾತಿಯಾಗಿರಬಲ್ಲ browser ಗಳ ಬಗ್ಗೆ ಅಗತ್ಯ ಮಾಹಿತಿಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

Browser ಗಳ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮುನ್ನ, ಯಾವುದೇ ಮಾದರಿ/ಆದರ್ಶ browser ಸಾಧನವು ಹೊಂದಿರಬೇಕಾದ ವೈಶಿಷ್ಟ್ಯತೆಗಳ್ಯಾವುವು? ಎಂಬುದರ ಬಗ್ಗೆ ಗಮನ ಹರಿಸುವುದು ಸೂಕ್ತ. ನಮ್ಮ ದಿನನಿತ್ಯ ಬಳಕೆಯ ಸಾಮಾನ್ಯ ಅಗತ್ಯತೆಗಳನ್ನು ಈಡೇರಿಸಲು ನೆರವಾಗುವಂತೆ browser ಗಳು ವೇಗ (speed), ಲಘು (lightweight), ಸರಳ (simple), ಸುರಕ್ಷತೆ (security), ಸಹವರ್ತಿತ್ವ (compatibility), ಗೌಪ್ಯತೆ (privacy), ವಿಶ್ವಾಸಾರ್ಹತೆ (reliability), ಸಹಾಯ (support), ಸ್ಪರ್ಧಾತ್ಮಕ (competitive), ಕಾರ್ಯಕ್ಷಮತೆ (performance), ನವೀಕರಣ (update) ಮುಂತಾದ ಗುಣಲಕ್ಷಣಗಳನ್ನು ಹೊಂದಿರುವುದು ಅತ್ಯಗತ್ಯ. ಆದರೆ, ಈ ದಿನದ ಅಂತರ್ಜಾಲ ಮಾರುಕಟ್ಟೆಯಲ್ಲಿ ಯಾವುದೇ browser ಅನ್ನು ಅಭಿವೃದ್ಧಿಪಡಿಸಿದ ವ್ಯಕ್ತಿ/ಸಂಸ್ಥೆ/ಸಮೂಹ ತನ್ನ ಸಾಧನವು ಮೇಲ್ಕಾಣಿಸಿದ ಎಲ್ಲಾ ಲಕ್ಷಣಗಳನ್ನೂ ಹೊಂದಿದೆಯೆಂದು ಪ್ರಚಾರ ಮಾಡುತ್ತಿರುವುದು ಬಳಕೆದಾರರಾದ ನಮ್ಮಗಳ ನಿದ್ದೆ ಕೆಡಿಸುವ ಸಂಗತಿಯಾಗಿದೆ. ಪ್ರಸಕ್ತ ವಿಷಯ, ಉದ್ದೇಶ ಹಾಗೂ ಪ್ರಸ್ತುತತೆಯ ಚೌಕಟ್ಟಿನಲ್ಲಿ, ಇನ್ನು ಮುಂದೆ ಚರ್ಚಿಸಲ್ಪಡುವ browser ಗಳು ಪ್ರಮುಖವೆನಿಸಿಕೊಳ್ಳುತ್ತವೆ.

ಇದು ಭಾರತವನ್ನೊಳಗೊಂಡಂತೆ ಬಹುಶಃ ಪ್ರಪಂಚದ ಅತ್ಯಂತ ಪ್ರಚಲಿತ browser; ಕಾರಣ, ಗಣಕಯಂತ್ರವನ್ನು ಮೊಟ್ಟಮೊದಲ ಬಾರಿಗೆ ಜನಸಾಮಾನ್ಯರ ಕೈಗೊಂಬೆಯಾಗಿಸುವಲ್ಲಿ ಮಹತ್ತರ ಪಾತ್ರವಹಿಸಿ ಇಂದಿಗೂ ತನ್ನ ಜನಪ್ರಿಯತೆಯನ್ನು ಕಾಯ್ದುಕೊಂಡಿರುವ Microsoft Windows ತಂತ್ರಾಂಶದೊಂದಿಗೆ ಇರುವ ಏಕೈಕ ಪೂರ್ವನಿಯೋಜಿತ browser ಸಾಧನ. ಪ್ರಾರಂಭದಲ್ಲಿದ್ದ ಅನೇಕ ಸುರಕ್ಷಾ ಲೋಪದೋಷಗಳನ್ನು ನಿಧಾನವಾಗಿ ಸರಿಪಡಿಸಿಕೊಳ್ಳುತ್ತಾ, ಇಂದಿಗೆ ವಿಶ್ವಾಸಾರ್ಹ ಸಾಧನವಾಗಿ ರೂಪುಗೊಂಡಿದೆ. ಈ ಲೇಖನವನ್ನು ರಚಿಸುವ ಹೊತ್ತಿಗಿನ ಪ್ರಸ್ತುತ ಆವೃತ್ತಿ (latest version) 9.

ದುಬಾರಿ Mac ಸಾಧನಗಳ ಅಂತರ್ಜಾಲ ಒಡನಾಡಿಯಾದ ಈ browser, Microsoft Windows ಸಹವರ್ತಿತ್ವ ಆವೃತ್ತಿ ಅಭಿವೃದ್ಧಿಗೊಳ್ಳುವವರೆಗೂ ಸಾಮಾನ್ಯ ಗಣಕ ಬಳಕೆದಾರರಿಂದ ದೂರ ಉಳಿದಿದ್ದಿತು. iPad, iPhone ಮುಂತಾದ Apple ಸಾಧನಗಳಿಂದ ಮೊದಲ್ಗೊಂಡು, ಸಾಮಾನ್ಯ ಗಣಕಯಂತ್ರಗಳಲ್ಲಿ ನವನವೀನ ಆವಿಷ್ಕಾರಗಳನ್ನು Safari ತನ್ನ ಬಳಕೆದಾರರಿಗೆ ಒದಗಿಸಿಕೊಟ್ಟಿದೆ. ಪ್ರಸ್ತುತ ಆವೃತ್ತಿ 5.

ಅತ್ಯಂತ ವೈವಿಧ್ಯ ಗಣಕ ಹಾಗೂ ವಿದ್ಯುನ್ಮಾನ ಸಾಧನಗಳಲ್ಲಿ ಅನುಸ್ಥಾಪಿತಗೊಳ್ಳುವ ವಿವಿಧ ಸ್ವರೂಪಗಳಲ್ಲಿ ಲಭ್ಯವಿರುವ ಹೆಗ್ಗಳಿಕೆ Opera browser ನದ್ದು. Mac, Linux, Windows, Android, Mobile ಹೀಗೆ ಹಲವಾರು ತಂತ್ರಾಂಶಗಳಿಗೆ ಸೂಕ್ತವಾಗಿದ್ದು, ಸುರಕ್ಷತೆಯ ದೃಷ್ಟಿಯಿಂದಲೂ ಸಹ ಮೇಲುಗೈ ಸಾಧಿಸಿದೆ. ಪ್ರಸ್ತುತ ಆವೃತ್ತಿ 12.

Mozilla ಸಮೂಹದ ವತಿಯಿಂದ ಆವಿಷ್ಕಾರಗೊಂಡು, ಬಹುತೇಕ ಎಲ್ಲಾ ಮುಕ್ತ ತಂತ್ರಾಂಶಗಳಲ್ಲಿಯೂ ವೈವಿಧ್ಯ ಪ್ರಕಾರಗಳಲ್ಲಿ ಏಕಕಾಲಕ್ಕೆ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನ ಅತ್ಯಂತ ವಿಶ್ವಾಸಾರ್ಹ browser ಸಾಧನ. ಆರಂಭದಲ್ಲಿದ್ದ ಮಂದಗತಿಯ ಸಮಸ್ಯೆಯನ್ನು ದೂರವಾಗಿಸಿ, ಇಂದಿಗೆ ತೀವ್ರಗತಿಯಲ್ಲಿ ಕಾರ್ಯನಿರ್ವಹಿಸಬಲ್ಲ ಸಾಮಥ್ರ್ಯ ಹೊಂದಿದೆ. ಪ್ರಸ್ತುತ ಆವೃತ್ತಿ 14.

ಈ ದಿನದ ಅಂತರ್ಜಾಲ ಪ್ರಪಂಚದ ಒಡೆಯ ಎನಿಸಿರುವ 'Google' ಹೊರತಂದಿರುವ ಆತ್ಯಾಧುನಿಕ browser ಸಾಧನ. ಮೂಲತಃ Windows ಆವೃತ್ತಿಯ ತಂತ್ರಾಂಶವಾಗಿದ್ದ Chrome, ಈಗಾಗಲೇ Chromium ಹೆಸರಿನಲ್ಲಿ ಮುಕ್ತ ಪ್ರಪಂಚಕ್ಕೂ ಪ್ರವೇಶ ಪಡೆದುಕೊಂಡಿದೆ. ಅತ್ಯಂತ ತ್ವರಿತ, ಸರಳ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸುವ ಸಾಮಥ್ರ್ಯ ಹೊಂದಿರುವ ಈ ಸಾಧನವು ಅತೀವ ತೆರನಾದ ಬಳಕೆದಾರರ ಮಾಹಿತಿ ಕಲೆಹಾಕಿ, ನಿಯಮಿತವಾಗಿ ತನ್ನ ಒಡೆಯನಾದ Google ಗೆ ಅದನ್ನು ನಿಷ್ಠೆಯಿಂದ ರವಾನಿಸುವುದರಲ್ಲಿ ನಿಸ್ಸೀಮ! ಪ್ರಸ್ತುತ ಆವೃತ್ತಿ 20.

ಯಾವುದೇ ಸಾಧನವೂ ಶೇಕಡಾ ನೂರರಷ್ಟು ಸುರಕ್ಷಿತವಲ್ಲ ಎನ್ನುವ ವಾಸ್ತವವನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು; ಇದು browser ಗಳ ವಿಷಯದಲ್ಲೂ ಸಹ ಸತ್ಯ. ನಮ್ಮ ಅನುಕೂಲ ಹಾಗೂ ಉಪಯುಕ್ತತೆಗೆ ತಕ್ಕಂತೆ, ಒಂದೇ ಗಣಕಯಂತ್ರದಲ್ಲಿ ಒಂದಕ್ಕಿಂತ ಹೆಚ್ಚು browser ಗಳನ್ನು ಅನುಸ್ಥಾಪಿಸಿಕೊಳ್ಳುವುದೂ ಸಹ ಸಾಧ್ಯ; ಆದರೆ, ಇದರ ನಿರ್ಣಯವನ್ನು ಮಾತ್ರ ಬಳಕೆದಾರರು ಅತ್ಯಂತ ವಿವೇಚನೆಗೆಯಿಂದ ಮಾಡಬೇಕಾಗುತ್ತದೆ. ಯಾವುದೇ browser ಸಾಧನವಿರಲಿ, ಇಂದಿಗೆ ಲಭ್ಯವಿರುವ ಪ್ರಸ್ತುತ ಆವೃತ್ತಿ (latest version) ಗಳನ್ನು ಉಪಯೋಗಿಸುವುದು ಸಮಂಜಸ.

ಕೊನೆಯದಾಗಿ, ಒಂದು ವಿಚಾರವನ್ನು ನಾವು ಅಗತ್ಯವಾಗಿ ಗಮನಿಸಲೇಬೇಕು - ಅತ್ಯಂತ ಜಾಗರೂಕತೆಯಿಂದ ಆಯ್ಕೆ ಮಾಡಿಕೊಂಡ browser, ಕೆಲವೊಮ್ಮೆ ನಮ್ಮ ಯಂತ್ರದಲ್ಲಿ ಅನುಸ್ಥಾಪಿತಗೊಳ್ಳದೇ ಹೋಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಯಾವುದೇ ಒಂದು browser ಅನ್ನು ಅನುಸ್ಥಾಪಿಸಿಕೊಳ್ಳಲು ಅದಕ್ಕೆ ಪೂರಕವಾದ ಕಾರ್ಯನಿರ್ವಹಣಾ ತಂತ್ರಾಂಶವು (operating system) ನಮ್ಮ ವಿದ್ಯುನ್ಮಾನ ಸಾಧನ (electronic device) ದಲ್ಲಿ ಇರುವುದು ಅತ್ಯಾವಶ್ಯಕ. ಉದಾಹರಣೆಗೆ, Internet Explorer ಅನ್ನು ನಾವು Linux ತಂತ್ರಾಂಶವನ್ನು ಹೊಂದಿರುವ ಗಣಕಯಂತ್ರದಲ್ಲಿ ನೇರವಾಗಿ ಅನುಸ್ಥಾಪಿಸಲು ಸಾಧ್ಯವಾಗುವುದಿಲ್ಲ; ಹಾಗೆಯೇ, iPad ಸಾಧನವೊಂದರಲ್ಲಿ Safari browser ಹೊರೆತಾಗಿ ಇನ್ಯಾವುದನ್ನೋ ಉಪಯೋಗಿಸುವುದು ಪ್ರಸ್ತುತದಲ್ಲಿ ಕಷ್ಟಸಾಧ್ಯ. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ನಿಮಗೆ ಸೂಕ್ತವೆನಿಸಿದ browser ಸಾಧನದ ಜಾಣ್ಮೆಯ ಆಯ್ಕೆ ನಿಮ್ಮದು..
(ಈ ಲೇಖನವನ್ನು ನುಡಿ ತಂತ್ರಾಂಶದ ASCII ಸ್ವರೂಪದಿಂದ UNICODE ಗೆ ಪರಿವರ್ತಿಸಲು ಹಳ್ಳಿಮನೆ ಅರವಿಂದ ಅವರ ASCII2UNICODE ತಂತ್ರಾಂಶ ಬಳಸಲಾಗಿದೆ)

Monday, August 27, 2012

days with Dengue..

"Excluding the fact that you have been tested positive for Dengue, do you have any other health issues?"

This question from Dr. Gopala Swamy H. C., to me, was a very tough one to take up. I think this is one thing that makes some people great - 'handling extremely serious things literally lighter'. At that moment, it really took a lot from me just to think about anything other than Dengue, for which I was declared positive.

"As you know, there is no treatment for any Viral infection; so is with Dengue Fever. Only way is to treat it symptomatically and avoid any further complications. It is a self-limiting disease" he continued, after picking the glimpse that I was taking a while to get tuned to his tempo.

"aaammmm.." following a gush of fresh oxygenated blood to my gray matter, I replied "Am unable to digest anything I eat.. everything just gets vomited".

"Do you have a history of Gastritis?".

"Yes, I do; a severe form of it though" - while I said this, it made me remember 'All Good Things Come With A Price'; a couple of years ago, Marriage came to me with Gastritis.

"Fine, lets stop your Antibiotics; will put you on Acera-D, which will act to reduce instances of Gastritis; Immunace Forte, which is just a vitalizer; and if you continue to record temperature, take Febrex 650mg tid. Drop by the Lab to let them draw your blood sample again and see you tomorrow morning along with the Report" - he handed over the prescription to me with a smile, which made me realize that every minute of his does count.

"Okay; Thank you Sir.." I slowly made my way towards the Lab.
It was a fortnight ago, on a lovely Sunday in a birthday party, I started feeling all the 206 bones and over 650 muscles in my body aching together; which wasn't very usual, I knew. A dose of Paracetamol and Diclofenac only could give temporary relief; but later that night I was all feverish with severe head-body aches, which made me almost shiver to death. Next day morning, I struggled to hold my balance and gait, walking to the Doctor next door; who straightaway put me on Cipro, which never gained me independence from illness while the Country witnessed yet another Independence Day. With constant fever ranging between 102 to 103oF with unbearable aches all over, I had no other go than paying a visit to a nearby Multispecialty Hospital.

When it all just ended with another prescription for a higher Antibiotic, I couldn't keep any mum - "Sir.. could we go in and have the complete blood picture looked at?". "It might be too early to look into it but anyways, we shall.." said the Doctor. My suspicion proved true; the Platelet and Total Count were deep down the normal range! Without my consent, they immediately drew my blood sample for the Dengue NS1 Antigen Test; the assay ran positive. "You need to get hospitalized without any delay, we got to start off with Platelet Transfusion" Doctor said. It was then my Dad and Sister went to the Family Physician for a second opinion, who referred me to Dr. Gopala Swamy.
Next day morning, soon as I received the report from Lab, wound was seared with hot iron; the Platelet count had gone further down.

I knew Dr. Swamy was playing a mind game while he said "No worries, we shall somehow bring up the Platelet count".

"Sir, is it this the right time for Platelet Transfusion?", I was sounding all worried.

"Don't think so. I have seen patients recovering gradually with a Platelet count as low as 50 thousand; yours is in the 1 lakh range. Hospitalization and Platelet Transfusion is recommended only if your count drops down to 30 thousand and below. Until then be happy at home, take complete rest and try to eat well. Will put you on few shots of Steroid, which I have seen to improve Platelets; If someone asks you if Steroids are the treatment for Dengue Fever? NO. But, it works; how?  don't know", his confidence was backed up by huge experience.

Soon I was in the Emergency Ward for the first Steroid shot and rest of them were in queue to be shot into me by my Sister at home; this is why I feel one shouldn't have a Doctor sib.
I went on to find out what possibly would have gifted me this viral infection; the culprit was none other than the yellow fever mosquito, Aedes aegypti. It was a relief to know that Dengue could spread only by the bite of a vector Aedes; pretty sure I wouldn't be spreading infection to others since hundreds of mosquitoes were clapped to death during my 'NO AEDES' campaign and it was well over seven initial days of infection, during which period one can possibly be a potential source of infection to fellow humans through bite of an Aedes. But there always was the danger of internal hemorrhage due to low Platelet count, leading to Dengue Hemorrhagic Fever or Dengue Shock, which could possibly be lethal.
Following appropriate medical attention by Sister, continuous prayers of my Parents and unconditional care from my Wife, I started improving and my Platelet count was ticking up in the next five days. It was only then I gained some confidence and strength within to fight out Dengue. I was somehow lucky enough not to end up with severe complications of Dengue Fever. Today’s blood picture showed my Platelet count well up in the normal range, a good sign for sure.

"My next post would definitely be about 1947 - The Vegetarian Restaurant" was what I told my friends while having lunch there during our last meet. Am sure Raju & Vivek, who were expecting something from me about '1947' in this Blog would be taken by surprise on reading what really followed. It's been a month I went on leave at work, huge responsibility resting on me in that front as well. While many of my contacts are wondering into which Shell I managed to creep in lately, I slowly and steadily am fighting and counting off my days with Dengue..

Monday, June 25, 2012

ವೃತ್ತಿ ಪರಿಧಿ - ಪಶುವೈದ್ಯರ ಹೆಮ್ಮೆ

(IndiBlogger ನಲ್ಲಿ ನೋಂದಣಿಯಾಗಿರುವ ಸುಮಾರು 149 ಕನ್ನಡ ಬ್ಲಾಗ್-ಗಳ ಪಟ್ಟಿಯಲ್ಲಿ ನನ್ನ ಬ್ಲಾಗ್ ಇಂದಿಗೆ, ಜೂನ್ 2012 ರಲ್ಲಿ ಆಕಸ್ಮಿಕವಾಗಿ, ಆಶ್ಚರ್ಯಕರ ರೀತಿಯಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿರುವ ವಿಷಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತಾ, ಇದಕ್ಕೆ ಕಾರಣಕರ್ತರಾದ ನನ್ನ ಎಲ್ಲಾ ಓದುಗ ಮಿತ್ರ ಬಳಗಕ್ಕೆ ಅನಂತ ವಂದನೆಗಳನ್ನು ಸಲ್ಲಿಸುತ್ತೇನೆ)

ಈ ಲೇಖನವು ಸರಿಸುಮಾರು ಮೂರೂವರೆ ತಿಂಗಳುಗಳ ಕಾಲ 'ಕರಡು' ಪ್ರತಿಯಾಗಿಯೇ ಉಳಿದುಕೊಂಡದ್ದು ಈಗ ಇತಿಹಾಸ. ಪಶುವೈದ್ಯರೊಬ್ಬರಿಂದ ಕನ್ನಡ ಭಾಷೆಯಲ್ಲಿ ರಚಿಸಲ್ಪಟ್ಟು, ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತು ಹೊರತಂದಿರುವ 'ವೃತ್ತಿ ಪರಿಧಿ' ಪುಸ್ತಕವನ್ನು ಓದಿ ಮುಗಿಸಿದ ಕೂಡಲೇ ಅದರ ಬಗೆಗಿನ ನನ್ನ ಅನಿಸಿಕೆಗಳನ್ನು ಬರೆದು ಇತರರೊಂದಿಗೆ ಹಂಚಿಕೊಳ್ಳುವ ಅಗಾಧವಾದ ತುಡಿತವನ್ನು ಅಂತರಂಗದ ಆಳದಲ್ಲೆಲ್ಲೋ ಮನೆಮಾಡಿರುವ ಅಜಾಗೃತ ಅಳುಕು ಮೆಟ್ಟಿ ನಿಂತಿತ್ತು. ಡಾ. ಟಿ. ಎಸ್. ರಮಾನಂದ ಅವರಂತಹ ಮಹಾನ್ ಬರಹಗಾರರ ಅದ್ಭುತ ಕೃತಿಯ ಬಗ್ಗೆ, ಸಾಹಿತ್ಯದ ತಿರುಳನ್ನೇ ಅರಿಯದ ನನ್ನಂತಹ ಸಾಮಾನ್ಯನೊಬ್ಬ ಬರೆಯುವುದು ಪ್ರಮಾದವಾಗಬಹುದೆಂಬ ಅಂಜಿಕೆಯಿಂದಲೇ ಈ ಹರಸಾಹಸಕ್ಕೆ ಕೈಹಾಕಿದ್ದೇನೆ; ಆಗಬಹುದಾದ ಎಲ್ಲಾ ತಪ್ಪುಗಳನ್ನು ಮನ್ನಿಸಿರೆಂದು ಗುರು-ಹಿರಿಯರಾದ ಡಾ. ಟಿ-ಎಸ್-ಆರ್ ಅವರಲ್ಲಿ ನಮ್ರನಾಗಿ ವಿನಂತಿಸಿಕೊಳ್ಳುತ್ತೇನೆ.

'ವೃತ್ತಿ ಪರಿಧಿ' ಡಾ. ಟಿ-ಎಸ್-ಆರ್ ಅವರ ಮೂರನೇಯ ಕೃತಿ. ಇದು ಅವರ ಪಶುವೈದ್ಯ ವೃತ್ತಿಪರ ಅನುಭವವೆಂಬಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆಯಾದರೂ, ಓದಿಕೊಳ್ಳುತ್ತಾ ಹೋದಂತೆ ವೃತ್ತಿಪರತೆಯ ಓರೆಗಲ್ಲಿನುದ್ದಕ್ಕೂ ಡಾ. ಟಿ-ಎಸ್-ಆರ್ ಅವರು ತಮ್ಮ ಜೀವನಾನುಭವವನ್ನು ಬಿಚ್ಚಿಡುವ ವಿಶಿಷ್ಟ ಪರಿಯು ಅಂತರಂಗದಲ್ಲಿ ನಮಗೆ ಅರಿವಾಗುತ್ತದೆ; ಇದರ ಹಿಂದಿರುವುದು ಅವರ ಪರಿಪಕ್ವವಾದ ಉನ್ನತ ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಪ್ರೌಢಿಮೆ ಎಂಬುದರಲ್ಲಿ ಸಂಶಯವಿಲ್ಲ. ಸ್ವತಃ ಡಾ. ಟಿ-ಎಸ್-ಆರ್ ಅವರೇ ಪುಸ್ತಕದ 'ಅರಿಕೆ'ಯಲ್ಲಿ ಹಾಗೂ ಡಾ. ರಹಮತ್ ತರೀಕೆರೆ ಅವರು 'ಮುನ್ನುಡಿ'ಯಲ್ಲಿ ಹೇಳಿರುವ ಮಾತುಗಳು ಇದಕ್ಕೆ ಪೂರಕ.

ಸರ್ಕಾರೀ ಪಶುವೈದ್ಯರುಗಳಿಗೆ ಬಿಡುವಿಲ್ಲದ ತಮ್ಮ ವೃತ್ತಿಬದುಕಿನ ಜೊತೆಜೊತೆಗೆ ಸಮಾಜದ ಸರ್ವತೊನ್ಮುಖ ಒಳಿತಿಗಾಗಿ ಇನ್ನಿತರೇ ಹಲವಾರು ಜವಾಬ್ದಾರಿಯುತ ಕಟ್ಟುಪಾಡುಗಳು ಅನಿವಾರ್ಯವೆಂಬ ಸರ್ವಕಾಲಿಕ ಸತ್ಯವನ್ನು ಪುಸ್ತಕದಲ್ಲಿ 'ತುರ್ತು ಪರಿಸ್ಥಿತಿ' ಹಾಗೂ 'ಪ್ರವಾಹ ಪರಿಹಾರ' ಕಾರ್ಯಕ್ರಮಗಳಲ್ಲಿನ ತಮ್ಮ ಅನುಭವಗಳ ಮುಖೇನ ಲೇಖಕರು ಮತ್ತೇ ಸಾಬೀತುಪಡಿಸಿದ್ದಾರೆ. ಈ ಮೂಲಕ, ಕೇವಲ ಪಶುಚಿಕಿತ್ಸೆ ಮಾಡುವುದು ಮಾತ್ರ ಪಶುವೈದ್ಯರ ಆದ್ಯ ಕರ್ತವ್ಯವೆಂಬ ಭ್ರಮೆಯನ್ನು ಹೊಂದಿರುವ ಅನೇಕ ಕಿರಿಯ ಪಶುವೈದ್ಯರುಗಳಿಗೆ ಪರೋಕ್ಷವಾಗಿ ನೀತಿಪಾಠ ಹೇಳುತ್ತಾ, ಅವರನ್ನು ವೃತ್ತಿಪರ ಸನ್ಮಾರ್ಗದೆಡೆಗೆ ನಡೆಸುವಲ್ಲಿ ಡಾ. ಟಿ-ಎಸ್-ಆರ್ ಯಶಸ್ವಿಯಾಗಿದ್ದಾರೆ.

ಪುಸ್ತಕದ ಮತ್ತೊಂದು ವಿಶೇಷ - ನೈಜತೆ. ಪ್ರತಿಯೊಂದು ಅಧ್ಯಾಯದಲ್ಲಿ ಕಾಣಿಸಿರುವ ಪಾತ್ರಗಳು, ಸನ್ನಿವೇಶಗಳು ಹಾಗೂ ಮಾತುಗಳು ಅತ್ಯಂತ ಸಹಜವೆಂಬಂತಿದ್ದು, ನಿರೂಪಣಾ ಶೈಲಿಯು ಯಾವುದೇ ಪಶುವೈದ್ಯರು ಅಲ್ಲಿರುವುದು ತಮ್ಮದೇ ಅನುಭವವೇನೋ? ಎಂಬ ಭ್ರಾಂತಿಗೊಳಗಾಗುವಂತಿದೆ. ಎಪ್ಪತ್ತರ ದಶಕದ ಉತ್ತರ ಕರ್ನಾಟಕದ ಮುಗ್ಧ ಜನರ ಅಸಹಾಯಕ ಬದುಕಿನ ಚಿತ್ರಣವನ್ನು ಅವರ ಮಾತುಗಳಲ್ಲಿಯೇ ಓದುಗರಿಗೆ ದರ್ಶನ ಮಾಡಿಸಿಕೊಟ್ಟಿರುವ ರೀತಿಯು ಮನಸ್ಸಿಗೆ ಹತ್ತಿರವಾಗಿ, ಬಹುಕಾಲ ನೆನಪಿನಲ್ಲುಳಿಯುವಂತೆ ಮಾಡುತ್ತದೆ. ಕಗ್ಗತ್ತಲು ಸೆರಗು ಸರಿಸಿದಾಗ ಮೂಡಿದ ಮುಂಜಾವಿನ ಅರಣ್ಯದ ಸುಂದರ ನೋಟ ಮಾತ್ರವಲ್ಲದೇ ಬರದ ಭೀಕರತೆ, ಪ್ರವಾಹದ ಪ್ರಬಲತೆಗಳ ಅತ್ಯಂತ ಪ್ರಭಾವಕಾರೀ ವರ್ಣಿನೆ ಲೇಖಕರ ಭಾಷಾ ಸಂಪತ್ತಿಗೆ ಸಾಕ್ಷಿಯೂ ಆಗಿವೆ.

ಪುಸ್ತಕದ ಪ್ರಕಾಶಕರಾದ 'ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತು, ಶಿವಮೊಗ್ಗ' ಸಂಸ್ಥೆಯ ಪ್ರಯತ್ನ-ಶ್ರಮ ಪ್ರಶಂಸನಾರ್ಹ. ಪಶುವೈದ್ಯ ವೃತ್ತಿಗೆ ಸಂಬಂಧಿಸಿದ ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡಿ, ತನ್ಮೂಲಕ 'ಅಧಿಕೃತ ಪಶುವೈದ್ಯ ಸಾಹಿತ್ಯ' ಸಂಪತ್ತನ್ನು ವೃದ್ಧಿಗೊಳಿಸುವ ಸಂಕಲ್ಪತೊಟ್ಟು, ಕರ್ಯಪ್ರವೃತ್ತರಗಿರುವ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ನಾಗರಾಜ್ ಕೆ. ಎಮ್. ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರುಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಡಾ. ಟಿ-ಎಸ್-ಆರ್ ಅವರ ಈ ಕೃತಿಯಿಂದ ಮೊದಲ್ಗೊಂಡು, ಕರ್ನಾಟಕದ ಹಲವಾರು ಪ್ರತಿಭಾವಂತ ಪಶುವೈದ್ಯರ ವೃತ್ತಿಪರ ಸಾಹಿತ್ಯದ ಪ್ರಕಟಣೆಯಲ್ಲಿ ಸಂಸ್ಥೆಯು ಮಹತ್ತರ ಸಾಧನೆಗೈಯ್ಯಲಿ ಎಂದು ಆಶಿಸುತ್ತೇನೆ.

'ವೃತ್ತಿ ಪರಿಧಿ' - ಪ್ರತಿಯೊಬ್ಬ ಪಶುವೈದ್ಯರೂ ಓದಲೇಬೇಕಾದ ಒಂದು ಮನೋಜ್ಞ ಕೃತಿ. ಮೊದಲ ಮುದ್ರಣ ಕಂಡಿರುವ 1000 ಪ್ರತಿಗಳು ಲಭ್ಯವಿದ್ದು, ಪುಸ್ತಕವನ್ನು ಲೇಖಕರಿಂದ ನೇರವಾಗಿ ಖರೀದಿಸಬಹುದಾಗಿದೆ (ಮುಖಬೆಲೆ ರೂ.75=00 ಮಾತ್ರ).

Thursday, May 31, 2012

mom n me..

In recent years, the rate at which Caesarean Section is performed during child birth has risen; up to a record level of nearly the second quartile - (Q2).

Image by Google

Mom: Dear.. you seem to have grown 'silent' lately..?
Child-in-Womb: Not really maa..

(long pause)

How long is it from now till I be born?
Need not wait for too long.. it's almost full term & you soon would be in the external world.. to be born is your preference alone
There is only one reason I still would love that happen..
One reason..?
Yea.. want to see my 'Dad'!
Oh dear! Hes been eagerly waiting for you & sure you are blessed with the best ever 'Dad'..
Am I.., mom??
Yes you are, my child..

(silence)

Are you sleepy?
Naa.. I prefer not to; want to live this phase of my life to its fullest
That's my wish too.. (gently pats the baby beneath her womb).. you definitely will get to live the rest of your life to it's fullest.. that's our responsibility, anyways
I fear.. may not
What on the earth made you think so?
I see your dreams are very often so scary..
Common.. most of my dreams are no better than just imagination!
Imagination or anticipation.. dreams might lie but not your heart.. I easily read it beat of fear!

(silence)

How do I figure out my gender, mom?
Why should you?!!
If not me now, the 'world' later would do..
The 'world' is crazy, don't be bothered much

(pause)

I love you, my child..
I too, mom. But the 'world' wouldn't if I don't get my gender just right

(long pause)

Can you rest a bit more on your back maa? My shoulder is aching
Ok.. are you fine now?
Yes.. a lot better. Thanks maa

(pause)

What made you think of me, mom?
There's been a lot of expectation that I give birth to you after your Dad and me got married
Hmmmm..
It's the same pressure almost all women undergo.. which ends up with the pleasure of giving birth to a life
Not just 'life', mom; it's all about a 'boy' or 'girl'
Well, we are least bothered by that
'Life' isn't just we three. 'World' is cruel, isn't it?

(silence)

Maa, whats 'heaven'?
Believed to be a paradise, where Gods & Angels live..
And, 'hell'?
Realm of evil & suffering..
Mumma.. I prefer to live in 'heaven' than being born in 'hell'
Yet another caesarean section; 'world' smiles, the 'child' cries..

Sunday, May 13, 2012

Web Browser : ಅಪಾಯದ ಹೊಸ್ತಿಲು?

ಬರವಣಿಗೆಯು ನನ್ನ ವೃತ್ತಿಯಲ್ಲ, ಹವ್ಯಾಸವಷ್ಟೇ! ಏಳನೇಯ ತರಗತಿಯಲ್ಲಿದ್ದಾಗೊಮ್ಮೆ ರಚಿಸದ 'ಕಥೆ'ಯೊಂದನ್ನು ಬಿಟ್ಟರೆ ನನ್ನ ಬರವಣಿಗೆಗಳೇನೇ ಇದ್ದರೂ ಅವು ಕೇವಲ ಈ ನನ್ನ ಬ್ಲಾಗ್ ಗೆ ಮಾತ್ರ ಸೀಮಿತವಾದಂಥವು. ಯಾವುದೊ ಪ್ರೇರಣೆಗೊಳಪಟ್ಟು ಈಗೊಮ್ಮೆ ಆಗೊಮ್ಮೆ ಲೇಖನಗಳನ್ನು ಕೆಲವು ದಿನಪತ್ರಿಕೆಗಳಿಗೆ ಕಳುಹಿಸಿದ್ದೂ ಉಂಟು; ಆದರೆ ಅವೆಲ್ಲವುಗಳೂ ಸಹ ಇತರೆ ಅನೇಕ ಬರೆಹಗಳ ಜೊತೆ 'ಕಸದ ಬುಟ್ಟಿ' ಸೇರಿಕೊಂಡದ್ದು ಈಗ ನೆನಪು ಮಾತ್ರ.

ಹೀಗಿರುವಾಗ, ಕರ್ನಾಟಕ ಪಶುವೈದ್ಯ ಸಂಘ, ಬೆಂಗಳೂರು ಇವರು ಹೊರತರುತ್ತಿರುವ 'ಪಶುವೈದ್ಯ ಧ್ವನಿ' ಎಂಬ ಚಾತುರ್ಮಾಸಿಕ ವೃತ್ತಿಪರ ಸುದ್ದಿ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯನಾಗಿ ಕಾರ್ಯ ನಿರ್ವಹಿಸುವ ಅವಕಾಶ ಮಾಡಿಕೊಟ್ಟಾಗ ನನಗೆ ಆಶ್ಚರ್ಯದ ಜೊತೆಗೆ ಆಘಾತವೂ ಆಯಿತು. ತದನಂತರ ಪ್ರಕಟಗೊಂಡಿರುವ ಎರಡೂ ಸಂಚಿಕೆಗಳಿಗೆ ನನ್ನ ಕೊಡುಗೆ ಶೂನ್ಯ; ಇದರ ಸಂಪೂರ್ಣ ಅರಿವು ನನಗಿದ್ದು, ಮುಂಬರುವ ಸಂಚಿಕೆಗಳಿಗೆ ನನ್ನ ಶಕ್ತಿ-ಸಮಯಾನುಸಾರ ಕೆಲಸ ಮಾಡುವ ಆಶಯ ಹೊಂದಿದ್ದೇನೆ.

ಈ ಮಧ್ಯೆ, 'ಪಶುವೈದ್ಯ ಧ್ವನಿ' ಪತ್ರಿಕೆಯಲ್ಲಿ ಪಶುವೈದ್ಯ ವೃತ್ತಿಪರರಾದ ನಮ್ಮೆಲ್ಲರಿಗೆ ಉಪಯುಕ್ತವಾಗು ರೀತಿಯಲ್ಲಿ 'ಗಣಕ ಮತ್ತು ಅಂತರ್ಜಾಲ' ವಿಷಯವಾಗಿ ಮೂಲಭೂತ ಅಂಶಗಳನ್ನು ಚರ್ಚಿಸುವ ಉದ್ದೇಶದೊಂದಿಗೆ 'ಜಾಲ ಲೀಲ' ಎಂಬ ಅಂಕಣವನ್ನು ನಿಯತವಾಗಿ ಬರೆಯಲು ಅನುಮತಿ ನೀಡುವಂತೆ ನಾನು ಕೋರಿದಾಗ, ಒಮ್ಮತದಿಂದ ಒಪ್ಪಿಕೊಂಡ ಕರ್ನಾಟಕ ಪಶುವೈದ್ಯ ಸಂಘದ ಅಧ್ಯಕ್ಷರು ಹಾಗೂ ಪಶುವೈದ್ಯ ಧ್ವನಿ ಪತ್ರಿಕೆಯ ಪ್ರಧಾನ ಸಂಪಾದಕರಿಗೆ ನಾನು ಚಿರಋಣಿ.

ಗಣಕ ಮತ್ತು ಅಂತರ್ಜಾಲಗಳ ವಿಷಯವಾಗಿ ನನ್ನ ಜ್ಞಾನವು ಅತ್ಯಂತ ಸೀಮಿತವಾದುದು; ಆದರೂ, ನನಗೆ ತಿಳಿದಿರುವುದನ್ನು ನನ್ನ ಪಶುವೈದ್ಯ ವೃತ್ತಿಪರರೊಂದಿಗೆ ಹಂಚಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಹೊರಟಿದ್ದೇನೆ. ಈ ನಿಟ್ಟಿನಲ್ಲಿ ಮೂಡಿಬಂದಿರುವ ಪ್ರಥಮ ಲೇಖನ 'Web Browser : ಅಪಾಯದ ಹೊಸ್ತಿಲು?' ಮುದ್ರಣ ಕಂಡಿದ್ದು, ಅದನ್ನು ನಿಮ್ಮೊಡನೆ ಹಂಚಿಕೊಂಡಿದ್ದೇನೆ. ನಿಮ್ಮ ಸಲಹೆ, ವ್ಯಾಖ್ಯಾನ, ಅನಿಸಿಕೆ ಹಾಗೂ ವಿಮರ್ಶೆಗಳಿಗೆ ನಾನು ಮುಕ್ತ.
ಲೇಖನ - 1

1995 ರ ಸುಮಾರಿನಲ್ಲಿ ಪ್ರಥಮವಾಗಿ ನಾನು ನನ್ನ personal computer ಗೆ dial-up ಸೇವೆಯ ಮೂಲಕ ಅಂತರ್ಜಾಲದ ಸಂಪರ್ಕ ಕಲ್ಪಿಸಿಕೊಂಡಾಗ ಎದೆಬಡಿತವು ನಿಮಿಷಕ್ಕೆ ನೂರು ದಾಟಿತ್ತು! ಅಂದಿನ ದಿನಗಳಲ್ಲಿ ಅಂತರ್ಜಾಲದೊಂದಿಗಿನ ಸಂಪರ್ಕ ಅತೀ ವಿರಳವಾದ್ದರಿಂದ, ಉದ್ವೇಗ-ಹೆದರಿಕೆ ಒಮ್ಮೆಲೇ ನನ್ನನ್ನು ಆವರಿಸಿಕೊಂಡಿದ್ದವು. ಇಂದು ಅನೇಕ ವಿನೂತನ ತಂತ್ರಜ್ಞಾನಗಳ ಆವಿಷ್ಕಾರವಾಗಿದ್ದು, ಅಂತರ್ಜಾಲದ ಒಡನಾಟವಿಲ್ಲದ ಗಣಕಯಂತ್ರವು ನಿಷ್ಪ್ರಯೋಜಕವೆಂಬ ಭಾವನೆ ಜನಸಾಮಾನ್ಯರಲ್ಲಲ್ಲದಿದ್ದರೂ ವೃತ್ತಿಪರರಲ್ಲಿ ಈಗಾಗಲೇ ಮೂಡಿದೆ.

ಇಂದಿಗೆ ಅಂತರ್ಜಾಲವು ಬೃಹದಾಕಾರವಾಗಿ ಬೆಳೆದು ನಿಂತಿದೆ. ಅಂತರ್ಜಾಲದ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ಹಲವಾರು ತಂತ್ರಜ್ಞಾನ-ತಂತ್ರಾಂಶಗಳಲ್ಲಿ web browsers ಗಳದ್ದೇ ಸಿಂಹಪಾಲು. Browser ಹೊರತುಪಡಿಸಿ ಬೇರೆ ಇನ್ನಾವ ಸಾಧನದ ಮೂಲಕವೂ ನಮ್ಮ ಅಂತರ್ಜಾಲದ ಬಳಕೆ ಕಷ್ಟಸಾಧ್ಯವೆನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಪ್ರಪಂಚದ ಬೇರೆ ಯಾವುದೋ ಮೂಲೆಯಲ್ಲಿನ ಗಣಕಯಂತ್ರದಲ್ಲಿರುವ ಉಪಯುಕ್ತ ಮಾಹಿತಿಯನ್ನು ನಾವು ನಮ್ಮ ಯಂತ್ರದ ಪರದೆಯ ಮೇಲೆ ಕುಳಿತಲ್ಲಿಯೇ ಪಡೆದುಕೊಳ್ಳಲು ಅನುವುಮಾಡಿಕೊಡಲು ಹುಟ್ಟಿಕೊಂಡ ಈ browser ಎಂಬ ಸಾಧನವು ಇಂದು ಗಣಕಯಂತ್ರದಲ್ಲಿನ ನಮ್ಮ ಬಹುತೇಕ ಎಲ್ಲಾ ದೈನಂದಿನ ಕಾರ್ಯಗಳನ್ನು ಕ್ಷಣಮಾತ್ರದಲ್ಲಿಯೇ ಮಾಡಿಮುಗಿಸಿ, ಪ್ರತಿಯೊಬ್ಬರ ಬೇಡಿಕೆಗಳಿಗನುಸಾರವಾಗಿ ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

Browser ಗಳು ನಮಗೆ ಎಷ್ಟು ಉಪಕಾರಿಯಾಗಿವೆಯೋ, ಅಷ್ಟೇ ಅಪಾಯಕಾರಿಯಾಗಿ ಪರಿಣಮಿಸಬಹುದಾದ ಸಾಧ್ಯತೆಗಳಿರುವುದೂ ನಿಜವಷ್ಟೆ! ತಪ್ಪೆಸಗುವುದು ಹೇಗೆ ಮಾನವ ಸಹಜ ಗುಣವೋ ಹಾಗೆಯೇ ಮಾನವ ನಿರ್ಮಿತ browser ಗಳು ದೋಷಗಳನ್ನು ಹೊಂದಿರುವುದೂ ಸಹ ಅಷ್ಟೇ ಸಹಜ. ಇಂತಹ ಸೂಕ್ಷ್ಮ ತಾಂತ್ರಿಕ ದೋಷಗಳು ನಾವು ಊಹಿಸಿಕೊಳ್ಳಲಾಗದಂತಹ ತೀವ್ರತರ ಅಪಾಯಗಳಿಗೆ ನಮ್ಮನ್ನು ನಮ್ಮ ಅರಿವಿಗೆ ಬಾರದಂತೆಯೇ ಸಿಲುಕಿಸಿದರೆ ಆಶ್ಚರ್ಯವೇನಿಲ್ಲ! ಇದ್ದಕ್ಕಿದ್ದ ಹಾಗೆಯೇ Net Banking ಸೌಲಭ್ಯವಿರುವ ನಮ್ಮ ಉಳಿತಾಯ ಖಾತೆಯಲ್ಲಿನ ಹಣವು ಇಲ್ಲವಾಗುವುದು, Credit Card ತಂತಾನೇ ಅಂತರ್ಜಾಲ ತಾಣವೊಂದರಲ್ಲಿ ವ್ಯವಹರಿಸಿಕೊಳ್ಳುವುದು, ಯಾವುದೋ ಜಾಲತಾಣದ ಖಾತೆಗೆ ಪ್ರವೇಶಿಸಲು ಬಳಸುವ password ಬದಲಾಗಿಹೋಗುವುದು, ನಮ್ಮ ಗಣಕಯಂತ್ರದಲ್ಲಿ ಶೇಖರಿಸಿದ್ದ ಕಡತದಲ್ಲಿನ ಗುಪ್ತ ಮಾಹಿತಿಯ ಸೋರಿಕೆಯಾಗುವುದು, ನಿನ್ನೆಯವರೆಗೂ ಚಂದವಾಗಿ ಕಾರ್ಯನಿರ್ವಹಿಸುತ್ತಿದ್ದ computer ಇಂದು ದಿಢೀರ್ ಸ್ತಬ್ಧವಾಗುವುದು ಹಾಗೂ ಇನ್ನೂ ಇಂತಹ ಅನೇಕ ಚಮತ್ಕಾರಗಳು ನಡೆದುಹೋಗಲು browser ಗಳು ಕಾರಣವಾಗುವ ಎಲ್ಲಾ ಸಾಧ್ಯತೆಗಳೂ ಇವೆ ಎಂಬುದು ವಾಸ್ತವ.

SQL Injection, Phishing, URL Redirection, Session Hijacking, Cross-Site Request Forgery, Malware/Spyware Attack, DNS Hijacking ಮುಂತಾದ ಸುರಕ್ಷಾ-ಬೇಧ ಅನೈತಿಕ ಚಟುವಟಿಕೆಗಳು ನಾವು ಪ್ರತಿನಿತ್ಯ ಬಳಸುವ browser ಗಳ ಮೂಲಕವೂ ನಡೆಯುತ್ತವೆ ಎನ್ನುವುದರ ಅರಿವು ನಮಗಿರಬೇಕಾಗುತ್ತದೆ. ಈ ರೀತಿಯ ಬಹುತೇಕ ಅನಾಹುತಗಳು browser ಗಳಲ್ಲಿ ಇರಬಹುದಾದ ಸೂಕ್ಷ್ಮ ಅಭಿವೃದ್ಧಿ ದೋಷಗಳಿಂದ ಮಾತ್ರವಲ್ಲದೇ, ಬಳಕೆದಾರರಾದ ನಮ್ಮ ನಿರ್ಲಕ್ಷ್ಯ ಅಥವಾ ಉದಾಸೀನತೆಯಿಂದಲೂ ಸಹ ಸಂಭವಿಸುತ್ತವೆಂಬುದನ್ನು ಅಲ್ಲಗಳೆಯುವಂತಿಲ್ಲ.

ಅಂತರ್ಜಾಲವೆಂಬ ಮಹಾಸಾಗರದ ಹೆಬ್ಬಾಗಿಲಿಗೆ ಹೊಸ್ತಿಲಿನಂತಿರುವ Internet Explorer, Mozilla Firefox, Opera, Google Chrome ಮುಂತಾದ Web Browser ಗಳ ಆಯ್ಕೆ, ಬಳಕೆ ಮತ್ತು ನಿರ್ವಹಣೆಯಲ್ಲಿ ನಾವು ಎಡವಿದರೆ ಅಪಾಯ ತಪ್ಪಿದ್ದಲ್ಲ. ಹಾಗಾದರೆ ಉತ್ತಮ ಹಾಗೂ ಸುರಕ್ಷಿತ browser ನ ಆಯ್ಕೆ ಹೇಗೆ? ಸುರಕ್ಷತೆಯ ದೃಷ್ಟಿಯಿಂದ browser ನ ಬಳಕೆಗೆ ಎಲ್ಲೆ ಯಾವುದು? Browser ಗಳ ಬಳಕೆಯಲ್ಲಿ ನಾವು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳೇನು? Browser ಗಳ ಮೂಲಕ ನಡೆದುಹೋಗಬಹುದಾದ ಅಚಾತುರ್ಯಗಳನ್ನು ತಡೆಗಟ್ಟುವ ಮಾರ್ಗೋಪಾಯಗಳೇನು? ಇಂಥಹ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳೋಣ, ಮುಂಬರುವ ಸಂಚಿಕೆಗಳಲ್ಲಿ. . .
(ಈ ಲೇಖನವನ್ನು ನುಡಿ ತಂತ್ರಾಂಶದ ASCII ಸ್ವರೂಪದಿಂದ UNICODE ಗೆ ಪರಿವರ್ತಿಸಲು ಹಳ್ಳಿಮನೆ ಅರವಿಂದ ಅವರ ASCII2UNICODE ತಂತ್ರಾಂಶ ಬಳಸಲಾಗಿದ್ದು, ಇಂಥಹ ಒಂದು ಉಪಯುಕ್ತ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಆತ್ಮೀಯ ಗೆಳೆಯ ಅರವಿಂದ ಅವರಿಗೆ ನನ್ನ ತುಂಬುಹೃದಯದ ಅಭಿನಂದನೆಗಳು)

ಮುಂದಿನ ಲೇಖನ ಇಲ್ಲಿದೆ: Web Browser : ಜಾಣ್ಮೆಯ ಆಯ್ಕೆ

Tuesday, April 24, 2012

Social Sense

Bangalore Metropolitan Transport Corporation (BMTC) buses play a vital role in my daily life; since they are my only means of commuting from home to work and back. It's such a 'pleasure', 'fun' and 'adventure' traveling in BMTC buses, one can realize it by personal experience alone. If you ain't traveling in BMTC, you definitely are missing the cruise of life for sure!

I always try to keep myself calm and relaxed while in city buses, in spite of all the drama happening around; mostly ending up falling asleep* (*if at all I get a seat to sit). Many a times I do wonder, how on this earth am repeatedly ending up sleeping in a crowded public shuttle? that too in BMTC! Does this effort of mine deserve an applause??

It was probably 6 months ago by now and an early morning when I (as usual) managed to (literally) jump into one of those speeding buses busy running a 'rat race' towards their common destination. Hardly I could find a few other passengers in the bus, who were still showing signs of discomfort recovering from their adventurous act of getting into the bus. Though the tupperware box getting burnt by the hot rice packed by my wife inside bag needed all the air gushing in from the window, I luckily could slide shut the glass shutter with ease (sometimes the windshields seldom move and some would have no handles, while few others might have went missing!).

While numerous PHP codes kept on dancing in joy for me being unable to put them right into the logics, a guy in his mid-teens gave a blasting entry with his cell phone singing aloud an old Kannada 'melody' - PREETIYALLI IRO SUKHA GOTTE IRALILLA.. HUU ANTIYAa? UHUU ANTIYAa..?? With this, my PHP application trying to find a way in executing the given logic crashed at once.

"Excuse me.." I spoke instantly
The guy looked at me, in response
"Can you please put your headset on?"
"I don't have one.." he complained
"Then, please mute the sound"
"Why should I?"
"Don't you think it might disturb others around?"
"Now a days drivers have FMs playing loudly in buses, would you go objecting at them too?" - an elderly-'looking' man interrupted and advised me "You cannot control things in public places.." while the song was still on and loud. Following this, couldn't even think of debugging my crashed codes for rest of the day; I was (sort of) upset.

It was only yesterday, I saw a notice displayed in one of the BMTC buses, which read:
Translation: BMTC, Head Office, Shantinagar, Bangalore - 27. Notice for passengers & students: Playing music loudly from mobile phones in buses causing noise pollution and inconvenience to co-passengers is prohibited. It is a punishable offense. Please co-operate.
On reading this, I felt more unhappy than happy; for in this modern educated world, people tend to forget, neglect and never try to understand even simplest things unless enforced by law; the need of the hour seems to be 'social sense'. Sigh..