Showing posts with label ಸಮಾಜ : Society. Show all posts
Showing posts with label ಸಮಾಜ : Society. Show all posts

Monday, October 21, 2013

ರಾಗಿ ಬ್ರಹ್ಮರ ಕುರಿತ ಚಾರಿತ್ರಿಕ ಕೃತಿ

ಮಡದಿ ಹಾಗೂ ಮಗಳನ್ನು ಭೇಟಿ ಮಾಡಲು ದೆಹಲಿಗೆ ತೆರೆಳಿದ್ದೆನು; ಅಲ್ಲಿ ಕಳೆದ ಏಳು ದಿನಗಳು ಕೇವಲ ಏಳು ಘಂಟೆಗಳಂತೆ ಉರುಳಿಹೋಗಲಾಗಿ, ಹಿಂತಿರುಗಿ ಬೆಂಗಳೂರಿಗೆ ಪಯಣಿಸಲು ಅಣಿಯಾಗುತ್ತಿರುವಾಗ ನನ್ನ ಬಗಲಚೀಲವನ್ನು ಹಿಡಿದು ನನ್ನಾಕೆ "ಏಕಿಷ್ಟು ಭಾರ?" ಎಂದು ಪ್ರಶ್ನಿಸುತ್ತಿರುವಾಗಲೇ ಆಕೆಗೆ ಅದರ ಕಾರಣದ ಅರಿವಾಗಿದ್ದಿರಬೇಕು. "ಓದಲು ಕೆಲವು ಪುಸ್ತಕಗಳನ್ನು ತಂದಿದ್ದೆ.." ನನ್ನ ಮಾತುಗಳನ್ನು ಮುಗಿಸುವ ಮುನ್ನವೇ ಕಂಡ ಆಕೆಯ ಮುಗುಳ್ನಗು 'ನೀವು ಎಂದಿಗೂ ಬದಲಾಗಲಾರಿರಿ..' ಎಂದಂತೆ ಭಾಸವಾಯಿತು. ಅಲ್ಲಿದ್ದ ಐದು ಪುಸ್ತಕಗಳಲ್ಲಿ ನಾನು ಬಹುದಿನಗಳಿಂದ ಒಂದೇ ಹಿಡಿತದಲ್ಲಿ ಓದಿ ಮುಗಿಸಲು ಉದ್ದೇಶಿಸಿದ್ದ 'ರಾಗಿ ಲಕ್ಷ್ಮಣಯ್ಯ'ನವರ ಕುರಿತಾದ ಕೃತಿಯೂ ಒಂದು.

ಸಾಮಾನ್ಯವಾಗಿ ನಾನು ಪುಸ್ತಕಗಳನ್ನು ಸಂಗ್ರಹಿಸುವಾಗ ಅದರಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಲೇಖಕರ ಹಸ್ತಾಕ್ಷರವನ್ನು ಪಡೆದುಕೊಳ್ಳುವುದು ರೋಢಿ; ಈ ಪುಸ್ತಕವೂ ಇದಕ್ಕೆ ಹೊರತಾಗಿರಲಿಲ್ಲ. "ಪ್ರೀತಿಯಿಂದ ಡಾ. ಪ್ರಶಾಂತ್ ರವರಿಗೆ – ಡಾ. ಎಂ. ನಾರಾಯಣಸ್ವಾಮಿ" ಎಂಬ ಹಸ್ತಾಕ್ಷರದ ಹಿಂದಿದ್ದ ಆತ್ಮೀಯತೆಯು ಕೃತಿಯ ಮೇಲಿನ ನನ್ನ ಪ್ರೀತಿಯನ್ನು ಇಮ್ಮಡಿಗೊಳಿಸಿತ್ತು. ದೆಹಲಿಗೆ ಹೊರಟು ಹಿಂತಿರುಗಿ ಬೆಂಗಳೂರಿಗೆ ಮರಳುವುದರೊಳಗೆ ಈ ಪುಸ್ತಕವನ್ನು ಶ್ರದ್ಧೆಯಿಂದ ಓದಿ, ಅದರ ಬಗೆಗಿನ ನನ್ನ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳುವಂತಾದದ್ದು ಹರ್ಷದ ಸಂಗತಿ.

ಈ ಹೊತ್ತಿಗೆ ನಿಮ್ಮ ಅರಿವನ್ನು "ರಾಗಿ ಲಕ್ಷ್ಮಣಯ್ಯ ಎಂದರೆ ಯಾರು..?" ಎಂಬ ಪ್ರಶ್ನೆಯು ಆವರಿಸಿದ್ದಿರಬಹುದು! ಬಹುಶಃ ಪ್ರೊ. ಎಂ. ನಾರಾಯಣಸ್ವಾಮಿ ಹಾಗೂ ರಮೇಶ್ ಸಂಕ್ರಾಂತಿ ಇವರುಗಳು ಸಂಪಾದಿಸಿರುವ 'ತೆನೆ ಮರೆಯ ಕ್ರಾಂತಿ ರಾಗಿ ಲಕ್ಷ್ಮಣಯ್ಯ – ಇಂಡಾಫ್ ರಾಗಿ ತಳಿಗಳ ಕಂಡುಹಿಡಿದ ವಿಜ್ಞಾನಿ' ಎಂಬ ಕೃತಿಯು ಕಳೆದ ಡಿಸೆಂಬರ್ ಅಂತ್ಯದಲ್ಲಿ ಲೋಕಾರ್ಪಣೆಗೊಳ್ಳದೇ ಹೋಗಿದ್ದರೆ, ಅವಿರತವಾಗಿ ರಾಗಿ ತಳಿ ಅಭಿವೃದ್ಧಿಯಲ್ಲಿ ಮೌನ ಕ್ರಾಂತಿ ನಡೆಸಿದ ಸಂತ ವಿಜ್ಞಾನಿ ಡಾ. ಸಿ. ಹೆಚ್. ಲಕ್ಷ್ಮಣಯ್ಯನವರ ಬಗ್ಗೆ ತಿಳಿದುಕೊಳ್ಳುವ ಸೌಭಾಗ್ಯ ನನ್ನಂತೆ ಇನ್ನೂ ಅನೇಕ ಕನ್ನಡಿಗರಿಗೆ ಖಂಡಿತವಾಗಿಯೂ ಒದಗಿ ಬರುತ್ತಿರಲಿಲ್ಲವೇನೋ.. ಈ ನಿಟ್ಟಿನಲ್ಲಿ ಲೇಖಕರುಗಳದ್ದು ಅದ್ವಿತೀಯ ಸಾಧನೆಯೆಂದೇ ಹೇಳಬೇಕು.

ಪರಕೀಯ ಪರಾಗಸ್ಪರ್ಶಕ್ಕೆ ತೆರೆದುಕೊಳ್ಳದ ರಾಗಿ ಬೆಳೆಯ ತಳಿ ಅಭಿವೃದ್ಧಿಯು ಅಸಾಧ್ಯವೆಂದು ಇಡೀ ಪ್ರಪಂಚವೇ ಕೈಚೆಲ್ಲಿ ಕೂತರೂ, ಡಾ. ಲಕ್ಷ್ಮಣಯ್ಯನವರು ತಮ್ಮ ಛಲಬಿಡದ ನಿರಂತರ ಸಂಶೋಧನೆಯಿಂದಾಗಿ 'ವಿಶೇಷ ಸಂಪರ್ಕ ವಿಧಾನ'ವನ್ನು ಆವಿಷ್ಕರಿಸಿ, ರಾಗಿ ಬೆಳೆಯ ತಳಿ ಅಭಿವೃದ್ಧಿಯಲ್ಲಿ ಯಶಸ್ಸು ಗಳಿಸಿದರು. ಇವರು ಅಭಿವೃದ್ಧಿಪಡಿಸಿದ ಅರುಣ, ಅನ್ನಪೂರ್ಣ, ಉದಯ, ಕಾವೇರಿ ರಾಗಿ ತಳಿಗಳು ಸಾಂಪ್ರದಾಯಿಕ ರಾಗಿ ತಳಿಗಳಿಗಿಂತ ಉತ್ಕೃಷ್ಟವಾಗಿವೆ. ಅಲ್ಲದೇ, ಸ್ಥಳೀಯ ರಾಗಿ ಬೆಳೆ ಹಾಗೂ ಆಫ್ರಿಕ ಮೂಲದ ರಾಗಿ ಬೆಳೆಗಳ ಸಂಕರಣದಿಂದ ಇವರು ಅಭಿವೃದ್ಧಿಪಡಿಸಿದ 'ಇಂಡಾಫ್' - 1 ರಿಂದ 15 ತಳಿಗಳು ರಾಗಿ ಬೇಸಾಯದಲ್ಲಿ ಕ್ರಾಂತಿಯನ್ನೇ ಉಂಟುಮಾಡಿವೆ. ಇದರಿಂದಾಗಿ ರಾಗಿ ಬೆಳೆಯುವ ರೈತರ ಹಸಿವೆ ಮಾತ್ರವಲ್ಲ, ಇಂಡಾಫ್ ಬೆಳೆಗಳಿಂದ ದೊರೆತ ಅಗಾಧ ಹುಲ್ಲಿನಿಂದ ಜಾನುವಾರುಗಳ ಹಸಿವೆಯೂ ಸಹ ನೀಗಿದೆ. ತಮ್ಮ ಫಲಾಪೇಕ್ಷೆ ಇಲ್ಲದ ಸತತ ಪರಿಶ್ರಮದಿಂದ ರೈತರ ಪಾಲಿನ ದೇವತೆಯಾದ ಲಕ್ಷ್ಮಣಯ್ಯನವರು ಕೃಷಿ ವಿಶ್ವವಿದ್ಯಾಲಯ ಹಾಗೂ ಸರ್ಕಾರಗಳ ಪಾಲಿಗೆ ಅಸ್ಪೃಶ್ಯರಾಗಿಯೇ ಉಳಿದುಹೋದದ್ದು ದುರಂತ.

ರಾಗಿ ಲಕ್ಷ್ಮಣಯ್ಯನವರ ಆತ್ಮೀಯರು, ಅವರ ಸಮಕಾಲೀನರಾದವರಿಂದ ಸುಮಾರು 24 ಲೇಖನ ಹಾಗೂ ನಿರೋಪಣಾ ಲೇಖನಗಳನ್ನು ಹೊಂದಿರುವ ಈ ಕೃತಿಯು, ತನ್ನ ಪ್ರತಿಯೊಂದು ಲೇಖನದಲ್ಲೂ ರಾಗಿ ಲಕ್ಷ್ಮಣಯ್ಯನವರ ಶ್ರೀಮಂತ, ವಿಶಿಷ್ಟ, ವಿಶೇಷ, ಸರಳ ವ್ಯಕ್ತಿತವನ್ನು ಹಲವಾರು ದೃಷ್ಟಿಕೋನದಿಂದ ಓದುಗರಿಗೆ ಪರಿಚಯಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಇಂದಿಗೆ ಸರಿಯಾಗಿ ಎರಡು ದಶಕಗಳ ಹಿಂದೆ ಕಾಲವಾದ, ಜೀವಿತದಲ್ಲೂ ನೇಪಥ್ಯ ಸೇರಿದಂತೆ ಬದುಕಿದ್ದ ವಿಶಾಲ ವ್ಯಕ್ತಿತ್ವದ ಮೌನ ಸಾಧಕರನ್ನು ಈ ಚಾರಿತ್ರಿಕ ಕೃತಿಯ ಮೂಲಕ ಯುವಪೀಳಿಗೆಗೆ ಸಾಹಿತ್ಯಿಕ ರೂಪದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಪುನರ್ ಸೃಷ್ಟಿಸಿರುವ ಸಂಪಾದಕರುಗಳಿಗೆ ಅನಂತ ನಮನಗಳು ಸಲ್ಲಲೇಬೇಕು. ಅಲ್ಲದೇ, ಈ ಕೃತಿಯನ್ನು ಒಟ್ಟಾರೆ ಸೂಕ್ಷ್ಮವಾಗಿ ಗಮನಿಸಿದಲ್ಲಿ ಅದರ ಹಿಂದಿರಬಹುದಾದ ಸಂಪಾದಕರ ಶ್ರದ್ಧೆ-ಪರಿಶ್ರಮಗಳು ನಮ್ಮ ಅರಿವಿಗೆ ಬರುತ್ತವೆ. ಡಾ. ಜೆ. ಬಾಲಕೃಷ್ಣರ ಮುಖಪುಟ ವಿನ್ಯಾಸ ಪುಸ್ತಕಕ್ಕೆ ಮೆರುಗು ನೀಡಿದೆ. ಇಂತಹ ವಿರಳವೆನ್ನಬಹುದಾದ ಸಾಧನೆಗೆ ಪ್ರೋತ್ಸಾಹಿಸುವ ಮೂಲಕ 'ಅಸೀಮ ಅಕ್ಷರ' ಪ್ರಕಾಶನವು ಸಾರ್ಥಕ್ಯ ಪಡೆದುಕೊಂಡಿದೆ.

ಒಂದು ಕಾಲಘಟ್ಟದಲ್ಲಿ ಕೇವಲ ಬಡವರ-ದಲಿತರ 'ಅನ್ನ'ವಾಗಿದ್ದ 'ಕರಿರಾಗಿ'ಯು ಇಂದಿನ ಹದಗೆಟ್ಟ ಆಹಾರ-ಜೀವನ ಶೈಲಿಯಿಂದಾಗಿ ನಿಧಾನವಾಗಿ ಅದಕ್ಕಂಟಿಕೊಂಡಿದ್ದ ಸಾಮಾಜಿಕ ಅಂತಸ್ತುಗಳ ಸಂಕೋಲೆಗಳ ಕಪಿಮುಷ್ಟಿಯಿಂದ ಮುಕ್ತವಾಗಿ ಪ್ರತಿಯೊಬ್ಬರ ದಿನನಿತ್ಯದ ಆಹಾರವಾಗುತ್ತಿದೆ. ಇಂತಹ ಮಹತ್ವದ ಸಂಕ್ರಮಣ ಕಾಲದಲ್ಲಿ, ರಾಗಿ ಬೆಳೆಯ ಅಭಿವೃದ್ಧಿಗಾಗಿ ತಮ್ಮ ಜೀವಿತಾವಧಿಯನ್ನೇ ಮುಡಿಪಾಗಿಟ್ಟ 'ರಾಗಿ ಲಕ್ಷ್ಮಣಯ್ಯ'ನವರ ಕುರಿತ ಈ ಚಾರಿತ್ರಿಕ ಕೃತಿಯು ಮೂಡಿಬಂದಿರುವುದು ಅತ್ಯಂತ ಸಮಂಜಸವೆನಿಸುತ್ತದೆ. ರಾಗಿಯನ್ನು ಯಾವುದೇ ರೂಪದಲ್ಲಾದರೂ ಆಹಾರವಾಗಿ ಸೇವಿಸುತ್ತಿರುವ ಪ್ರತಿಯೊಬ್ಬರೂ ಈ ಕೃತಿಯನ್ನು ಓದಲೇಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಪುಸ್ತಕ ಪರಿಚಯ

ಶೀರ್ಷಿಕೆ: ತೆನೆ ಮರೆಯ ಕ್ರಾಂತಿ ರಾಗಿ ಲಕ್ಷ್ಮಣಯ್ಯ – ಇಂಡಾಫ್ ರಾಗಿ ತಳಿಗಳ ಕಂಡುಹಿಡಿದ ವಿಜ್ಞಾನಿ

ಸಂಪಾದಕರು: ಪ್ರೊ. ಎಂ. ನಾರಾಯಣಸ್ವಾಮಿ ಹಾಗೂ ರಮೇಶ್ ಸಂಕ್ರಾಂತಿ

ಪ್ರಕಾಶಕರು: ಅಸೀಮ ಅಕ್ಷರ, ಅಮೃತನಗರ, ಬೆಂಗಳೂರು

ಪ್ರಥಮ ಮುದ್ರಣ: 2012

ಬೆಲೆ: ರೂ. 100/-
ಪ್ರತಿಯೊಬ್ಬ ಮನುಷ್ಯನೂ ಆಂತರಿಕವಾಗಿ ಸತ್ಯಶೋಧಕನೇ. ಆದರೆ, ಸತ್ಯಶೋಧನೆಗೆ ಏಕಾಗ್ರತೆ, ಸಹನೆ, ಆಳವಾದ ಜ್ಞಾನ, ಫಲಾಪೇಕ್ಷೆ ಇಲ್ಲದ ಸತತ ಸಾಧನೆ ಮುಖ್ಯ.
- ಡಾ. ಸಿ. ಹೆಚ್. ಲಕ್ಷ್ಮಣಯ್ಯ

Friday, July 12, 2013

ಅಂಧೆಯ ಬದುಕಿಗೆ ಬೆಳಕಾದೀತೆ ನ್ಯಾಯಾಂಗ?

ಚಿಕ್ಕಬಳ್ಳಾಪುರ ಜಿಲ್ಲೆಯ ಬಗೇಪಲ್ಲಿ ಎಂಬ ಪುಟ್ಟ ಹಳ್ಳಿ; ತಮ್ಮ ದಿನನಿತ್ಯದ ಕಾಯಕಕ್ಕೆ ಹೊರಟಿದ್ದ ಕುರಿ ಕಾಯುವ ಹುಡುಗರಿಗೆ ಕ್ಷೀಣ ಧ್ವನಿಯ ಹೆಣ್ಣಿನ ರೋದನೆ ಕೇಳಿಸುತ್ತದೆ. ಅತ್ತಿತ್ತ ಹುಡುಕಾಡಿದ ಕುರಿಯವರಿಗೆ, ಸಮೀಪದ ಹೊಲದಲ್ಲಿದ್ದ ಪಾಳುಬಾವಿಯೂಂದರೊಳಗೆ ಬಿದ್ದು ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದ ಒಬ್ಬ ಹೆಂಗಸು ಕಾಣಿಸುತ್ತಾಳೆ. ಕೊಳವೆಬಾವಿಗಳ ಹಾವಳಿಯಿಂದ ಮರುಗಿಹೋಗಿದ್ದ ಪುರಾತನ ಪಳೆಯುಳಿಕೆಯೊಳಗಿಂದ ಹೆಣ್ಣುಮಗಳನ್ನು ಹೊರತರಲು ಹರಸಾಹಸ ಮಾಡಿದವರಿಗೆ ಅಚ್ಚರಿ-ಕುತೂಹಲ ಕಾದಿತ್ತು; ಆಕೆ ಗರ್ಭಿಣಿಯಷ್ಟೇ ಅಲ್ಲ, ಅಂಧೆಯೂ ಕೂಡ.

ಜುಲೈ ಆರರ ಶನಿವಾರ, ತಡರಾತ್ರಿಯಲ್ಲಿ "ಆದಪ್ಪ" ಅಂಧೆಯಾದ "ಗೌರಿ"ಯನ್ನು (ಹೆಸರು ಬದಲಿಸಲಾಗಿದೆ) ಮದುವೆಯಾಗುವುದಾಗಿ ನಂಬಿಸಿ ತನ್ನೊಡನೆ ಕರೆದೊಯ್ಯುತ್ತಾನೆ. ಅಂಗವಿಲಕೆಯಾದ ಹೆಣ್ಣು ತನ್ನೊಡಲಿನಲ್ಲಿ ಬೆಳೆಯುತ್ತಿದ್ದ ಕೂಸಿಗೆ ತಂದೆಯಾದ ಆದಪ್ಪನನ್ನಲ್ಲದೆ ಮತ್ತಿನ್ಯಾರನ್ನು ನಂಬಿಯಾಳು? ಗಾಡಾಂಧಕಾರದ ತನ್ನ ಪ್ರಪಂಚದಾಚೆಗೆಲ್ಲೋ ಇರಬಹುದಾದ ನವಜೀವನದ ಸುಂದರ ಕನಸನ್ನು ಕಾಣುತ್ತಾ ಹೊರಟಿದ್ದ ಗೌರಿಗೆ ಆಘಾತ ಕಾದಿತ್ತು.. ಮದುವೆಯಾಗಿ ಬಾಳಿನ ಬೆಳಕು ಹೊತ್ತಿಸುವುದಾಗಿ ವಚನ ನೀಡಿ, ಎಲ್ಲವನ್ನೂ ಪಡೆದುಕೊಂಡಿದ್ದಾತ ನಡುರಾತ್ರಿಯಲ್ಲಿ ಆಕೆಯನ್ನು ಕರೆತಂದು ಹತ್ತಿರದ ಹಾಳುಬಾವಿಯೊಂದಕ್ಕೆ ತಳ್ಳಿಬಿಟ್ಟಿದ್ದ. ತೆವಲು ತೀರಿಸಿಕೊಂಡಾತನಿಗೆ ಕಣ್ಣು ಕಾಣದ ಕುರುಡಿಯಾಗಲೀ, ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ತನ್ನ ಪಿಂಡವಾಗಲಿ ಬೇಕಾಗಿರಲಿಲ್ಲ.

ಚಿತ್ರ ಕೃಪೆ: ದಿ ಹಿಂದು, ಗೂಗಲ್. ಪರಿಕಲ್ಪನೆ: ಪ್ರಶಾಂತ್

ಇಷ್ಟಕ್ಕೂ, ಆದಪ್ಪ ಏನೂ ತಿಳಿಯದ ಹದಿಹರೆಯದ ಹುಡುಗನೇನಲ್ಲ; 47ರ "ಪ್ರಾಯದ ಸಭ್ಯ ಗೃಹಸ್ಥ"?! ಸಬಲೆ ಹೆಣ್ಣಿಗೆ ದೇವರದ್ದೇ ಬಲ - ಸತತ ಹದಿನೈದು ಘಂಟೆಗಳ ದೀರ್ಘಾವಧಿ ನರಳಿಕೆಯ ನಂತರ ಅದೃಷ್ಟವಶಾತ್ ಗೌರಿ ಪ್ರಾಣಾಪಾಯದಿಂದ ಪಾರಾಗಿದ್ದಾಳಾದರೂ, ಆದಪ್ಪನ ಕುಟುಂಬದ ಸದಸ್ಯರ ಕಪಟಕ್ಕೆ ಗುರಿಯಾಗಬೇಕಾಯಿತು. ಮೂರೂ ಬಿಟ್ಟವರು ಮಾತ್ರ ಮಾನಕ್ಕೆ ಬೆಲೆ ಕಟ್ಟಲು ಸಾಧ್ಯ - ಗೌರಿಯ ತಂದೆಯನ್ನು ಭೇಟಿಮಾಡಿದ ಆದಪ್ಪನ ಮನೆಯವರು, ಪ್ರಕರಣವನ್ನು ಅಲ್ಲಿಗೇ ಮುಚ್ಚಿಹಾಕಲು ಒಪ್ಪಂದದ ಹೊಂದಾಣಿಕೆಗೆ ಮುಂದಾಗಿದ್ದರು. ಕ್ರೌರ್ಯದ ಆಟಕ್ಕೆ ಕುತಂತ್ರದ ಆಸರೆ - ಇದು ಇಂದಿನ ನಮ್ಮ "ಪ್ರಬುದ್ಧ ಸಮಾಜ"ದ ವಾಸ್ತವ ಸ್ಥಿತಿ. ನತದೃಷ್ಟೆ ಗೌರಿಯ ತಂದೆಯವರ ಕಠಿಣ ಧೋರಣೆಯಿಂದ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣ ಸಂಸ್ಥೆಯ ಬೆಂಬಲದಿಂದ ಎರಡು ದಿನ ತಡವಾಗಿಯಾದರೂ ಬಗೇಪಲ್ಲಿ ಪೋಲೀಸ್ ಠಾಣೆಯಲ್ಲಿ ಆದಪ್ಪನ ವಿರುದ್ಧ ದೂರು ದಾಖಲಾಗಿರುವುದಷ್ಟೇ ಸಮಾಧಾನಕರ ಸಂಗತಿ.

ತಲೆಮರೆಸಿಕೊಂಡಿರುವ ಆರೋಪಿ "ಆದಪ್ಪ"ನಿಗಾಗಿ ಪೋಲೀಸರು ಹುಡುಕಾಡುತ್ತಿದ್ದರೆ, ಮಾನಸಿಕ ಹಾಗೂ ದೈಹಿಕ ಆಘಾತಕ್ಕೊಳಗಾಗಿರುವ ಗೌರಿ, ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಸಂಖ್ಯಾತ ಹೆಣ್ಣು ದೇವತೆಗಳಿಗೆ ನಿತ್ಯಪೂಜೆ ಸಾಂಗವಾಗಿ ನಡೆಯುತ್ತಿರುವ ನಮ್ಮ ಸಮಾಜದಲ್ಲಿ ಹೆಣ್ಣನ್ನು ಈ ರೀತಿ ಹೀನಾಯವಾಗಿ ನಡೆಸಿಕೊಳ್ಳುತ್ತಿರುವುದು ಧಾರ್ಮಿಕ ಆಚರಣೆಗಳನ್ನು ಅರ್ಥಹೀನವಾಗಿಸಿ, ಹಿಂದೂ ಸಂಸ್ಕೃತಿಯ ಪಾವಿತ್ರ್ಯತೆಗೆ ಕಳಂಕವನ್ನುಂಟುಮಾಡಿದೆ. ಹೊಟ್ಟೆ ನೋವಿನ ಹೊರತಾಗಿ ಗೌರಿಯ ಆರೋಗ್ಯ ಸುಧಾರಿಸುತ್ತಿರುವುದಾಗಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದರೂ, ಆರೋಪಿ ಆದಪ್ಪನನ್ನು ನ್ಯಾಯಾಂಗದ ಚೌಕಟ್ಟಿನಲ್ಲಿ ತಪ್ಪಿತಸ್ಥನೆಂದು ಸಾಬೀತು ಮಾಡಿ ಶಿಕ್ಷೆಗೆ ಗುರಿಪಡಿಸಲು ಗೌರಿಯ ಮಡಿಲು ಬರಿದಾಗದಿರುವುದು ಕ್ಷೇಮ. ವಿವಾಹಪೂರ್ವ ಲೈಂಗಿಕ ಸಂಬಂಧವು ದಾಖಲೆಗಳಿಂದ ಸಾಬೀತಾದಲ್ಲಿ, ಅಂತಹವರನ್ನು ಅಧಿಕೃತವಾಗಿ ಪತಿ-ಪತ್ನಿ ಎಂದು ಪರಿಗಣಿಸಬೇಕೆಂಬ ಮಹತ್ವದ ತೀರ್ಪನ್ನು ಇತ್ತೀಚೆಗಷ್ಟೇ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ನೀಡಲಾಗಿದೆ. ಈ ತೀರ್ಪು ಗೌರಿಯಂತಹ ಇನ್ನೂ ಅನೇಕ ಮುಗ್ಧ, ಅಸಹಾಯಕ ಹಾಗೂ ಶೋಷಿತ ಹೆಣ್ಣುಮಕ್ಕಳ ಬದುಕಿಗೆ ಬೆಳಕಾಗಿ, ಆದಪ್ಪನಂತಹ ಕ್ರೂರಿಗಳ ಕ್ರೌರ್ಯವನ್ನು ಮಟ್ಟಹಾಕುವಲ್ಲಿ ಸಹಾಯಕವಾಗುತ್ತದೆಯೇ? ಕಾದು ನೋಡಬೇಕು.

Tuesday, June 18, 2013

Premarital Sex - new form of Legal Marriage

A couple of days ago, hon'ble Chief Minister of Karnataka Sri. Siddaramaiah had expressed inclination towards cutting down marriage expenses; and a day later, the Madras High Court finds an appropriate solution for this - 'Premarital Sex'. Can it get any simpler, I strongly doubt.
If any unmarried couple of the right legal age 'indulge in sexual gratification', this will be considered a valid marriage and they could be termed 'husband and wife'.
- Madras High Court
Image Courtesy: Ronke Alao; Concept: Prashanth

It's important to mark the Day 17th June 2013, when Justice C. S. Karnan passed an order to modify the judgement given by the Coimbatore family court in maintenance case of a couple and said if a boy is 21 and girl 18, they shall acquire the 'freedom of choice' guaranteed by the Constitution of India. Does the so-called 'freedom of choice' meant 'premarital sex'? definitely not, am sure.

Were you wondering how to honor premarital sex a legal marital status? - 'Either party to a relationship could approach the Family Court for a declaration of marital status by supplying documentary proof for a sexual relationship' the Court opined. That's fine, but, what would possibly make a 'documentary proof' for 'sexual relationship'? If at all this was slightly elaborated upon, it would have been much more easier to 'make marriages happen' in the near future.

'On declaration of marital status for a sexual relationship, a woman could establish herself as the man's wife in Government Records and all Legal rights applicable to normal wedded couples will also be applicable' the Court added. When lawyers are smart enough to utilize the smallest loopholes in the Law and uphold injustice, Justice C. S. Karnan with this judgement has kept a trench dug wide open; it shall not be of any difficulty to seek (in)justice based on this 'controversial judgement'.

The Hindu, India Times, CNN-IBN India, DNA, Sify and others reported this 'historical' judgement online and succeeded in pushing up their page rankings to the top on Google for a transitory period of time to the key word 'premarital sex'. 'If after having sexual relationship the couple decided to separate, the husband could not marry without getting a divorce from the wife' - this judgement, however, has given a new twist to the concept of 'premarital sex', which will soon make the 'curse' a 'boon'.

The Court also said 'Marriage formalities as per various religious customs such as tying of mangalasutra, exchange of garlands, exchange of rings or registering of a marriage were only to comply with religious customs for the satisfaction of society'. This, simply makes the existing deep-rooted solid foundation of Hinduism/Christianism to give way and completely collapse it's strongly built social architecture in India. If slogans of boycott are heard against this, surprise not!

In the past, marriages were said to be made in heaven; but in future, marriages shall be made on beds too..

Monday, May 27, 2013

ಪಶುವೈದ್ಯರಿಗೆ ಪಶುವೈದ್ಯರೇ ಶತ್ರುಗಳು..

ವೃತ್ತಿಯಲ್ಲಿ ಪಶುವೈದ್ಯನಾಗಿ, ಇಂತಹ ಶೀರ್ಷಿಕೆಯಡಿ ವೃತ್ತಿಪರ ವಿಚಾರವಾಗಿ ಚಿಂತಿಸಿ ಬರೆಯುವ ಅನಿವಾರ್ಯತೆ ಬಂದೊದಗಿರುವುದು ಬಹುಶಃ ದೌರ್ಭಾಗ್ಯವೇ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. "ಹೆಣ್ಣಿಗೆ ಹೆಣ್ಣೇ ಶತ್ರು" ಎನ್ನುವ ನಾಣ್ನುಡಿಯು ಕರ್ನಾಟಕ ರಾಜ್ಯದಲ್ಲಿನ "ಯುವ" ಪಶುವೈದ್ಯರಿಗೆ ಅಕ್ಷರಶಃ ಅನ್ವಯಿಸುವಂತಹ "ಸನ್ನಿವೇಶವು ಇಂದು ಸೃಷ್ಟಿಯಾಗಿದೆ" ಎನ್ನುವುದಕ್ಕಿಂತ "ಸನ್ನಿವೇಶವನ್ನು ಸೃಷ್ಟಿ ಮಾಡಲಾಗಿದೆ" ಎಂದೆನ್ನಬಹುದೇನೋ?? ತಿಳಿಯದು.

ಕಳೆದ ಗುರುವಾರ, ಪೊಲೀಸ್ ಪೇದೆಯೊಬ್ಬರು ನನ್ನ ದ್ವಿಚಕ್ರವಾಹನವನ್ನು ತಡೆದು ನಿಲ್ಲಿಸಿ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದರು. ಎಲ್ಲ ದಾಖಲೆಗಳನ್ನೂ ಅವಸರದಲ್ಲೇ ನೀಡುತ್ತಿದ್ದ ನನ್ನನ್ನುದ್ದೇಶಿಸಿ ಅವರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿ ಕಾಲೇಜು ತಲುಪುವ ಹೊತ್ತಿಗೆ ತಡವಾಗಿ, ತರಗತಿಗೆ ಗೈರುಹಾಜರಾದರೂ ಸಹ ನಮ್ಮ ನಡುವೆ ನಡೆದ ಅಲ್ಪಾವಧಿ ಸಂಭಾಷಣೆಯ ಕೊನೆಗೆ "ಪಶುವೈದ್ಯ ವೃತ್ತಿ, ವಿಶ್ವವಿದ್ಯಾಲಯ, ಸರ್ಕಾರೀ ಇಲಾಖೆ ಹಾಗೂ ಪಶುವೈದ್ಯರ" ಬಗೆಗೆ ಅವರಿಗಿದ್ದಂತೆ ಭಾಸವಾದ ಉನ್ನತಾಭಿಪ್ರಾಯವನ್ನು ಇಮ್ಮಡಿಗೊಳಿಸಿದ ಸಂತಸ-ಸಮಾಧಾನವಿತ್ತು; ಆದರೆ ಇಂದು, ಅದೇ ವಿಷಯವಾಗಿ ತೀವ್ರ ನೋವು-ಅಸಮಾಧಾನ ನನ್ನನ್ನಾವರಿಸಿದೆ.

ಕರ್ನಾಟಕ ಸರ್ಕಾರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ ಪಶುವೈದ್ಯಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಈ ಹಿಂದೆ ಅರ್ಜಿ ಅಹ್ವಾನಿಸಲಾಗಿತ್ತು. ಭರ್ತಿ ಮಾಡಲು ಉದ್ದೇಶಿಸಿದ್ದ ಹುದ್ದೆಗಳಿಗಿಂತ ಅಭ್ಯರ್ಥಿಗಳು ಕಡಿಮೆ ಸಂಖ್ಯೆಯಲ್ಲಿದ್ದ ಕಾರಣ, ಸರ್ಕಾರೀ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಸದವಕಾಶ ಸಿಗುವುದಾಗಿ ಎಲ್ಲ ಯುವ ಪಶುವೈದ್ಯರೂ ಹರ್ಷಗೊಂಡಿದ್ದರು; ಆದರೆ, ಅದು ಬಹುಕಾಲ ಉಳಿಯದಿದ್ದುದೇ ವಾಸ್ತವದಲ್ಲಿನ ದುರಂತದ ಸಂಗತಿ.

ಸರಿಸುಮಾರು ಐದು ದಶಕಗಳ ಕಾಲ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿದ್ದ ಬೆಂಗಳೂರು ಹಾಗೂ ಬೀದರ ಪಶುವೈದ್ಯಕೀಯ ಮಹವಿದ್ಯಾಲಯಗಳನ್ನು ಬೇರ್ಪಡಿಸಿ, 2004ರಲ್ಲಿ "ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ"ವನ್ನು ಸ್ಥಾಪಿಸಲಾಯಿತು (www.kvafsu.kar.nic.in). ಅಲ್ಲದೇ, ಇದೇ ವಿಶ್ವವಿದ್ಯಾಲಯದ ಸ್ವಾಮ್ಯಕ್ಕೆ ಹೊಸದಾಗಿ ಎರಡು ಪಶುವೈದ್ಯಕೀಯ ಮಹಾವಿದ್ಯಾಲಯಗಳನ್ನು ಕ್ರಮವಾಗಿ ಹಾಸನ ಮತ್ತು ಶಿವಮೊಗ್ಗದಲ್ಲಿ ನಮ್ಮ ಘನ ಸರ್ಕಾರವು ಪ್ರಾರಂಭಿಸಿದ ನಂತರ ನಡೆದುದೆಲ್ಲವೂ ಅನಾಹುತಗಳೇ ಸರಿ!

"ಪಶುವೈದ್ಯರುಗಳು ಉತ್ತಮ ಆಡಳಿತಗಾರರಲ್ಲ" ಎಂಬ ಕಾರಣಕ್ಕೋ ಏನೋ, ಸರ್ಕಾರದ ಪಶುವೈದ್ಯಕೀಯ ಸೇವಾ ಇಲಾಖೆಗೆ ಪಶುವೈದ್ಯರೇತರರನ್ನು ಆಯುಕ್ತರನ್ನಾಗಿ (ಆಡಳಿತ ಮುಖ್ಯಸ್ಥರು) ಸರ್ಕಾರ ನೇಮಕ ಮಾಡಿದೆ. ಇದಕ್ಕೆ ಪುಷ್ಟಿ ನೀಡುವಂತೆಯೇ, ನೂತನ ಪಶುವೈದ್ಯಕೀಯ ವಿಶ್ವವಿದ್ಯಾಲಯದಡಿಯಲ್ಲಿರುವ ಬೀದರ ಮಹಾವಿದ್ಯಾಲಯವು "ಮಾನ್ಯತೆ" ಕಳೆದುಕೊಂಡು ಅವಸಾನದ ಭಿತಿಯಲ್ಲಿದ್ದರೆ, ಹಾಸನ ಹಾಗೂ ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯಗಳು ಇಂದಿಗೂ ಪಶುವೈದ್ಯಕೀಯ ಪರಿಷತ್ತಿನಿಂದ ಮಾನ್ಯತೆ ಪಡೆಯದೇ, ತನ್ನ ಎಲ್ಲಾ 72 ಪದವೀಧರರ ಭವಿಷ್ಯವನ್ನು ಅತಂತ್ರವಾಗಿಸಿವೆ. ಮಾನ್ಯತೆ ಇರದ ಮಹಾವಿದ್ಯಾಲಯದ ಪದವೀಧರರೆಲ್ಲರೂ ಸರ್ಕಾರೀ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗೆ ಮಾತ್ರವಲ್ಲ, ಪಶುವೈದ್ಯ ವೃತ್ತಿಯಲ್ಲಿ ಮುಂದುವರೆಯಲೂ ಸಹ ಅರ್ಹರಾಗದಿರುವುದರಿಂದ ದಾರಿಕಾಣದೆ ಕಂಗಾಲಾಗಿದ್ದಾರೆ.

ದಿನಾಂಕ 27-05-2013 ರಿಂದ ಚಾಲನೆ ಪಡೆದುಕೊಂಡಿರುವ ಪಶುವೈದ್ಯಾಧಿಕಾರಿ ಹುದ್ದೆಯ ನೇಮಕಾತಿ ಪ್ರಕ್ರಿಯೆಯು ತಾರತಮ್ಯದ ತಾಣವಾಗಿ ಪರಿವರ್ತನೆಗೊಂಡಿದೆ. ಅರ್ಹ ಪಶುವೈದ್ಯ ಪದವೀಧರರು ದಾಖಲಾತಿ ಪರಿಶೀಲನೆಗೆ ಒಲವು ತೋರುತ್ತಿದ್ದರೆ, ಅರ್ಹರಲ್ಲವೆಂದು ತಿಳಿಸಲಾಗಿರುವ ಪದವೀಧರರು ಪರಿಶೀಲನಾ ಪ್ರಕ್ರಿಯೆಗೆ ತಮ್ಮನ್ನು ಪರಿಗಣಿಸದ ಕಾರಣ ಕೆರಳಿದ್ದಾರೆ. ವಿಶ್ವವಿದ್ಯಾಲಯ ಕುಲಪತಿಗಳು, ಇಲಾಖಾ ಪ್ರಧಾನ ಕಾರ್ಯದರ್ಶಿಗಳು, ಮಾನ್ಯ ಪಶುಸಂಗೋಪನಾ ಸಚಿವರು ಮತ್ತು ಮಾನ್ಯ ಮುಖ್ಯಮಂತ್ರಿಯವರನ್ನು ಅನೇಕ ಬಾರಿ ಭೇಟಿಮಾಡಿ ತಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿಕೊಡಲು ಕೋರಲಾಗ್ಯೂ ಇದುವರೆವಿಗೂ ಯಾವುದೇ ಧನಾತ್ಮಕ ಕ್ರಮ ಕೈಗೊಳ್ಳದ ಕಾರಣ ಕಂಗೆಟ್ಟಿದ್ದಾರೆ. ಆದರೆ ತಾರ್ಕಿಕವಾಗಿ, ದಾಖಲಾತಿ ಪರಿಶೀಲನೆಗೂ ಮುನ್ನವೇ ಕೆಲವು ಅಭ್ಯರ್ಥಿಗಳನ್ನು ಅರ್ಹರ ಪಟ್ಟಿಯಿಂದ ಪ್ರತ್ಯೇಕಿಸಿರುವ ಸರ್ಕಾರೀ ಇಲಾಖೆಯ ನಿರ್ಣಯ ಪ್ರಶ್ನಾರ್ಥಕವೆನಿಸಿಕೊಳ್ಳುತ್ತದೆ.

ವಿಶ್ವವಿದ್ಯಾಲಯ, ಆಡಳಿತ, ಮಹಾವಿದ್ಯಾಲಯ, ಮಾನ್ಯತೆ, ಇಲಾಖೆ, ನೇಮಕಾತಿ, ಅರ್ಹತೆ - ಇವೆಲ್ಲವುಗಳ ಸಂಕೋಲೆಯಿಂದ ದೂರ ಸರಿದು ಆಲೋಚಿಸಿದೆವಾದರೆ, ವೃತ್ತಿಪರ ಹಿರಿಯರಾದ ನಾವು, ಯುವ ಪಶುವೈದ್ಯರುಗಳಿಗೆ ವೃತ್ತಿಪರತೆಯಲ್ಲಿ ಅವರುಗಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡು ಯಶಸ್ಸು ಗಳಿಸಲು ಅನುವಾಗುವಂತಹ ಸಂಭಾವಿತ ವೃತ್ತಿಪರ ಸಮಾಜವನ್ನು ಒದಗಿಸಿಕೊಡುವ ಬದ್ಧತೆಯ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

Tuesday, April 24, 2012

Social Sense

Bangalore Metropolitan Transport Corporation (BMTC) buses play a vital role in my daily life; since they are my only means of commuting from home to work and back. It's such a 'pleasure', 'fun' and 'adventure' traveling in BMTC buses, one can realize it by personal experience alone. If you ain't traveling in BMTC, you definitely are missing the cruise of life for sure!

I always try to keep myself calm and relaxed while in city buses, in spite of all the drama happening around; mostly ending up falling asleep* (*if at all I get a seat to sit). Many a times I do wonder, how on this earth am repeatedly ending up sleeping in a crowded public shuttle? that too in BMTC! Does this effort of mine deserve an applause??

It was probably 6 months ago by now and an early morning when I (as usual) managed to (literally) jump into one of those speeding buses busy running a 'rat race' towards their common destination. Hardly I could find a few other passengers in the bus, who were still showing signs of discomfort recovering from their adventurous act of getting into the bus. Though the tupperware box getting burnt by the hot rice packed by my wife inside bag needed all the air gushing in from the window, I luckily could slide shut the glass shutter with ease (sometimes the windshields seldom move and some would have no handles, while few others might have went missing!).

While numerous PHP codes kept on dancing in joy for me being unable to put them right into the logics, a guy in his mid-teens gave a blasting entry with his cell phone singing aloud an old Kannada 'melody' - PREETIYALLI IRO SUKHA GOTTE IRALILLA.. HUU ANTIYAa? UHUU ANTIYAa..?? With this, my PHP application trying to find a way in executing the given logic crashed at once.

"Excuse me.." I spoke instantly
The guy looked at me, in response
"Can you please put your headset on?"
"I don't have one.." he complained
"Then, please mute the sound"
"Why should I?"
"Don't you think it might disturb others around?"
"Now a days drivers have FMs playing loudly in buses, would you go objecting at them too?" - an elderly-'looking' man interrupted and advised me "You cannot control things in public places.." while the song was still on and loud. Following this, couldn't even think of debugging my crashed codes for rest of the day; I was (sort of) upset.

It was only yesterday, I saw a notice displayed in one of the BMTC buses, which read:
Translation: BMTC, Head Office, Shantinagar, Bangalore - 27. Notice for passengers & students: Playing music loudly from mobile phones in buses causing noise pollution and inconvenience to co-passengers is prohibited. It is a punishable offense. Please co-operate.
On reading this, I felt more unhappy than happy; for in this modern educated world, people tend to forget, neglect and never try to understand even simplest things unless enforced by law; the need of the hour seems to be 'social sense'. Sigh..

Wednesday, April 11, 2012

ಕ್ರೌರ್ಯಕ್ಕೆ ಕಮರಿಹೋದ ಕಂದಮ್ಮ

ಸತತ ಮೂರು ದಿನಗಳ ಜೀವನ್ಮರಣ ಹೋರಾಟ ನಡೆಸಿ, ಸೋತು ವಿಧಿವಶವಾದ ಮೂರು ತಿಂಗಳ ಹಸುಗೂಸು 'ನೇಹ ಭಾನು ಅಫ್ರೀನ'ಳ ಪೂಜ್ಯನೀಯ ಆತ್ಮಕ್ಕೆ ಗೌರವಪೂರ್ಣ ನಮನಗಳು.
ಮರೆಯಾದ ಮಗು - ನೇಹ
'ಎಲ್ಲಿ ಹೆಣ್ಣು ಪೂಜಿಸಲ್ಪಡುತ್ತಾಳೋ, ಅಲ್ಲಿ ದೈವನು ವಾಸಿಸುತ್ತಾನೆ' - ಎಂದು ಸಾರಿ ಹೇಳುವ ವೇದೋಪನಿಷತ್ತುಗಳ ಭದ್ರ ಬುನಾದಿಯನ್ನು ಹೊಂದಿರುವ ಭಾರತದ ನೆಲದಲ್ಲಿ, ನವಜಾತ ಹೆಣ್ಣು ಶಿಶುವಿನ ಮೇಲೆ ನಡೆದುಹೋದ ಈ ದೌರ್ಜನ್ಯವು ದುರಾದೃಷ್ಟಕರವಲ್ಲವೆ? ತಂತ್ರಜ್ಞಾನವು 4-ಜಿ ತರಂಗಾಂತರಗಳ ಎಲ್ಲೆ ಮೀರಿ ಬೆಳೆಯಲು ಹವಣಿಸುತ್ತಿರುವ ಈ ಹೊತ್ತಿನಲ್ಲಿಯೂ ಸಹ ನಮ್ಮ ಸಮಾಜದಲ್ಲಿ ಹೆಣ್ಣಿನ ಬಗೆಗಿನ ಕೀಳರಿಮೆಯ ನಿಲುವು ಬದಲಾಗುವುದಿರಲಿ, ಅಲ್ಪಮಟ್ಟಿಗಾದರೂ ಸುಧಾರಿಸದೇ ಹೋದುದು ಒಂದು ದುರಂತವೇ ಸರಿ. 'ಸ್ತ್ರೀ ಮೇಲಿನ ನಿರಂತರ ಅತ್ಯಾಚಾರಗಳನ್ನೊಳಗೊಂಡ ವಿಕೃತ ಸಮಾಜದ ಏಳಿಗೆಯಾಗುವುದಾದರೂ ಎಂತು?' ಎಂಬ ಉತ್ತರ ಕಾಣದ ಪ್ರಶ್ನೆಯು ನಮ್ಮನ್ನು ಅರಿವಿಲ್ಲದೆಯೇ ಆವರಿಸಿ ರೌದ್ರನರ್ತನ ಮಾಡುತ್ತಿರುವುದೇನೋ ಎಂಬ ಭ್ರಮೆಯುಂಟಾಗುತ್ತಿದೆ ನನ್ನಲ್ಲಿ.

ತನ್ನ ಹುಟ್ಟಿಗೆ ಕಾರಣವಾದ ಮಾತ್ರಕ್ಕೆ 'ತಂದೆ' ಎನಿಸಿಕೊಂಡವನ ಪ್ರೀತಿಯನ್ನು ಕಂಡರಿಯದ ನೇಹಳ ಮೂರೂ ತಿಂಗಳ ಬದುಕು ಆತನ ಕ್ರೂರ ದುರ್ನಡತೆಯ ವಿರುದ್ಧದ ಹೋರಾಟವೇ ಆಗಿದ್ದಿತು. ಮೂಲತಃ ಮಧ್ಯವ್ಯಸನಿ ಹಾಗೂ ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗಿದ್ದ 25ರ ಉಮರ್ ಫಾರೂಕನಿಗೆ ನೇಹಾಳ ತಾಯಿಯಾದ 19ರ ರೇಷ್ಮ ಭಾನು ಎರಡನೇಯ ಮಡದಿ. ಮೊದಲಿನಿಂದಲೂ ವರದಕ್ಷಿಣೆಯ ಕಿರುಕುಳದಲ್ಲೇ ಸಾಂಸಾರಿಕ ಜೀವನ ನಡೆಸುತ್ತಾ ಬಂದಿದ್ದ ರೆಷ್ಮಳಿಗೆ ನೇಹಳ ಹುಟ್ಟು ದುಸ್ತರವಾಗಿ ಪರಿಣಮಿಸಿತ್ತು. ಹೆಣ್ಣು ಮಗುವಿನ ಜನನಕ್ಕೆ ತಾನೇ ಕಾರಣಕರ್ತನೆನ್ನುವ ಸತ್ಯದ ಅರಿವಿಲ್ಲದ ತಂದೆಯು, ತನ್ನ ಮಗುವನ್ನು ಉಸಿರುಗಟ್ಟಿಸಿ, ಸಿಗರೇಟಿನಿಂದ ಸುಟ್ಟು, ಮನಬಂದಲ್ಲಿ ಬಾಯಿಂದ ಕಚ್ಚಿ, ಅದರ ತಲೆಯನ್ನು ಬಲವಾಗಿ ಗೋಡೆಗೆ ಗುದ್ದಿಸಿ ಕೊಲ್ಲಲು ಪ್ರಯತ್ನಿಸಿದನೆಂದು ಮಾತಿನಲ್ಲಿ ಹೇಳಲೂ ಸಹ ದಿಗಿಲಾಗುತ್ತದೆ. ಹೀಗಿರುವಾಗ, ಈ ಎಲ್ಲಾ ದುಷ್ಕೃತ್ಯಗಳಿಗೆ ಬಲಿಯಾದ ಮುಗ್ಧೆ ನೇಹ ಅನುಭವಿಸಿರಬಹುದಾದ ಮೂಕಯಾತನೆಯ ಕ್ರೌರ್ಯಾನುಭವ ಅದೆಂತಹುದಿರಬಹುದು?? ಎಂಬುದನ್ನು ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಂದು ಕೊನೆಯುಸಿರೆಳೆದ ಕಂದಮ್ಮನೇ ಬಲ್ಲಳು.

ಪ್ರತಿನಿತ್ಯವೂ ಅನೇಕ ವಿಧವಾದ ಅತ್ಯಾಚಾರಗಳನ್ನೆದುರಿಸುವ ಅಸಂಖ್ಯಾತ ಹೆಣ್ಣುಮಕ್ಕಳನ್ನು ಪ್ರತಿನಿಧಿಸುತ್ತಿರುವಂತೆ ತೋರುವ ನೇಹ, ತನ್ಮೂಲಕ ಮಹಿಳೆಯರ ಮೇಲೆ ಸದ್ದಿಲ್ಲದೇ ನಡೆದುಹೊಗುತ್ತಿರುವ ದೌರ್ಜನ್ಯಗಳ ಬಗೆಗೆ ಮಾತಿಲ್ಲದ ಬರಿಯ ಮೌನದಲ್ಲಿಯೇ ಕೂಗಿ ಹೇಳಿ ಹೋಗಿದ್ದಾಳೆ. ಆಯೋಗ, ಸಮಾಜ, ಸಮಿತಿ ಹಾಗೂ ಸರ್ಕಾರೇತರಗಳು ನೇಹಳಂತಹ ಹಲವಾರು ಹೆಣ್ಣುಮಕ್ಕಳ ಬಲಿದಾನಕ್ಕೆ ಎಡೆಮಾಡಿಕೊಟ್ಟು, ಫಾರೂಕನಂತಹ ಸಹಸ್ರಾರು ಪಾಪಿಗಳಿಗೆ ಕಾನೂನಿನ ಸೋಗಿನಲ್ಲಿ ಸಾಮಾಜಿಕ ಭದ್ರತೆಯನ್ನು ಒದಗಿಸಿಕೊಡುತ್ತಿರುವುದು ಪ್ರಜಾಪ್ರಭುತ್ವದ ಹೀನಾಯ ದುರಾಚರಣೆಗೆ ಹಿಡಿದ ಕನ್ನಡಿಯಂತಿದೆ. ಆದರೆ, ಇಂತಹ ದುಷ್ಟ ಮಾನವರ ಅಟ್ಟಹಾಸವು ಇನ್ನು ಬಹಳ ಕಾಲದವರೆಗೆ ಮುಂದುವರೆಯಲಾರದಂಥ ದುರಂತ ಅಂತ್ಯ ಕಾಣುವುದಂತೂ ಶತಸಿದ್ಧ. ಇದರ ಮುನ್ಸೂಚನೆಯೇನೋ ಎನ್ನುವಂತೆ ನೇಹಳ ದುರ್ಮರಣವನ್ನು ಸಹಿಸದೇ, ಹೆತ್ತ ತಾಯಿಯ ಹೃದಯವಿದ್ರಾವಕ ಆಕ್ರಂದನಕ್ಕೆ ಸ್ಪಂದಿಸುತ್ತಾ, ಸುರಕ್ಷಿತ ರಾಜಧಾನಿ ಉದ್ಯಾನನಗರಿ ಬೆಂಗಳೂರಿನಲ್ಲಿಯೂ ಸಹ ಮಾತೆ ಭೂತಾಯಿಯು ಇಂದು ಕೋಪದಿಂದ ಕಂಪಿಸಿದಳು.

Monday, November 7, 2011

My Memories in my Mobile's Eye

My recent official visit to Delhi, Punjab and nearby places have been a memorable one for many reasons. The most important being that this visit kept me off from the much awaited 'first Deepavali festival' celebrations after marriage in my in-law's place.

Sigh.

As usual, I forgot to add the DigiCam in my travel checklist and hence couldn't take clarity pictures. That didn't stop my cell phone from capturing whatever I felt was worth it. So, here are a few of my memories selected from a lot, as seen in my mobile's eye.


The Sainik Rest House, where I spent the whole of my stay in Room No. 4 at first floor. It was inaugurated on 21st Aug 1994. The discipline followed here was the one what I won't forget for quite a long time.


Most of the villages I visited, had a pond, which was used by the livestock (especially buffaloes) to happily wallow on their way back from grazing in the evening. This is a pond of such kind in a village called Lohcheb.


Women seemed to be a lot more active in the farming community. They were seen involved in most of the household and even farming activities.


While women were all busy doing all the chores, both household and field, men had nothing to do other than playing cards and smoking in isolated groups. Hukka - a traditional smoking device is very popular here.


Convenient means of transportation in town was the Motor Rikshaws, just pay Rs. 8 to travel any distance once within the town limits. Often, they are found (over) crowded; they rule the suburb streets, seemed to be better than our dangerous BMTC buses.


Riding a two-wheeler is real fun! No compulsion on helmet and no limit on the number of pillions. It feels good to zoom across a traffic police, with no helmet and importantly without being caught. I really missed my bike over there.


If you are a driver and love the joy of long drives like me, it was a special experience and a unique feeling while we drove in the National Highway 1 from New Delhi towards Punjab.


May be the Sainik Rest House effect, I couldn't stop my cell phone from clicking this lovely tri-color proudly flying on top of the whole world in Kurukshetra.


The famous huge Bronze Sculpture of Geethopadesam at Kurukshetra. This was sculpted by Padmashree Ram V. Sutar and Sri. Anil R. Sutar and was hoisted on 16th Dec 2007.


Me, generally used to the sight of a flock of sheep grazing around the bushes, I literally exclaimed on seeing a Caravan of Camels grazing along the roadside. I just couldn't believe my own eyes!


It was a few hundred kilometers away from the Thar Desert, we could see the clear glimpse of it! A dry patch of land in the State of Rajasthan, which are very commonly found.


An endangered tiny holy temple along the Hariyana State Highway, fighting for its existence against the widening roadways near a small village called Manoharpur.


Lovely sight of River Sutlej along its way across Punjab, which is all set to engulf the bright red hot Sun to make sky darker at night.


A pleasant evening, where we can find the Sunset happening beyond the paddy fields, the high-tension transmission cables, the farther trees and the misty sky in a village called Gangthan.

Thursday, October 27, 2011

ಹೀಗೊಂದು ದೀಪಾವಳಿ..

ನಮ್ಮ ಮದುವೆಯ ನಂತರ, ಇದೇ ಮೊದಲ ದೀಪಾವಳಿ ಹಬ್ಬ; ತಿಂಗಳೆರಡರ ಹಿಂದೆಯೇ ನನ್ನ ಅತ್ತೆ-ಮಾವಂದಿರಿಂದ ಹಬ್ಬಕ್ಕೆ ಆಹ್ವಾನವೂ ಬಂದಿದ್ದಿತು. ಕೇಳಬೇಕೇ ನಮ್ಮ ಹೆಣ್ಣುಮಕ್ಕಳ ಸಂಭ್ರಮ ತವರುಮನೆಗೆ ಹೊರಡಲು? ನನ್ನಾಕೆಯು ನಮ್ಮ ಪ್ರಯಾಣಕ್ಕೆ ಬೇಕಾದ ತಯಾರಿಗಳನ್ನು ಅತ್ಯುತ್ಸಾಹದಿಂದಲೇ ಮಾಡಿಕೊಂಡು, ದಿನಕ್ಕೆರಡು ಬಾರಿಯಾದರೂ ನನಗೆ ಅದನ್ನು ತಪ್ಪದೇ ನೆನಪಿಸುತ್ತಿದ್ದುದರಿಂದ ನಾನೂ ಸಹ ಮಾವನವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಲು ಮಾನಸಿಕವಾಗಿ ಎಲ್ಲಾ ತಯಾರಿ ನಡೆಸಿದ್ದೆ.

ಈ ಮಧ್ಯೆ ಕಛೇರಿ ಕೆಲಸದ ನಿಮಿತ್ತ ನಾನು ದೆಹಲಿಗೆ ತೆರಳುವುದು ಅನಿವಾರ್ಯವಾದಾಗ, ಅದನ್ನು ನನ್ನ ಹೆಂಡತಿಗೆ ತಿಳಿಸುವ ಧೈರ್ಯವಾಗಲೇ ಇಲ್ಲ ನನಗೆ. ಆಕೆ ದೀಪಾವಳಿ ಹಬ್ಬದ ಸಂಭ್ರಮಾಚರಣೆಗಾಗಿ ಕಟ್ಟಿಕೊಂಡಿದ್ದ ಆಶಾಗೋಪುರವನ್ನು ಕೆಡವಿಹಾಕುವ ಸಾಹಸಕ್ಕೆ ಬಹಳ ದಿನಗಳವರೆಗೆ ನಾನು ಕೈಹಾಕಲಿಲ್ಲ. ಹೀಗೊಂದು ದಿನ, ಕಛೇರಿಯಿಂದ ದೊರೆತ ಆದೇಶ ಪತ್ರ ಹಾಗೂ ನನ್ನ ಪ್ರಯಾಣಕ್ಕಾಗಿ ಮುಂಗಡ ಕಾಯ್ದಿರಿಸಿದ್ದ ಚೀಟಿಗಳನ್ನು ಉದ್ದೇಶಪೂರ್ವಕವಾಗಿಯೇ ಹಾಸಿಗೆಯ ಮೇಲಿರಿಸಿ ಕಛೇರಿಗೆ ತೆರಳಿದ್ದೆ. ಪ್ರಯತ್ನ ಫಲಿಸಿತ್ತು, ನಾನು ಈ ಬಾರಿಯ ದೀಪಾವಳಿ ಹಬ್ಬಕ್ಕೆ ಊರಿನಲ್ಲಿರದಿರುವ ಸಂಗತಿಯು ನನ್ನಾಕೆಗೆ ಅರಿವಾಗಿತ್ತು. ನಾನು ಕಛೇರಿಯಿಂದ ಹಿಂತಿರುಗಿ ಬಂದಾಗ, ಊರಿಗೆ ತೆರೆಳಲು ಕಾಯ್ದಿರಿಸಿದ್ದ ಮುಂಗಡ ರೈಲು ಚೀಟಿಗಳನ್ನು ರದ್ದುಮಾಡಿ ಮುದ್ರಿಸಿದ ದಾಖಲಾತಿಯು ನನಗಾಗಿ ಹಾಸಿಗೆಯ ಮೇಲೆ ಕಾದುಕುಳಿತು ನನ್ನಾಕೆಯ ಮನದಾಳದ ನೋವಿನ ದರ್ಶನ ಮಾಡಿಸಿತು. ಆದಿನ ಕಛೇರಿಯಿಂದ ಹಿಂತಿರುಗಿದ ನನ್ನ ಮಡದಿಯು ಮುಂದಿನ ಮೂರ್ನಾಲ್ಕು ದಿನಗಳವರೆಗೆ ನನ್ನೊಡನೆ ಪ್ರೀತಿಯಿಂದ ಮಾತನಾಡಲಿಲ್ಲ; ದೀಪಾವಳಿ ಹಬ್ಬದ ದಿನದಂದೂ ಸಹ ನಾನು ದೆಹಲಿಯಲ್ಲಿಯೇ ಉಳಿದುಕೊಳ್ಳುವುದು ಆಕೆಗೆ ಎಳ್ಳಷ್ಟೂ ಹಿಡಿಸಿದಂತೆ ಕಾಣಲಿಲ್ಲ.

ನಿನ್ನೆ ಇಲ್ಲಿ ನಾ ಕಂಡ ದೀಪಾವಳಿಯು, ನನ್ನ ಜೀವನದ ಅತ್ಯಂತ ನೀರಸ ದೀಪಾವಳಿ ಹಬ್ಬವೆಂದರೆ ಆಭಾಸವಾದೀತು. ಹೆತ್ತವರು-ಮೆನೆ-ಮಡದಿಯಿಂದ ದೂರವಿದ್ದು, ಹೊಸದೊಂದು ಸಂಸ್ಕೃತಿಯನ್ನು ಆನಂದದಿಂದ ಸ್ವೀಕರಿಸಿ ಸಂಭ್ರಮಿಸುವ ಉದಾರತೆಯು ನನ್ನಲ್ಲಿರಲಿಲ್ಲ. ಅದೇಕೋ ಮನಸ್ಸು ಖಿನ್ನತೆಗೆ ಜಾರಿಹೋದ ಅನುಭವವಾಯಿತು ನನ್ನಲ್ಲಿ. ಉತ್ತರ ಭಾರತದಲ್ಲಿ ಅದ್ಧೂರಿಯಾಗಿ ಆಚರಿಸಲ್ಪಡುವ ಹಬ್ಬಗಳ ಸಾಲಿಗೆ ದೀಪಾವಳಿಯೂ ಸೇರಿದೆಯೆಂದು ಹಿಂದೆ ಎಲ್ಲೋ ಓದಿ-ಕೇಳಿದ ನೆನಪು. ರಾತ್ರಿಯ ಕಗ್ಗತ್ತಲನ್ನು ದೂರಮಾಡಿ, ಆಕಾಶದಂಗಳದಲ್ಲಿ ಚುಕ್ಕಿಗಳನ್ನು ನಾಚಿಸಿ ಬಣ್ಣ-ಬಣ್ಣದ ಚಿತ್ತಾರ ರಂಗವಲ್ಲಿ ಮೂಡಿಸಿದ ಪಟಾಕಿ ಮದ್ದುಗಳನ್ನು ಹೊರೆತುಪದಿಸಿದರೆ ಇನ್ನಾವುದೇ ರೀತಿಯ ಸಡಗರ ನನಗೆ ಇಲ್ಲಿ ಕಾಣಸಿಗಲಿಲ್ಲ.

ದೀಪಾವಳಿ ಹಬ್ಬವೆಂದರೆ, ನಮ್ಮೂರಿನಲ್ಲಿನ ಹೆಣ್ಣುಮಕ್ಕಳು ರೇಷ್ಮೆ ರವಿಕೆ-ಲಂಗವನ್ನುಟ್ಟು ಅಂಗಳಕ್ಕೆಲ್ಲಾ ಸಗಣಿ-ನೀರಿನ ಮಡಿ ಮಾಡಿ, ಮನೆಯ ಬಾಗಿಲಿನುದ್ದಕ್ಕೂ ಬಣ್ಣದ ರಂಗೋಲಿ ಬಿಡಿಸುತ್ತಾರೆ. ಮನೆಯ ಹೊಸ್ತಿಳುಗಳೆಲ್ಲ ಹಸಿರು ತೋರಣ ಹಾಗೂ ಮಂಗಳದ್ರವ್ಯಗಳಿಂದ ಅಲಂಕೃತಗೊಂಡಿರುತ್ತವೆ. ಅಡುಗೆಯ ಮನೆಯಲ್ಲಿ ಅಕ್ಕಿಯನ್ನು ನೆನೆಸಿ-ಕುಟ್ಟಿ ಬಿಸಿ-ಬಿಸಿ ಕಜ್ಜಾಯ ಸುಡುವ ಸಂಭ್ರಮವಂತೂ ಹೇಳತೀರದು. ಸಂಜೆಯಾಗುತ್ತಿದ್ದಂತೆ ಎಲ್ಲರೂ ಕೂಡಿ ಸಾಲು ದಿಪಗಳನ್ನು ಹೊತ್ತಿಸಿ, ಮೆನೆ-ಮನಗಳನ್ನು ಬೆಳಗಿಸುವ ಪರಿ ಅದ್ಭುತವೇ ಸರಿ!
ಚಿತ್ರ ಕೊಡುಗೆ : ಕೃಷ್ಣ ಶರಣಂ
ವಸತಿಗೃಹದ ನನ್ನ ಕೊಠಡಿಯ ದೀಪಗಳನ್ನೆಲ್ಲಾ ಆರಿಸಿ, ತೆರೆದ ಕಿಟಕಿಯಿಂದಾಚೆಗೆ ದೂರದ ನನ್ನೂರಿನ ಚೆಂದದ ದೀಪಾವಳಿ ಹಬ್ಬದ ಸಂಭ್ರಮವನ್ನು ಬಾನಿನಲ್ಲಿ ದಿಟ್ಟಿಸಿನೋಡುವ ತವಕದಿಂದ ಮೆತ್ತನೆಯ ಹಾಸಿಗೆಯ ಮೇಲೆ ಒರಗಿಕೊಂಡಿದ್ದ ನನ್ನನ್ನು ನಿದ್ರಾದೇವಿಯು ನಿಧಾನವಾಗಿ ಆವರಿಸಿಕೊಂಡದ್ದು ಅರಿವಿಗೆ ಬಾರಲೇ ಇಲ್ಲ..

Sunday, May 8, 2011

ಓಂ ಸಾಯಿ ರಾಮ್..

ಸತ್ಯ ಸಾಯಿ ಬಾಬ (ಕೃಪೆ - ಇಂಡಿಯಾ ಟಿವಿ)
ಶ್ರೀ ಸತ್ಯ ಸಾಯಿ ಬಾಬ ರವರ ಮೇಲಿನ ಚಿತ್ರವನ್ನು ನೋಡುತ್ತಿದ್ದಂತೆಯೇ ನನಗೆ ಎಲ್ಲಿಲ್ಲದ ಅಚ್ಚರಿಯಾಯಿತು. ಈ ಚಿತ್ರವು, ನಾನು ಕಂಡ ಸಾಯಿ ಬಾಬ ಅವರ ವಿಶೇಷ-ವಿಭಿನ್ನ ಛಾಯಾಚಿತ್ರ. ಸಾಮಾನ್ಯವಾಗಿ, ಸಾಯಿ ಬಾಬ ರವರ ಎಲ್ಲಾ ಚಿತ್ರಗಳು ಅವರು ಅಭಯ ಹಸ್ತವನ್ನು ತಮ್ಮ ಭಕ್ತರೆಡೆಗೆ ಆಶಿರ್ವದಿಸುವ ರೀತಿಯಲ್ಲಿ ಇರಿಸಿಕೊಂಡ ಭಂಗಿಯಲ್ಲೇ ಇರುವುದನ್ನು ನಾವು ಗಮನಿಸಿದ್ದೇವೆ. ಆದರೆ, ಇಲ್ಲಿ, ಸಾಯಿ ಬಾಬ ಅವರು ತಮ್ಮ ನೈಜ ದೈವೀಯತೆಯನ್ನು ತೊರೆದು, ದೀನ ಭಾವರಾಗಿರುವಂತೆ ತೋರುತ್ತದೆ. ಅಚ್ಚರಿಯಿಂದ ಮೊದಲುಗೊಂಡು ಕುತೂಹಲ ಮೂಡಿಸಿದ ಈ ಚಿತ್ರದ ಬೆನ್ನುಹತ್ತಿ ಹೊರಟ ನನಗೆ ದೊರೆತ ಮಾಹಿತಿ : 25 ನೇ ಮಾರ್ಚ್, 2011 ರಂದು ಸತ್ಯ ಸಾಯಿ ಬಾಬ ತಮ್ಮ ಭಕ್ತರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ, ಅಲ್ಲಿದ್ದ ಭಕ್ತರಲ್ಲೊಬ್ಬರು ಸೆರೆಹಿಡಿದ ಚಿತ್ರವಿದು. ಅದು ಬಾಬಾರೊಡನೆ ತಮ್ಮ ಕಟ್ಟಕಡೆಯ ಸಂದರ್ಶನವೆಂದು, ತಮ್ಮ ಕಣ್ಮುಂದೆ ಕಾಣುತ್ತಿದ್ದ ದೈವವು ಮತ್ತೆಂದೂ ತಮ್ಮ ಮುಂದೆ ಬರಲಾರದಷ್ಟು ದೂರ ಹೊರಟುಹೋಗುತ್ತದೆಂಬ ಅರಿವು ಅಲ್ಲಿ ನೆರೆದಿದ್ದ ಯಾರೊಬ್ಬ ಭಕ್ತನ ಮನಸ್ಸಿನಲ್ಲೂ ಅರಿಕೆಯಾಗಿರಲಿಕ್ಕಿಲ್ಲ. ಆದರೆ, ಅದು ತಮಗೆ ದೊರೆತ ಕೊನೆಯ ಅವಕಾಶವೆಂದು ಅರಿತಿದ್ದ ಬಾಬ, ತಮ್ಮ ಎರಡೂ ಕರಗಳನ್ನು ಜೋಡಿಸಿ ಭಕ್ತರಿಗೆ ಕೈಮುಗಿದಾಗ, ಅವರ ಮನದಾಳದಲ್ಲಿದ್ದ ಕೃತಜ್ಞತಾಭಾವವು ಅವರ ಮುಖದಲ್ಲಿ ಮಡುಗಟ್ಟಿತ್ತು.

ಮೂಲತಃ ನಾನು ಬಾಬ ಅವರ ಪರಮ ಭಕ್ತನೇನಲ್ಲ. ಬಾಲ್ಯದಲ್ಲಿ ನಾನು ಬಾಬಾರನ್ನು ಕಂಡದ್ದು ಒಬ್ಬ ಮಹಾನ್ ಮಾಂತ್ರಿಕನಂತೆ! ತಮಗೆ ಶರಣೆಂದು ಬಂದ ಭಕ್ತಕೊಟಿಗೆ ಕ್ಷಣಾರ್ಧದಲ್ಲಿ ವಿಭೂತಿಯನ್ನೋ ಅಥವಾ ಆಭರಣವನ್ನೋ ಶೂನ್ಯದಿಂದ ಸೃಷ್ಟಿಮಾಡಿ ಆಶಿರ್ವಾದವಾಗಿ ದಯಪಾಲಿಸುತ್ತಿದ್ದ ದೃಶ್ಯವು ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನಾನು ಪ್ರಭುದ್ಧನಾದಂತೆಲ್ಲಾ ಬಾಬ ನನ್ನ ಸ್ಮೃತಿಯಿಂದ ಸಂಪೂರ್ಣವಾಗಿ ಮರೆಯಾಗಿಹೋಗಿದ್ದರು. ಅವರು ಕಟ್ಟಿ-ಬೆಳೆಸಿ-ಪೋಷಿಸುತ್ತಿದ್ದ ದಯಾಸಂಸ್ಥೆಗಳ ಒಂದು ಪ್ರಮುಖ ಅಂಗವಾಗಿ, ಮಾಹಿತಿ ತಂತ್ರಜ್ಞಾನದ ಸ್ಪರ್ಧೆಗಿಳಿದು ಬೆಂಗಳೂರಿನ ವೈಟ್-ಫೀಲ್ಡ್ ನಲ್ಲಿ ಕಂಗೆಟ್ಟು ತಲೆಯೆತ್ತಿರುವ ಸಹಸ್ರಾರು ಹವಾನಿಯಂತ್ರಿತ ಕಟ್ಟಡಗಳ ಮಧ್ಯೆ ಸದ್ದಿಲ್ಲದೆ, ಉಚಿತ ಉನ್ನತ ವೈದ್ಯಕೀಯ ಸೇವೆಯನ್ನು ನಿರಂತರವಾಗಿ ಒದಗಿಸುತ್ತಿರುವ 'ಶ್ರೀ ಸತ್ಯ ಸಾಯಿ ಸೂಪರ್ ಸ್ಪೆಶಾಲಿಟಿ ಹಾಸ್ಪಿಟಲ್' ಅನ್ನು ಹಲವಾರು ಬಾರಿ ನಾನು ತಿರುಗಿನೋಡದೇ ತಿರಸ್ಕರಿಸಿದಂತೆ ತಿರುಗಾಡಿದ್ದುಂಟು. ಆದರೆ ಇಂದು, ಅದೊಂದು ಪವಿತ್ರ ಸ್ಥಾನವೆಂಬ ಪ್ರಬಲ ನಂಬಿಕೆ-ಭಾವನೆಯು ನನ್ನಲ್ಲಿ ಮನೆಮಾಡಿದೆ.

ಬಾಬಾರವರು ತಾವು ತಮ್ಮ 96 ನೇ ವಯಸ್ಸಿನವರೆಗೂ ಆರೋಗ್ಯದಿಂದ ಜೀವಿಸುವುದಾಗಿ ಘೋಷಿಸಿದ್ದರು; ಆದರೆ, ವಿಧಿಯ ಹಲವಾರು ಅನಿರೀಕ್ಷಿತ ಅಪಘಾತಗಳ ಕಾರಣದಿಂದಾಗಿ ಬಾಬ 84 ರ ಹರೆಯದಲ್ಲೇ ದೈವನ ಅಧೀನರಾದರು. "ಅವರ ಭಕ್ತರು ಹೇಳುವಂತೆ, ಬಾಬ ಸತ್ತವರನ್ನು ಬದುಕಿಸುವ ಶಕ್ತಿ ಹೊಂದಿದ್ದರೆ, ತಮ್ಮನ್ನು ತಾವು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲವೇಕೆ?" ಎಂಬುದು ಕೆಲವರ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ-ಸಾಧ್ಯ. ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ಪ್ರಸಂಗವೊಂದು ಇಲ್ಲಿ ಪ್ರಸ್ತುತವೆನಿಸಬಹುದು ಎಂಬುದು ನನ್ನ ಭಾವನೆ.
ಲಂಕೆಯನ್ನು ತಲುಪಲು ಶ್ರೀರಾಮನ ಕಪಿಸೈನ್ಯ ಬಂಡೆಕಲ್ಲುಗಳಿಂದ ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸುತ್ತಿದ್ದವು. ಪ್ರತಿಯೊಂದು ಬಂಡೆಯ ಮೇಲೆ 'ಶ್ರೀರಾಮ' ಎಂದು ಬರೆದು ಭಕ್ತಿಯಿಂದ ಸಮುದ್ರದ ನೀರಿನ ಮೇಲೆ ಹಾಕಲು, ಅವು ಮುಳುಗದೇ ತೇಲುತ್ತಿದ್ದವು. ಇದನ್ನು ಕಂಡ ಶ್ರೀರಾಮನಿಗೆ ಆಶ್ಚರ್ಯವಾಯಿತು. ಆದಿನ ರಾತ್ರಿ ಏಕಾಂತದಲ್ಲಿ ಶ್ರೀರಾಮ ತಾನೂ ಸಹ ಒಂದು ಕಲ್ಲನ್ನು ತೆಗೆದುಕೊಂಡು ಸಮುದ್ರದ ನೀರಿಗೆ ಹಾಕಲು, ಅದು ಮುಳುಗಿಹೋಯಿತು. ಇದನ್ನೆಲ್ಲಾ ಗಮನಿಸುತ್ತಿದ್ದ ಹನುಮಂತ, ಕಲ್ಲುಗಳು ನೀರಿನ ಮೇಲೆ ತೇಲಲು 'ರಾಮನಾಮ'ವೇ ಕಾರಣ ಎಂದು ಶ್ರೀರಾಮನನ್ನುದ್ದೇಶಿಸಿ ಹೇಳಿದನು. ಇದರಿಂದ, ರಾಮನಿಗೆ ಇರದ ಶಕ್ತಿಯು ಅವನ ಪರಮ ಭಕ್ತರು ಭಜಿಸುವ ಶ್ರೀರಾಮನಾಮದ ಮಹಿಮೆಯ ಅಖಂಡವಾದ ನಂಬಿಕೆಗೆ ಇದ್ದಿತು ಎಂಬುದನ್ನು ಇಡೀ ಜಗತ್ತಿಗೇ ತೋರಿಸಿಕೊಡಲಾಗಿದೆ.
ಮೇಲಿನ ಪ್ರಸಂಗದ ಸಾರಾಂಶವನ್ನು ಗ್ರಹಿಸಿಕೊಂಡು ಹೇಳುವುದಾದರೆ, ಅನ್ಯರಿಗೆ ಒಳಿತನ್ನು ಮಾಡುವ ಶಕ್ತಿ ಬಾಬಾರವರಿಗೆ ಇದ್ದಿತೆ ವಿನಃ ತಮ್ಮ ವೈಯಕ್ತಿಕ ಒಳಿತನ್ನು ಸಾಧಿಸಿಕೊಳ್ಳುವುದಕ್ಕಲ್ಲ. ಅವರು ಜನ್ಮ ತಳೆದದ್ದೇ ಜಗತ್ತಿನ ಕಲ್ಯಾಣಕ್ಕಾಗಿಯೇ ಹೊರೆತು ಸ್ವಾರ್ಥ ಸಾಧನೆಗಾಗಿ ಅಲ್ಲ. ಇದಕ್ಕೆಲ್ಲಾ ಮೂಕ ಸಾಕ್ಷಿಯೆಂಬಂತೆ ಪ್ರಪಂಚದಾದ್ಯಂತ ಅವರು ಹುಟ್ಟಿಹಾಕಿದ ಹತ್ತು ಹಲವು ದಯಾಸಂಸ್ಥೆಗಳು ನಮ್ಮೆದುರಿಗಿವೆ. ಆ ಸಂಸ್ಥೆಗಳಿಂದ ಪ್ರಯೋಜನ ಪಡೆದುಕೊಂಡ ಸಹಸ್ರಾರು ಮಂದಿ ನಮ್ಮ ನಡಿವೆಯೇ ಇದ್ದಾರೆ. ತಮ್ಮ ಹುಟ್ಟೂರಾದ ಪುಟ್ಟಪರ್ತಿಯಲ್ಲಿ ಅವರು ಮಾಡಿರುವ ಜನಸೇವೆಯನ್ನು ಅಲ್ಲಿನ ಘನ ಸರ್ಕಾರವು ಇಲ್ಲಿಯವರೆಗೂ ಮಾಡಲು ಸಾಧ್ಯವಾಗಿಲ್ಲ, ಇಂಥಹ ನಿಸ್ವಾರ್ಥ ಸಮಾಜ ಸೇವೆಯನ್ನು ಅಪಾರ ಪ್ರಮಾಣದಲ್ಲಿ ಒಬ್ಬೊಂಟಿಗರಾಗಿ ಸಾಧಿಸಿದ್ದೇ ಬಾಬಾರವರು ನಡೆಸಿದ ಅದ್ಭುತ ಪವಾಡ. ಅಗಲಿದ ಅಂಥಹ ಮಹಾನ್ ಚೇತನಕ್ಕೆ ಈ ಮೂಲಕ ನನ್ನ ಭಾವಪೂರ್ಣ ಶ್ರದ್ಧಾಂಜಲಿಯ ಅರ್ಪಣೆ..

Wednesday, April 20, 2011

Those Three Days..

Those Three Days..
I had been to a nearby Medical Store couple of days ago, to buy few thermometers. Since I wanted minimum Ten of them, the shop-keeper kept me waiting for sometime while the owner arrived to explore thermometers in the midst of all the pharmaceuticals in store. A girl, looking to be in her early 20's came to the druggist asking for a pack of Whisper. I did realize later that it was an embarrassment for her to ask for what she wanted, since me, a guy was there around. She literally did 'whisper' while she asked for the 'Whisper'!

Up to the best of my remembrance, Whisper is the first product of its kind to gain popularity in the market. Manufacturer named it Whisper - the very trade name is indicative of it being something of high-class secrecy and shouldn't be spelled aloud. Being in the Medical Profession, I somehow am not convinced with it being named so; guess it isn't something to whisper about. I strongly suspect if it was the name 'Whisper', which made the product all that popular to begin with in the first place.

Giving the pads to girl, the Chemist at shop wrapped it inside old newspaper and packed in a black polythene cover. Still I wonder, why should a fresh pack of napkins be wrapped in a newspaper and given hidden inside a black polythene cover? Isn't it actually the way of disposing used pads off?! However, like many others, even that girl was so used to receive and carry such a packaged product, slipped herself off the place with it being placed in her handbag.

Menstruation, is as natural process as Salivation in physiological consideration, but definitely isn't an easy phase in life to get along with. I guess it wouldn't be easier for Men either to remain and claim physically stronger if made to bleed regularly at least for Three Days a month, continuously for thirty long years; losing up to 80 ml of fresh blood every time - it's seriously scary! Counting this on, am almost totally convinced that Women are the strongest creation of God on Planet Earth.

Symptoms of Premenstrual Syndrome following physiologic hormonal changes are not the easier ones to have felt; predominantly being tension, irritability and unhappiness. It often is also commonly associated with non-specific symptoms like anxiety, mood swings, increased emotional sensitivity, stress, difficulty in falling asleep, painful cramping in abdomen, back & upper thighs, cyclic acne, joint pains etc. Going through all such things for almost more than half of their lives, it really is a challenge every Women has to face by chance; which they have been doing pretty well, in 'Silence'.

Modern Women in the Civilized World do enough to express their consideration of Menstruation as a Curse. This cannot be termed obstinate, but fact is that they see it as one of the major shortcomings for them to be equivalent to Men. It is a misconception in the minds of young Women that Modernization is all about enjoying equal status as Men do in the Society. Wise is to perceive Modernization as a drift in the Society wherein Women are not deprived of their basic necessities & rights, and are given enough opportunities all over.

I personally feel, Periods shouldn't just be deserving a Whisper ; instead, they truly should be obliged with a call aloud for Social Responsibility, initiated at the basic unit of Society - the Family. It should become an assumed obligation on every member of the family to help Women midst them to get over the physical, physiological and psychological challenges of Menstruation. Just a word of love and a hug of care would make a huge difference than those acts which make them feel a sort of untouchable and inauspicious. In this present Virtual World where we are making a successful living, it shouldn't be impossible for us finding various ways to virtually share this pain of Women, isn't it?? It's only then the campaign - have a happy period from Whisper would be a reality.

Sunday, March 27, 2011

ಮಹಿಳಾ ದಿನಾಚರಣೆ

Mother Teresa
ಪ್ರತಿ ವರ್ಷ 8ನೇ ಮಾರ್ಚ್ ದಿನವನ್ನು 'ವಿಶ್ವ ಮಹಿಳಾ ದಿನಾಚರಣೆ' ಎಂದು ಪರಿಗಣಿಸಿ ಆಚರಿಸಲಾಗುತ್ತಿದೆ. ಮಹಿಳಾ ದಿನಾಚರಣೆಯ ಅಂಗವಾಗಿ ಇದೇ ತಿಂಗಳ 8ನೇ ತಾರೀಖಿನಂದು ಈ ಬರವಣಿಗೆ ಬಿತ್ತರವಾಗಬೇಕಿದ್ದು, ಅನೇಕ ಕಾರಣಗಳಿಂದ ತಡವಾಗಿ ಮೂಡಿಬರುತ್ತಿದೆ; ಕ್ಷಮೆ ಇರಲಿ.

ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ, 28ನೇ ಫೆಬ್ರವರಿ 1909 ರಂದು ಸೋಶಿಯಲಿಸ್ಟ್ ಪಾರ್ಟಿ ಆಫ್ ಅಮೇರಿಕ ಸಂಘದ ಪ್ರೇರಣೆಯಿಂದ 'ದುಡಿಯುವ ಮಹಿಳೆಯರ ದಿನಾಚರಣೆ'ಯು ಪ್ರಪ್ರಥಮವಾಗಿ ಅಮೆರಿಕೆಯಲ್ಲಿ ಆಚರಿಸಲ್ಪಟ್ಟಿತು. ಮೂಲಭೂತವಾಗಿ ಸಾಮಾಜಿಕ-ರಾಜಕೀಯ ಪ್ರಭಾವ ಹೊಂದಿದ್ದ ಈ ಚಳುವಳಿಯು, ಕ್ರಮೇಣ ತನ್ನ ರೂಪವನ್ನು ಬದಲಿಸಿಕೊಂಡು ಇಂದಿಗೆ 'ಮಹಿಳಾ ದಿನಾಚರಣೆ' ಎಂದೇ ವಿಶ್ವದಾದ್ಯಂತ ಪ್ರಖ್ಯಾತಿ ಪಡೆದುಕೊಂಡಿದೆ. ಮಹಿಳೆಯರ ನಿಸ್ವಾರ್ಥ-ಅಖಂಡ ಸೇವೆಯನ್ನು ನೆನೆದು, ಅತ್ಯಂತ ಗೌರವಯುತ ಪ್ರೀತಿಯನ್ನು ಅವರಿಗೆ ಅರ್ಪಿಸುವ ಆಚರಣೆಯಾಗಿ ಈ ದಿನವು ಇಂದು ಮಾರ್ಪಟ್ಟಿದೆ ಎಂದರೆ ತಪ್ಪಾಗಲಾರದು.

ಬರಿಯ ನಾಲ್ಕು ಗೋಡೆಗಳ ಮನೆಯೇ ಮಹಿಳೆಯರ ಪ್ರಪಂಚವಾಗಿದ್ದ ದಿನಗಳಲ್ಲಿಯೂ ಸಹ ಮಹಿಳೆಯರು ತಮ್ಮ ಸಾಮಾಜಿಕ ಸೇವಾ ಗುಣವನ್ನು ಮೆರೆದು ಇಡೀ ಪ್ರಪಂಚವನ್ನೇ ಬೆರಗುಗೊಳಿಸಿದ್ದಕ್ಕೆ ಮದರ್ ತೆರೇಸಾ ಅವರಿಗಿಂತ ಉತ್ತಮ ಉದಾಹರಣೆಯ ಅಗತ್ಯವಿಲ್ಲ. ಭಾರತದ ರಾಜಕೀಯದಲ್ಲಿ ಇಂದಿರಾ ಗಾಂಧಿಯವರ ಹೆಸರನ್ನು ಮರೆಯುವಂತಿಲ್ಲ. ಸಂಗೀತ ಪ್ರಪಂಚದಲ್ಲಿ ಎಂ. ಎಸ್. ಸುಬ್ಬುಲಕ್ಷ್ಮಿ, ಲತಾ ಮಂಗೇಷ್ಕರ್ ಮುಂತಾದವರ ಸಾಧನೆಯನ್ನು ಕಡೆಗಣಿಸುವಂತಿಲ್ಲ. ಪ್ರಿಯಾಂಕ ಮಲ್ಹೋತ್ರ, ಮಂಜು ಭರತ್ ರಾಮ್ ಅವರುಗಳಂತಹ ಯಶಸ್ವೀ ಉದ್ಯಮಿಗಳು ನಮ್ಮ ಮಧ್ಯೆ ಇಲ್ಲದಿಲ್ಲ. ಶಾಕುಂತಲಾ ದೇವಿಯವರ ಗಣಿತ ಪಾಂಡಿತ್ಯವು ಎಂಥವರನ್ನೂ ಬೆರಗುಗೊಳಿಸದೇ ಇರುವುದಿಲ್ಲ.

ಜೀವಿತಾವಧಿಯ ವಿವಿಧ ಹಂತಗಳಲ್ಲಿ ಒಬ್ಬ ಮಹಿಳೆಯು ವಹಿಸಿಕೊಳ್ಳುವ ಹೊಣೆಗಾರಿಕೆಗಳು ಅನೇಕ. ಬಾಲ್ಯದಲ್ಲಿ ಪ್ರೀತಿಪೂರ್ವಕ ಅಕ್ಕ-ತಂಗಿಯರಾಗಿ, ಯುವ್ವನದಲ್ಲಿ ಬಾಳ ಸಂಗಾತಿಯಾಗಿ, ಪ್ರೌಡಾವಸ್ಥೆಯಲ್ಲಿ ತಾಯಿಯಾಗಿ, ವೃದ್ಧಾಪ್ಯದಲ್ಲಿ ಆಸರೆಯಾಗಿ ಮಹಿಳೆಯು ತನಗೆ ವಹಿಸಲ್ಪಟ್ಟ ವಿಭಿನ್ನ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಪರಿಯು ಅದ್ಭುತ! 'ಪ್ರತಿಯೊಬ್ಬ ಯಶಸ್ವೀ ಪುರಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ' ಎನ್ನುವುದು ಬರಿಯ ನಾಣ್ನುಡಿಯಲ್ಲ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಹೀಗಿರುವಾಗ, ಹಲವಾರು ಬಾರಿ ನಮ್ಮ ಸಮಾಜ ಹಾಗೂ ಕುಟುಂಬದಲ್ಲಿ ಮಹಿಳೆಯರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿರುವುದು ಶೋಚನಿಯ ಮತ್ತು ಖಂಡನೀಯ ಸಂಗತಿ.

ಮಹಿಳೆಯರು ಇಂದಿನ ಪ್ರಗತಿಶೀಲ ಸಮಾಜದಲ್ಲಿ ಹಿಂದೆಂದಿಗಿಂತಲೂ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದೇ ಹೇಳಬೇಕು; ಅದಕ್ಕೆ ಅವರು ಅರ್ಹರೂ ಹೌದು. ಆದರೆ, ಅದೆಷ್ಟೋ ಮಂದಿ ಮಹಿಳೆಯರು ಅರಿವಿಗೆ ಬಾರದಂತೆಯೇ ತಮ್ಮ ಜೀವನವನ್ನು ಭವಿಷ್ಯವಿಲ್ಲದ ಕತ್ತಲೆ ಕೋಣೆಗಳ ನರಕದಲ್ಲಿ ಸದ್ದಿಲ್ಲದೇ ಕಳೆದುಬಿಡುತ್ತಿರುವುದೂ ವಾಸ್ತವ. ಪ್ರತಿಯೊಬ್ಬ ಮಹಿಳೆಯೂ ಸಹ ಉತ್ತಮ ಬಾಳಿನ ಕನಸು ಕಾಣುವುದು ಅವರುಗಳ ಆಜನ್ಮಸಿಧ್ಧ ಹಕ್ಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಇದು ಸಾಕಾರವಾಗಬೇಕಾದರೆ, ಬದಲಾವಣೆಯ ಅವಶ್ಯಕತೆಯಿದೆ - ಈ ಬದಲಾವಣೆಯನ್ನು ಸಮಾಜದ ತಳಹದಿ ಘಟ್ಟವಾದ ಕುಟುಂಬದಲ್ಲಿ ತರುವ ಪ್ರಾಮಾಣಿಕ ಪ್ರಯತ್ನ ನಾವೆಲ್ಲರೂ ಮಾಡಬೇಕಾಗಿದೆ; ಮಾಡಿಯೇ ತೀರಬೇಕಾಗಿದೆ. ನಮ್ಮಗಳ ಸಂಸಾರದ ಅವಿಭಾಜ್ಯ-ಪ್ರಮುಖ ಅಂಗಗಳಾಗಿರುವ ಪ್ರತಿಯೊಬ್ಬ ಮಹಿಳೆಯನ್ನೂ ಮಹಿಳಾ ದಿನಾಚರಣೆಯಂದು ಮಾತ್ರವಲ್ಲದೇ ದಿನನಿತ್ಯವೂ ಪ್ರೀತಿಯಿಂದ ಕಾಣೋಣ, ಸದ್ನಡತೆಯಿಂದ ಸತ್ಕರಿಸಿ ಗೌರವಿಸೋಣ..

Saturday, February 12, 2011

ಸಾಮಾಜಿಕ ಹೊಣೆಗಾರಿಕೆ?

Social Responsibility?
ಕಳೆದ ವಾರ, ಬೆಂಗಳೂರಿನ ಪ್ರಮುಖ ಬಡಾವಣೆಯೊಂದರ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದ ನನಗೆ ಆಶ್ಚರ್ಯ-ಆತಂಕ ತರುವಂತಹ ದೃಶ್ಯವೊಂದು ಗೋಚರಿಸಿತು. ರಸ್ತೆಯ ಎಡಕ್ಕೆ ಹೊಂದಿಕೊಂಡಂತಿದ್ದ ಕಾಂಪೌಂಡ್ ಗೋಡೆಯ ಒಳಬದಿಯಲ್ಲಿ ದಟ್ಟ-ಕಪ್ಪು ಹೊಗೆಯನ್ನು ಉಗುಳುತ್ತಾ ಹೊತ್ತಿ ಉರಿಯುತ್ತಿದ್ದ ಬೆಂಕಿಯುನ್ನು ಕಂಡ ನನಗೆ ಕ್ಷಣಮಾತ್ರ ಉಸಿರುಕಟ್ಟಿದ ಅನುಭವವಾಯಿತು.

ಪರಿಸರವನ್ನು (ಶಕ್ತಿಮೀರಿ) ಕಲುಷಿತಗೊಳಿಸುತ್ತಿದ್ದ ಬೆಂಕಿಯಿಂದ ಸುತ್ತ-ಮುತ್ತಲಿದ್ದ ಯಾರೊಬ್ಬರೂ ವಿಚಲಿತರಾದಂತೆ ಕಾಣಲಿಲ್ಲ; ಹೀಗಿದ್ದಾಗ, ಬೆಂಕಿಯನ್ನು ನಂದಿಸುವ ಪ್ರಯತ್ನ ದೂರದ ಮಾತೇ ಸರಿ! ಕುತೂಹಲ ತಡೆಯಲಾರದ ನಾನು ವಾಹನವನ್ನು ನಿಲ್ಲಿಸುವಂತೆ ನಮ್ಮ ಚಾಲಕರಿಗೆ ಹೇಳಿ, ಕೆಳಗಿಳಿದು ಹೋಗಿ ತುದಿಗಾಲಿನ ಮೇಲೆ ನಿಂತು ಬೆಂಕಿಗೆ ಕಾರಣವೇನು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ಕೆಲವು ಹಳೆಯ ವಾಹನ ಚಕ್ರ (ಟೈರ್)ಗಳನ್ನು ಗುಡ್ಡೆ ಹಾಕಿ ಯಾರೋ ಬೆಂಕಿ ಹೊತ್ತಿಸಿದ್ದರು. ಇದು ಯಾರ ದುಷ್ಕೃತ್ಯವಿರಬಹುದೆಂದು ಸುತ್ತ ಕಣ್ಣಾಡಿಸಲು, ರಸ್ತೆಯ ಇನ್ನೊಂದು ಬದಿಯಲ್ಲಿ ದ್ವಿಚಕ್ರ ವಾಹನಗಳ ದುರಸ್ತಿ ಕಾರ್ಯಾಗಾರವೊಂದು ಕಾಣಿಸಿತು.

ಅದೊಂದು ಪುಟ್ಟ ಅಂಗಡಿ; ದ್ವಿಚಕ್ರ ವಾಹನಗಳ ದುರಸ್ತಿಗೆ ಬೇಕಾಗುವ ಯಂತ್ರಗಳು ಚಿಕ್ಕ ಅಂಗಡಿಯ ಅಳತೆಯನ್ನು ಮೀರಿ ತಮ್ಮ ಅಸ್ತಿತ್ವವನ್ನು ಒಳಗಡೆ ಸ್ಥಾಪಿಸಿಕೊಂದಿದ್ದವು. ಅಲ್ಲೊಬ್ಬ ಐವತ್ತರ ಹರೆಯದ ಮಾಲಿಕ; ಅವನೊಡನೆ ಕೆಲಸದಲ್ಲಿ ತಲ್ಲೀನರಾಗಿದ್ದ ಇಬ್ಬರು ಹುಡುಗರು - ಶಾಲೆಯಲ್ಲಿ ಕಲಿಯುವ ವರವನ್ನು ದೇವರಲ್ಲಿ ಆ ಇಬ್ಬರೂ ಪಡೆದುಕೊಂಡು ಬಂದಂತೆ ಕಾಣಲಿಲ್ಲ. ರಸ್ತೆಯ ಪಾದಚಾರಿ ಮಾರ್ಗವೇ ಅವರುಗಳ ಕಾರ್ಯಾಗಾರ. ವಾಹನವೊಂದರ ಚಕ್ರ ಕಳಚುವಲ್ಲಿ ನಿರತನಾಗಿದ್ದ ಹುಡುಗನೊಬ್ಬನಿಗೆ ಮಾಲಿಕ ಕೂಗಿ ಕರೆದು ಅದೇನನ್ನೋ ಹೇಳಿದ. ಎದ್ದು ಹೋದ ಹುಡುಗ ಮಾಲಿಕನಿಂದ ಹೊಗೆ-ಕೊಳವೆ (ಸೈಲೆನ್ಸರ್) ಒಂದನ್ನು ತೆಗೆದುಕೊಂಡು, ರಸ್ತೆ ದಾಟಿ ನೇರವಾಗಿ ಬಂದವನು ಅಲ್ಲೇ ನಿಂತಿದ್ದ ನನ್ನನ್ನು ಹಾದು ಕಾಂಪೌಂಡ್ ಗೋಡೆ ಹಾರಿ ಹೋದ. ತಂದಿದ್ದ ಹೊಗೆ-ಕೆಳವೆಯನ್ನು ಉರಿಯುತ್ತಿದ್ದ ಬೆಂಕಿಗೆ ಆಹುತಿ ನೀಡಿ, ಈ ಮೊದಲೇ ಅಲ್ಲಿ ಇರಿಸಿದ್ದ ವಸ್ತುಗಳ ಸ್ಥಿತಿಯನ್ನು ಪರಿಶೀಲಿಸಿ ಹಿಂತಿರುಗಿ ಹೋಗಿ ತನ್ನ ಕಾಯಕದಲ್ಲಿ ಲೀನನಾದ.

ಇದನ್ನೆಲ್ಲಾ ನೋಡಿಕೊಂಡು ನಿಂತಿದ್ದ ನನ್ನ ಭಾವನೆಯು ಆ ಹೊತ್ತಿಗಾಗಲೇ ಕೋಪದಿಂದ ಕರುಣೆಯಾಗಿ ಮಾರ್ಪಟ್ಟಿತ್ತು. ಮಾಲಿಕ ಹಾಗೂ ಇಬ್ಬರು ಹುಡುಗರ ದಿನನಿತ್ಯದ ಬದಿಕಿನ ಕರಾಳ ಚಿತ್ರಣವನ್ನು ನೆನೆದ ನಾನು, ಅವರುಗಳಿಗೆ ಪರಿಸರ ಮಾಲಿನ್ಯ ಹಾಗೂ ಸಂರಕ್ಷಣೆಯ ಕುರಿತು ಹೇಳಬೇಕೆಂದಿದ್ದ ಮಾತುಗಳನ್ನು ನನ್ನೊಳಗೆಯೇ ಸಮಾಧಿ ಮಾಡಿ ಮೂಕನಾಗಿ ನಿಟ್ಟುಸಿರಿಟ್ಟೆ. ಪರಿಸರ ಸಂರಕ್ಷಣೆಯ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತೂ ಮರೆತಂತಿರುವ ಬೆಂಗಳೂರಿನ ಅಸಂಖ್ಯಾತ ನಗರವಾಸಿಗಳಲ್ಲಿ ನಾನೂ ಒಬ್ಬನಾಗಿ ಹೆಮ್ಮೆಯಿಂದ (?!) ಅಲ್ಲಿಂದ ವಾಹನವೇರಿ ಹೊರಟೆ.

ತನ್ನನ್ನು ತಡೆಯುವ ಧೈರ್ಯ-ಶಕ್ತಿ ಯಾರಿಗೂ ಇಲ್ಲವೆಂಬುದನ್ನು ಎತ್ತಿ ತೋರಿಸುವಂತೆ, ದಟ್ಟ ಹೊಗೆಯನ್ನು ಹೊರಸೂಸುತ್ತಾ ಪ್ರಜ್ವಲವಾಗಿ ಹೊತ್ತಿ ಬೆಂಕಿ ಉರಿಯುತ್ತಿತ್ತು. ತನ್ನನ್ನು ಸಂರಕ್ಷಿಸಿ ಕಾಪಾಡುವ ಆಸಕ್ತಿ-ಕಾಳಜಿ ಯಾರಿಗೂ ಇಲ್ಲವೆಂಬುದನ್ನು ಅರಿತು, ಉಸಿರುಕಟ್ಟಿ ಶೋಕದಿಂದ ಮನುಜರನ್ನು ಹೊತ್ತು ಭೂಮಿ ಸಾಗುತಲಿತ್ತು. ವೇಗವಾಗಿ ಚಲಿಸುತ್ತಿದ್ದ ವಾಹನದೊಳಗೆ ಕುಳಿತಿದ್ದ ನನ್ನೊಳಗಿನ ವಿವೇಕವು ಬದುಕಿಯೂ ಸತ್ತಂತಿತ್ತು..!

Wednesday, January 26, 2011

ಪ್ರಜಾಪ್ರಭುತ್ವ?!

ಕರ್ನಾಟಕದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳು ಪ್ರಜಾಪ್ರಭುತ್ವದ ಬುಡಕ್ಕೆ ಆಘಾತಕಾರಿ ಪೆಟ್ಟು ನೀಡುವಂಥವು. ಪ್ರಜಾಪ್ರಭುತ್ವದ ಮೂಲ ಮಂತ್ರಗಳನ್ನು ಗಾಳಿಗೆ ತೂರಿ, ಸ್ವಾರ್ಥ ಅಭಿಲಾಷೆಗಳಿಗೆ - ಸ್ವಜನ ಕ್ಷೇಮಾಭಿವೃದ್ಧಿಗೆ ಸಾರ್ವಜನಿಕರ ಹಕ್ಕು-ಭಾದ್ಯತೆಗಳನ್ನು ಹೊಸಕಿಹಾಕಿ, ವೈಯಕ್ತಿಕ ಫಲಾನುಭವಕ್ಕೆ ಅಧಿಕಾರವನ್ನು ಅನೈತಿಕವಾಗಿ  ದುರುಪಯೋಗ ಮಾಡಿಕೊಂಡು, ಶುಭ್ರ ಶ್ವೇತ ವರ್ಣದ ರಾಜಕೀಯವನ್ನು ಕೊಳೆತ ರಾಡಿಯಾಗಿ ನಾರುವಂತೆ ಮಾಡಿರುವ ರಾಜಕಾರಣಿಗಳೆಂಬ ಗೋಮುಖ ವ್ಯಾಘ್ರಗಳಿಗೆ ಧಿಕ್ಕಾರವಿರಲಿ.

22 ಜನವರಿ, 2011 ರಂದು ನಡೆದ ಕರ್ನಾಟಕ ಬಂದ್, ನನಗೆ ಬುದ್ಧಿ ತಿಳಿದ ನಂತರ ನಡೆದ ಏಕೈಕ ಆಡಳಿತಾರೂಢ ಸರ್ಕಾರ ಪ್ರೇರಿತ-ಪೋಷಿತ-ಪ್ರಾಯೋಜಿತ ಬಂದ್. ತಂತಮ್ಮ ವೈಯಕ್ತಿಕ ಕಾರಣ-ಪ್ರತಿಷ್ಠೆಗಳಿಗಾಗಿ ಸಮಸ್ತ ಕರ್ನಾಟಕ ಜನತೆಯ ದೈನಂದಿನ ಜೀವನವನ್ನು ಬರಡಾಗಿಸಿದ ರಾಜಕೀಯ ಖಳನಾಯಕರು ಸರ್ಕಾರ ನಡೆಸುವ ನೈತಿಕ ಅರ್ಹತೆಯನ್ನು ಕಳೆದುಕೊಂಡರೂ ಸಹ ನಾಚಿಕೆಗೆಟ್ಟು, ಅತ್ಯಂತ ದುರಾಚಾರಗಳಿಂದ ಕೂಡಿದ ದುರಾಡಳಿತವನ್ನು ತ್ಯಜಿಸದೆ ಅಧಿಕಾರಶಾಹಿಗಳಾಗಿ ಮುಂದುವರೆಯುತ್ತಿರುವುದು ಅತ್ಯಂತ ಹೇಯ.

ರಾಜ್ಯದ ಸುಸಂಸ್ಕೃತ, ಸಜ್ಜನ ಕನ್ನಡಿಗರನ್ನು ನೆಪವಾಗಿಸಿ, ತಮ್ಮ ಪಕ್ಷದ ಕಾರ್ಯಕರ್ತರನ್ನು ಪ್ರಚೋದಿಸಿ, ಒತ್ತಾಯಪೂರ್ವಕ ಬಂದ್ ಗೆ 'ಸ್ವಯಂ-ಪ್ರೇರಿತ' ಎಂಬ ಹಣೆಪಟ್ಟಿ ಹಚ್ಚಿ, ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟು ಮಾಡಿರುವುದು ಆಡಳಿತ ಪಕ್ಷದ ಷಡ್ಯಂತ್ರವೆಂಬುದರಲ್ಲಿ ಸಂಶಯವಿಲ್ಲ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಬಂದ್ ನ ಹೆಸರಿನಲ್ಲಿ ನಡೆಸುತ್ತಿದ್ದ ದಾಂಧಲೆಗಳನ್ನು ಕಣ್ಣಾರೆ ಕಂಡ ಜನತೆಗೆ ಆಡಳಿತ ಪಕ್ಷದ ನಾಯಕರುಗಳು ನೀಡಿದ್ದು 'ಇದರಲ್ಲಿ ತಮ್ಮ ತಪ್ಪೇನೂ ಇಲ್ಲ, ಸಾರ್ವಜನಿಕರಿಗೆ ಆದ ನಷ್ಟಗಳಿಗೆಲ್ಲ ನೇರ ಹೊಣೆಗಾರರು ರಾಜ್ಯಪಾಲ' ಎಂಬ ಅಸಂಬಧ್ಧ ಹೇಳಿಕೆ. ಬಾಯಿಗೆ ಬಂದದ್ದನ್ನು ಹರಟಿದರೆ ಜನ ಒಪ್ಪುತ್ತಾರೆಂದು ನಂಬಿಕೊಂಡಿರುವ ಮೂರ್ಖ ರಾಜಕಾರಣಿಗಳಿಗಿಂತ ಕನ್ನಡಿಗರು ಬುಧ್ಧಿವಂತರು ಎಂಬುದು ವಾಸ್ತವ.

ಬಂದ್ ನ ನೆಪದಲ್ಲಿ ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚುವುದು, ಸಾರ್ವಜನಿಕ ಕಟ್ಟಡಗಳಿಗೆ ಹಾನಿ ಮಾಡುವುದು, ಹೊಟ್ಟೆಪಾಡಿಗಾಗಿ ಪ್ರತಿಯೊಂದಕ್ಕೆ 50 ಪೈಸೆಯಂತೆ ದಿನಪತ್ರಿಕೆಗಳನ್ನು ಮಾರಾಟ ಮಾಡುವ ರಸ್ತೆ ಬದಿಯ ವ್ಯಾಪಾರಿಗಳನ್ನು ಸುಲಿಗೆ ಮಾಡುವುದು, ಹೂಡಿದ ಬಂಡವಾಳದ ಸಂಪಾದನೆಯ ಆಶಯದಿಂದ ವ್ಯಾಪಾರ ಮಾಡುವವರ ಅಂಗಡಿಗಳನ್ನು ಧ್ವಂಸಮಾದುವುದು, ಗಗನಕ್ಕೇರಿರುವ ತರಕಾರಿ ಹಾಗೂ ಇನ್ನಿತರೆಗಳನ್ನು ಬೀದಿಗೆ ಸುರಿದು ನಾಶಮಾಡುವುದರಲ್ಲಿ ಸಾರ್ಥಕತೆ ಕಾಣುವ ರಾಜಕೀಯ ಪಕ್ಷಗಳದ್ದು 'ಹೇಯ-ವಿಕೃತ ರಾಜಕೀಯ'ವಲ್ಲದೆ ಮತ್ತಿನ್ನೇನು?

ಪ್ರಜೆಗಳೇ ಪ್ರಭುಗಳಾಗಬೇಕಿದ್ದ ಪ್ರಜಾಪ್ರಭುತ್ವದಲ್ಲಿ, ಜನತೆ ರಾಜಕಾರಣಿಗಳ ಬ್ರಷ್ಟಾಚಾರದ ಅಟ್ಟಹಾಸ ಹಾಗೂ ಕುತಂತ್ರಗಳಿಗೆ ಹರಕೆಯ ಕುರಿಗಳಾಗಿರುವುದು ಶೋಚನೀಯ ಸಂಗತಿ. ವಿವಿಧ ರಾಜಕೀಯ ಪಕ್ಷಗಳ ಒಳಜಗಳಗಳನ್ನು ಸಮಾಜೀಕರಣಗೊಳಿಸಿ, ಜನಸಾಮಾನ್ಯರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ದುಷ್ಟ ರಾಜಕಾರಣಿಗಳು 62ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಭಾರತ ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಅಂಟಿದ ಕಳಂಕ; ಇವರುಗಳನ್ನು ಬುಡಸಹಿತ ನಿರ್ಮೂಲನೆ ಮಾಡುವ ಹೊರೆತು ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಅನ್ಯ ಮಾರ್ಗವಿಲ್ಲ.

Saturday, January 22, 2011

Karnataka Bandh

Karnataka Bandh : TV9 Exclusive Pictures
22nd day of January 2011, Public all over the State staged Karnataka Bandh. Had they no better work to do? 'No. Six crore Kannadigas expressed their rage towards the decision of sanction given by Governor H. R. Bhardwaj, to prosecute Chief Minister B. S. Yeddyurappa on allegations of corruption' - said BJP Spokesperson. I was all set to deliver a talk on Control of Bovine Tuberculosis in a training program today at Southern Regional Disease Diagnostic Laboratory, needless to mention that all my overnight efforts of preparation went in vain.

When none felt so, 'it was a self-motivated bandh by the Public' feels the ruling party alone! If true, I definitely have to appreciate the real swift decision with action of Public, vowing the fact that a state-wide protest initiated self-motivated; in less than a few hours. 'Was there a need to a self-motivated bandh be called for?' questioned the opposition and opined 'it was nothing more than a Govt-Sponsored Strike'. Like govt-sponsored bicycle, govt-sponsored ambulance and govt-sponsored bisi-uta, now comes the govt-sponsored bandh; no surprise!

Though I could only see a countable number of BJP members ruining the livelihood of many working class people everywhere, ruling party leaders addressing press told that it was the 'Public' who protested by extending overwhelming support to the BJP. They also said 'except few reports of stone-pelting and lathi-charge along with two buses being set fire, bandh was overall peaceful' - how can a few hundreds of BJP members do every damage allover? It ought to be peaceful, no other ways. For being the Constitutional Authority and sanctioning to prosecute the corrupts, H. R. Bhardwaj had to take all the blame of being responsible for every loss incurred due to today's bandh. The simple word 'Shame' seems to have  been disappeared from the dictionary of politicians; word 'Ethics' would be too much of an ask.

'Karnataka had never witnessed such degree of corruption before' said Mr. K. N. Balaraj, one of the two Advocates who had sought sanction from Governor to prosecute Chief Minister and others on allegations of corruption. Mr. Sirajin Bhasha, the other Advocate seemed confident when said 'there are no political or external forces behind our move and we never will relax until putting an end to this corruption'. No wonder both of them are now the real heros amongst the general Public.

POLITICS AT ITS WORST BEST..??!

Monday, January 3, 2011

Right to PPP

Image © Prashanth
Image © Mayank
Image © Mayank
Image © Mayank
Image © Mayank
Image © Rachel
right to PEE in PUBLIC PLACES

Should it be a Fundamental Right?

Friday, December 17, 2010

Kick on their..

Image © Prajavani
Villagers boycott upcoming Panchayat Election for being deprived of basic facilities.

They demand not a stay in 'Resort'; true! All they need are the very basic facilities like road for transportation and drinking water to be made available in their village Haralahalli, Maddur Taluk.

Till date I was very happy for not shirking form my responsibility of being a sensible citizen in the biggest democracy; never have missed casting my vote in any elections since I turned magical 'eighteen'. But now, I feel really ashamed of being responsible for having put the possible best corrupts to rule us.

"None of them are good enough", I use to think looking at the contestants list at election. Just because they have invented the electronic voting machine, it doesn't mean to go push any one of the many buttons available. Hopefully, I never may leave my finger impression on the voting machine anymore.

"Boycotting elections will not help to bring the able to rule", told one of my elders when we were discussing about the issue. But, for that, I also don't want to help and bring the corrupts to rule! Personally, I feel, boycotting Panchayat Elections by villagers will definitely gonna be a  nice "kick on their a$$" for being bothered least by what they were actually elected for. Hopefully many of the sensible citizens will join their LEGS to make the KICK much more stronger.

Cheers to DeMoCrAcY!!

Saturday, November 20, 2010

ಏಕೀ ಮುನಿಸು?

When Nature Laughs, Humans Cry.. (© The Hindu)
ಮುಳುಗಿಹೋದ ಮನೆಗಳು..
ಕಾಳಿಲ್ಲದ ಕಣಜಗಳು..
ಮಸುಕಾದ ಮನಸುಗಳು..
ಕೆಲಸವಿಲ್ಲದ ಕೈಗಳು..
ನಗುವಿಲ್ಲದ ಮೊಗಗಳು..
ಆಸರೆಯಿಲ್ಲದ ಆಕಳುಗಳು..
ನಾಶವಾದ ಬೆಳೆಗಳು..
ಕೊಚ್ಚಿಹೋದ ಕನಸುಗಳು..

ಇವಿಷ್ಟೇ ಇಂದು ನಮ್ಮ ರೈತರ ಬದುಕಲ್ಲಿ ಉಳಿದಿರುವುದು-ಕಾಣಸಿಗುವುದು. ಜಗತ್ತಿಗೇ ಅನ್ನವನ್ನು ನೀಡುವ ಕೈಗಳು ಇಂದು ಆಸರೆಗಾಗಿ ಕೈಚಾಚಿ ಕುಳಿತಿರುವ ದೃಶ್ಯವು ಆಘಾತವನ್ನುಂಟುಮಾಡಿದೆ. ಅತೀವೃಷ್ಟಿಯಿಂದಾಗಿ ಎದೆಯೆತ್ತರಕ್ಕೆ ಬೆಳೆದು ನಿಂತ ಚಿನ್ನದಂಥ ಬೆಳೆಗಳು ನೆಲಕ್ಕುರುಳಿ, ಮೊಳಕೆಯೊಡೆದು ಹಾಳಾಗಿವೆ. ಈಗಾಗಲೇ ಬೆಟ್ಟದಷ್ಟಿದ್ದ ಸಾಲದ ಹೊರೆಗೆ ಮತ್ತಷ್ಟು ಹೇರಿಕೊಂಡಿದೆ. ದುಖದ ಅಳು ಮುಂದುವರೆದರೂ ಸಹ ರೈತರ ಕಣ್ಣೀರು ಬತ್ತಿಹೋಗಿದೆ.

ಇತರರ ಸುಖಕ್ಕಾಗಿ ತನ್ನ ತ್ಯಾಗದಿಂದಲೇ ಜೀವನದ ಸಾರ್ಥಕತೆಯನ್ನು ಕಂಡುಕೊಂಡು ಬದುಕುತ್ತಿರುವ ನಮ್ಮ ರೈತರನ್ನು ಘನ ಸರ್ಕಾರಗಳು ಹಿಂದಿನಿಂದಲೂ ಕಡೆಗಾಣುತ್ತಾ ಬಂದಿವೆ. ಆದರೆ, ಅದೇಕೋ ಈಗ ಪ್ರಕೃತಿಯೂ ಸಹ ರೈತನ ಮೇಲೆ ಕೆಂಗಣ್ಣು ಬೀರಿದೆ. ಮುಂಗಾರಿನಿಂದಲೂ ಸಕಾಲದಲ್ಲಿ ಮಳೆಯಾಗಿ, ಸೊಂಪಾಗಿ ಕಂಗೊಳಿಸುತ್ತಿದ್ದ ಬೆಳೆಯು ರೈತರ ಜೀವನದಲ್ಲಿ ಹೊಸ ಹುರುಪನ್ನು ತಂದುಬಿಟ್ಟಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ, ಅಕಾಲಿಕ ಮಳೆಯಿಂದಾಗಿ ಈಗ ಬೆಳೆಗಳು ನಾಶವಾಗಿ, ಫಸಲು ನೀರಿನ ಪಾಲಾಗಿಹೋಗಿದೆ.

ಹೊಲಸಿನ ರಾಜಕೀಯದಲ್ಲಿ ಮುಳುಗಿ ತೇಲುತ್ತಿರುವ ನಾಯಕರುಗಳಿಗೆ ರೈತರ ಕಣ್ಣಿರಿನ ಅರಿವೆಯೂ ಇಲ್ಲ; ಕೊಚ್ಚಿಹೋದ ರೈತರ ಬದುಕಿನ ಬಗೆಗೆ ಕಾಳಜಿಯೂ ಇಲ್ಲ. ಕೋಟಿಗಟ್ಟಲೆ ಹಣ ಲೂಟಿ ಮಾಡಿ, ಸಿಕ್ಕ ಸಿಕ್ಕ ಭೂಪ್ರದೇಶಗಳನ್ನು ಅಕ್ರಮವಾಗಿ ಕಸಿದುಕೊಂಡು ರಾಜಾರೋಷವಾಗಿ ತಿರುಗುತ್ತಿರುವ ರಾಜಕಾರಣಿಗಳ ಮಧ್ಯೆ ತಮ್ಮದೇ  ಅಂಗೈ ಅಗಲದ ಬರಡು ಭೂಮಿಯಲ್ಲಿ ಸಾಲ ತಂದು ಬೆಳೆದ ಧಾನ್ಯವನ್ನು ಕಳೆದುಕೊಂಡು ತುತ್ತು ಅನ್ನಕ್ಕಾಗಿ ರೈತರು ಪರದಾಡುತ್ತಾ ಮೂಲೆಗುಂಪಾಗಿರುವುದು ದುರಂತವೇ ಸರಿ. ಪ್ರಕೃತಿಯೂ ಸಹ ನಂಬಿಕೆದ್ರೋಹವೆಸಗಿ ರಾಜಕಾರಣಿಗಳ ಸಾಲಿನಲ್ಲಿ ನಿಂತಿರುವಾಗ ರೈತರಿಗೆ ಆಸರೆ ನೀಡುವವರು ಯಾರು? ಅವರ ಮೊರೆ ಆಲಿಸುವವರು ಯಾರು? ರೈತರಿಗೆ ಸಹಾಯ ಮಾಡುವವರಾದರೂ ಯಾರು?

ಹೇ ವರುಣದೇವ, ನಿನಗೆ ಪೌರುಷವೆನಾದರೂ ಇದ್ದರೆ; ಮುಳುಗಿಸು ಹೊಲಸು ರಾಜಕಾರಣಿಗಳನ್ನು, ಕೊಚ್ಚಿಕೊಂಡು ಹೋಗುವಂತೆ ಮಾಡು ಬ್ರಷ್ಟಾಚಾರವನ್ನು, ನೆಲಸಮಗೊಳಿಸು ರೈತರ ಸಾಲದ ಹೊರೆಯನ್ನು, ನಿರ್ಮೂಲನೆ ಮಾಡು ಸಮಾಜಘಾತುಕ ಶಕ್ತಿಗಳನ್ನು, ಬುಡಮೇಲು ಮಾಡು ಭಯಾನಕ ರೋಗಗಳ ಅಸ್ತಿತ್ವವನ್ನು. ಇವ್ಯಾವುವೂ ಸಾಧ್ಯವಾಗದಿದ್ದರೆ, ದಯಮಾಡಿ-ಕರುಣೆತೋರಿ ಕೈಕಟ್ಟಿ ಕುಳಿತುಕೋ. ಅನ್ಯತಾ ಬಡ ರೈತನ ಮೇಲೆ ನಿನಗೆ ಏಕೀ ಮುನಿಸು?

Saturday, October 30, 2010

Humans & Humanity

Humanity @ its best..?!
Yesterday morning, (as usual) it was a bit late while I started to Office. Considering my threshold of laziness, that isn't news. Vehicle traffic on the road was (unusually) sparing! Feels good to see congestion-free 'Namma Metro' lanes in Bangalore. My contentment for getting a chance to drive along so peacefully didn't last too long; as I saw what you can see in the picture above.

Bajaj Chetak scooter (no matter), a Man riding (no matter), and a pillion kid (no matter), with a 'heap' of broiler birds hung all around (this, does matter; at least to me).

Firstly, there should have been some basic thinking happening before procuring the birds for slaughter (well, as far as I know, none opt to procure adult broiler birds for rearing). No issues with non-veg eating; but, that shouldn't be considered a license for committing violence. Birds would have easily been procured from a nearby source/vendor to avoid imposing immense suffering on their part.

Secondly, if at all it was a mandate to procure birds from a distant source/vendor, proper transportation facilities should have been kept handy in advance. When we want the pleasure of eating tasty chicken, why not spend a few bucks more on its transportation?

Thirdly, if it was circumstantially unavoidable to dump the 'heap' of birds at the back of a bike/scooter, minimum common sense should have been employed to drive safe. I observed (can be observed in the above picture too) he was riding so close to the footpath all along, some birds were crushed hard to the edge of the footpath and it was a painful scene to see the feathers of those birds flying out while their head and body being rubbed to the concrete blocks making them cry 'kok-cok'.. 'kokcockak'..

Why do people think it is the bird's fate to undergo such sufferings by being picked up for slaughter? Just because their lives are going to end in a while or so, should we put their life to such 'misery'? At least, by handling them appropriately to reduce the transportation stress, is it not possible to act humane?

No humans are going to live forever; every one of us are going to end our life one day or the other, sooner or later. But still, we make sure to enjoy all possible worldly pleasures throughout our life. Now, then, if 'we' can, why not the 'chickens'? If 'humans' can; why not 'other forms of life' on earth? I get the feeling that, it isn't possible unless those birds peck us to bleeding death.

Tuesday, October 5, 2010

Why Blame Women?

Have you ever heard of Men who marry another woman, for their 'wives being incapable' of giving birth to a 'Baby Boy'? If not, lucky you! I always wonder why on this Planet Earth, people crave so much for a 'Baby Boy'? May be they think their Gene is (in)valuable and only Mr. Boy can actually Drop it down the generation lane!!

Even in my family, I was born following two elder sisters and "If at all you were not born boy, I might have had a tough time with in-laws" said Mom once. Today, I still do not find any valid reasons, to substantiate the necessity of a baby being born boy than a girl. Both of them, either a boy or a girl, at the end of the day are Human Beings; also, they both have every equal right to be born and make a living.

According to Cytology, all (normal) human beings have 23 pairs of chromosomes (totally 46 chromosomes); out of which 22 pairs are autosomes and only 1 pair is sex chromosomes. These sex chromosomes are basically responsible in determining the Sex of an individual. A normal individual with 'XX' sex chromosomes is a Female and one with 'XY' sex chromosomes is a Male. During fertilization, a zygote (baby) is formed by one sex chromosome each from male (father) and female (mother). If both male and female contributes 'X', then the zygote is 'XX' (female); If male contributes 'Y' and female (can only) contribute 'X', the zygote is 'XY' (male). This is the 'XY Sex-Determination System' of human beings in a nutshell.

Biologically speaking, the crucial part of sex determination is played by the Y-Chromosome or in other words (normal) sex determination is solely dependent on male (father) alone. Although the process of sex determination is highly unpredictable and is a mere chance factor, it is crystal clear that female (mother) cease to share the responsibility in determining the sex of a normal zygote (baby).

For no reason and no fault of theirs, Women are being made responsible for the birth of a baby girl and are subjective victims of inhumane social torture from ages now. But, being truly responsible, Men have been safely enjoying a comfortable position in the family and society. It isn't forgotten that 'ours is a male-dominant society'; though male-dominance itself is a highly questionable debate, it definitely otherwise shouldn't authorize to 'torture women'.

With all the physiological pleasure and pressure of the 9-month long pregnancy, Women also are ably taking the curse and tolerating the social harassment in Silence. Isn't it now necessary to brand Men (with a red-hot iron) to be responsible for the sex of the baby born; and from the bottom of the heart say to Women 'Hats Off' & end her sufferings??

Saturday, September 18, 2010

Cattle Slaughter Ban Bill

Animal Slaughter (Picture © Gopal Agarwal)
Couple of days ago, I attended a Seminar in NIANP (National Institute of Animal Nutrition and Physiology) Campus at Adugodi, Bengaluru. Though the core subject was Animal Nutrition itself, there was no such constraints to our discussion at Tea-Break - so was the debate on The Karnataka Prevention of Slaughter and Preservation of Cattle Bill, 2010; which was passed in the Karnataka Assembly early this year. It was indeed a long break than usual, since the Slaughter Ban Bill came to debate. Although we happen to share tonnes about the issue, the final message for the day was (as put by one of the Scientists there) - "It definitely will lead to lot of Social Problems"!
BJP Government views: Honorable Chief Minister of Karnataka, B S Yeddyurappa, defending the Bill said "It was aimed at protecting cows and preserve cattle in Karnataka. A number of States in the Country including Gujarat, Chhatisgarh, Madhya Pradesh, and Jammu & Kashmir, already had similar legislation". One of the BJP Leader said "There will be severe shortage of milk in Karnataka if the current rate of cow slaughter continued".
Opposition Party views: Opposition Leader Mr. Siddaramaiah termed the Bill as "draconian", "anti-secular" and "unconstitutional". He continued "Laborers in industries such as shoes, leather, belts, nail polish, films, buttons and other beef products would lose their jobs" and added "such a bill can be enacted only in Hitler's regime". JDS said "It is an anti-democratic move and Yeddyurappa Government is worse than the regime of Stalin" and branded BJP Government "communal".
Animal Activist views: "This is a welcome move by the BJP Government" said an unidentified animal activist. "Enforcing strict laws including both penalty and imprisonment, helps to keep a check on violators. Offence being made non-bailable will definitely make a difference and reduces the suffering of dumb animals", the person thinks.
Hinduism views: "It was great humiliation and embarrassment when our Sacred animal - Cow was slaughtered in inhumane ways. I wonder how people are ignorant about the medicinal benefits of Cow urine, which have been proved by research. All the byproducts of Cow; from milk to dung are considered holy. The Bill has brought a smile on thousands of faces".
Islamic views: Leaders in Congress, who are Muslims, expressed their concern - "Bill would create hatred among different Communities and would lead to a deterioration in law and order situation". "Beef, makes the bulk of our food habits. Completely banning the slaughter of Cattle and sale of Beef in Karnataka has hurt the sentiments of a Community who are also a majority in the State" they felt.
Entrepreneurs views: "There are a huge number of Customers who prefer eating beef. We can see the unhappiness in their faces when said no beef cuisines will available at the Restaurant following the cattle slaughter ban bill. This might also affect our Business adversely".

Firstly, I do not figure out the logic behind replacing present 'The Karnataka Prevention of Cow Slaughter and Cattle Preservation Act, 1964' with the proposed 'The Karnataka Prevention of Slaughter and Preservation of Cattle Bill, 2010'. It indeed is 'unacceptable' when one's eating habits are being strictly monitored under 'Law'.

Nature, intends to maintain an equilibrium amongst various species of animals through its Food Chain. In the process, Man (basically an animal) consuming Cattle (an animal too) looks like a mere part of the complex Food Chain existing in the Environment. All these Cultures, Rituals and Traditions are man-made. How fair is it to germinate the seed of 'Hatred' within ourselves on the grounds of our own creations?

Personally I feel, when a Hindu can maintain a cordial relationship with a Muslim irrespective of the fact that Cattle is sacred to himself and a source of food for the other, ample chances can be anticipated for a peaceful living. Unless we have the capability to accept, respect and let exist the diversity in Religion, Culture and Tradition - considering humans 'the highest mature form of life on earth' can easily be abandoned.

Let alone everything else aside; India being third highest in the population of Muslims (following Indonesia and Pakistan), how fair is it on our part to make such Bill a Legislation? It would not be a surprise, if the next Government chips in to say "Keeping in mind the amount of deforestation that is taking place, there is a need to seriously conserve our available natural plant resources. It can easily be achieved by making non-vegetarian a forced food habit". Well, any damn thing can be passed in the Assembly and all it takes is just a matter of few 'Crores'; ours is, anyway, a democratic Country!